<p>ಬೀಳಗಿ: ತಾಲ್ಲೂಕಿನ ರೊಳ್ಳಿ, ಬಾಡಗಂಡಿ, ಲಿಂಗಾಪುರ ಎಸ್.ಆರ್, ಹೆಗ್ಗೂರ, ಅರಕೇರಿ ಸೇರಿದಂತೆ ವಿವಿಧೆಡೆ ಗುರುವಾರ ಸಂಜೆ ಜೋರಾಗಿ ಸುರಿದ ಮಳೆ ಹಾಗೂ ಬೀಸಿದ ಬಿರುಗಾಳಿಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.</p>.<p>ತಾಲ್ಲೂಕಿನ ರೊಳ್ಳಿ ಗ್ರಾಮದ ಮಲ್ಲಪ್ಪ ಗಡ್ಡಿ ಅವರ ತಲೆಯ ಮೇಲೆ ಪತ್ರಾಸ್ ಮೇಲಿನ ಕಲ್ಲು ಬಿದ್ದು ತಲೆಗೆ ಗಾಯವಾಗಿದೆ. ಇದೇ ಗ್ರಾಮದ ಆನಂದ ತೋಟಗೇರ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಮರಣ ಹೊಂದಿದೆ.</p>.<p>ಬಾಡಗಂಡಿ ಗ್ರಾಮದ 12, ಅರಿಕೇರಿಯ 5, ರೊಳ್ಳಿ ಗ್ರಾಮದ 18, ಹೆಗ್ಗೂರು ಗ್ರಾಮದ 1, ಲಿಂಗಾಪುರ ಎಸ್ .ಆರ್. ಗ್ರಾಮದ 2 ವಾಸವಿರುವ ತಗಡಿನ ಶೆಡ್ಗಳ ಚಾವಣಿ ಹಾರಿಹೋಗಿವೆ.</p>.<p>ರೊಳ್ಳಿ ಗ್ರಾಮದ 10 ಹಾಗೂ ಕೊಪ್ಪ .ಎಸ್.ಕೆ ಗ್ರಾಮದ 6 ದನದ ತಗಡಿನ ಶೆಡ್ಗಳಿಗೆ ಹಾನಿಯಾಗಿವೆ.</p>.<p>ಮಳೆಯಿಂದಾಗಿ ಬೀಳಗಿ ಪಟ್ಟಣದ 1, ಕೊರ್ತಿ ಆರ್ಸಿಯಲ್ಲಿ 1 ಹಾಗೂ ಅರಕೇರಿಯಲ್ಲಿ 1 ಮನೆಗಳು ಬಿದ್ದಿವೆ.ಸುನಗ ಗ್ರಾಮದಲ್ಲಿ1.2 ಎಕರೆಯಷ್ಟು ಬಾಳೆ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್ ವಿನೋದ ಹತ್ತಳ್ಳಿ ತಿಳಿಸಿದರು.</p>.<p>ಬಿರುಗಾಳಿ ,ಮಳೆಗೆ ಅಪಾರ ಹಾನಿ ಸಂಭವಿಸಿದ್ದು ತಾಲ್ಲೂಕಿನ ಹಲವೆಡೆ ಮರಗಳ ಕೊಂಬೆಗಳು ಮುರಿದು ರಸ್ತೆ, ಕಟ್ಟಡ ಹಾಗೂ ವಾಹನಗಳ ಮೇಲೆ ಬಿದ್ದು ಗುರುವಾರ ರಾತ್ರಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಪೊಲೀಸ್ ಇಲಾಖೆಯ ಕಾರ್ಯಾಚರಣೆಯಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.</p>.<p>ತಾಲ್ಲೂಕಿನಲ್ಲಿ ಒಟ್ಟು 200ಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳು ಬಿರುಗಾಳಿಗೆ ಮುರಿದು ಬಿದ್ದಿದ್ದು,ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬೀಳಗಿ ಹೆಸ್ಕಾ ಇಇ ಮಂಜುನಾಥ ಬೋಕಿ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-19-462199358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀಳಗಿ: ತಾಲ್ಲೂಕಿನ ರೊಳ್ಳಿ, ಬಾಡಗಂಡಿ, ಲಿಂಗಾಪುರ ಎಸ್.