’ಪಾನಮತ್ತರಾಗಿದ್ದ ಚಾಲಕ ನಾಗಪ್ಪ ಹಾಗೂ ಆತನ ಸಹೋದರನೀರಬೂದಿಹಾಳ ಗ್ರಾಮದಲ್ಲಿ ರಸ್ತೆ ಮೇಲೆ ಲಾರಿ ನಿಲ್ಲಿಸಿ ಬೇರೆಯವರೊಂದಿಗೆ ಜಗಳ ಕಾಯುತ್ತಿದ್ದರು. ಈ ವೇಳೆ ನನ್ನೊಂದಿಗೆ ಇದ್ದ ಗ್ರಾಮ ಲೆಕ್ಕಾಧಿಕಾರಿ ಮಧ್ಯಪ್ರವೇಶಿಸಿ, ವಾಹನ ಹೋಗಲು ದಾರಿ ಬಿಟ್ಟು ಲಾರಿ ನಿಲ್ಲಿಸುವಂತೆ ಹೇಳಿದರು. ಇದರಿಂದ ಕುಪಿತಗೊಂಡ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಶರ್ಟ್ ಹಿಡಿದು ಎಳೆದಾಡಿದರು. ಬಿಡಿಸಲು ಹೋದ ನನ್ನ ಮೇಲೆ ಕೈ ಮಾಡಿದರು. ಅವರು ಹಲ್ಲೆ ಮಾಡುತ್ತಾರೆ ಎಂಬ ಸುಳಿವು ಇರಲಿಲ್ಲ. ಅದೊಂದು ದಿಢೀರನೆ ನಡೆದ ಘಟನೆ‘ ಎಂದು ತಹಶೀಲ್ದಾರ್ ಸುಹಾಸ ಇಂಗಳೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.