ಆರ್, ಹೆಗ್ಗೂರ, ಅರಕೇರಿ ಸೇರಿದಂತೆ ವಿವಿಧೆಡೆ ಗುರುವಾರ ಸಂಜೆ ಜೋರಾಗಿ ಸುರಿದ ಮಳೆ ಹಾಗೂ ಬೀಸಿದ ಬಿರುಗಾಳಿಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.</p>.<p>ತಾಲ್ಲೂಕಿನ ರೊಳ್ಳಿ ಗ್ರಾಮದ ಮಲ್ಲಪ್ಪ ಗಡ್ಡಿ ಅವರ ತಲೆಯ ಮೇಲೆ ಪತ್ರಾಸ್ ಮೇಲಿನ ಕಲ್ಲು ಬಿದ್ದು ತಲೆಗೆ ಗಾಯವಾಗಿದೆ. ಇದೇ ಗ್ರಾಮದ ಆನಂದ ತೋಟಗೇರ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಮರಣ ಹೊಂದಿದೆ.</p>.<p>ಬಾಡಗಂಡಿ ಗ್ರಾಮದ 12, ಅರಿಕೇರಿಯ 5, ರೊಳ್ಳಿ ಗ್ರಾಮದ 18, ಹೆಗ್ಗೂರು ಗ್ರಾಮದ 1, ಲಿಂಗಾಪುರ ಎಸ್ .ಆರ್. ಗ್ರಾಮದ 2 ವಾಸವಿರುವ ತಗಡಿನ ಶೆಡ್ಗಳ ಚಾವಣಿ ಹಾರಿಹೋಗಿವೆ.</p>.<p>ರೊಳ್ಳಿ ಗ್ರಾಮದ 10 ಹಾಗೂ ಕೊಪ್ಪ .ಎಸ್.ಕೆ ಗ್ರಾಮದ 6 ದನದ ತಗಡಿನ ಶೆಡ್ಗಳಿಗೆ ಹಾನಿಯಾಗಿವೆ.</p>.<p>ಮಳೆಯಿಂದಾಗಿ ಬೀಳಗಿ ಪಟ್ಟಣದ 1, ಕೊರ್ತಿ ಆರ್ಸಿಯಲ್ಲಿ 1 ಹಾಗೂ ಅರಕೇರಿಯಲ್ಲಿ 1 ಮನೆಗಳು ಬಿದ್ದಿವೆ.ಸುನಗ ಗ್ರಾಮದಲ್ಲಿ1.2 ಎಕರೆಯಷ್ಟು ಬಾಳೆ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್ ವಿನೋದ ಹತ್ತಳ್ಳಿ ತಿಳಿಸಿದರು.</p>.<p>ಬಿರುಗಾಳಿ ,ಮಳೆಗೆ ಅಪಾರ ಹಾನಿ ಸಂಭವಿಸಿದ್ದು ತಾಲ್ಲೂಕಿನ ಹಲವೆಡೆ ಮರಗಳ ಕೊಂಬೆಗಳು ಮುರಿದು ರಸ್ತೆ, ಕಟ್ಟಡ ಹಾಗೂ ವಾಹನಗಳ ಮೇಲೆ ಬಿದ್ದು ಗುರುವಾರ ರಾತ್ರಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಪೊಲೀಸ್ ಇಲಾಖೆಯ ಕಾರ್ಯಾಚರಣೆಯಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.</p>.<p>ತಾಲ್ಲೂಕಿನಲ್ಲಿ ಒಟ್ಟು 200ಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳು ಬಿರುಗಾಳಿಗೆ ಮುರಿದು ಬಿದ್ದಿದ್ದು,ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬೀಳಗಿ ಹೆಸ್ಕಾ ಇಇ ಮಂಜುನಾಥ ಬೋಕಿ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-19-462199358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>