<p><strong>ಬೀಳಗಿ</strong>: ತಾಲ್ಲೂಕಿನ ಹೊನ್ನಿಹಾಳ ಗ್ರಾಮದ ಯುವ ರೈತ ಶ್ರೀಶೈಲ ಭೀಮಪ್ಪ ಜೈನಾಪುರ ಗುಣಮಟ್ಟದ ದಾಳಿಂಬೆ ಬೆಳೆದು ಮಾದರಿಯಾಗಿದ್ದಾರೆ.</p>.<p>ಮೊದಲು ಶೇಂಗಾ ಸಜ್ಜಿ ಬೆಳೆದು ಕೈ ಸುಟ್ಟುಕೊಂಡಿದ್ದ ಇವರು 35 ಗುಂಟೆ ತೋಟದಲ್ಲಿ ಮಹಾರಾಷ್ಟ್ರದ ಕೇಸರ್ ದಾಳಿಂಬೆಯನ್ನು ಬೆಳೆದು ಉತ್ತಮ ಫಸಲು ಪಡೆದಿದ್ದಾರೆ.</p>.<p>1 ಎಕರೆ ಜಮೀನಿನಲ್ಲಿ 35 ಗುಂಟೆ ದಾಳಿಂಬೆ ಹಣ್ಣು ಬೆಳೆಯಲು ಮೊದಲು ಭೂಮಿಯನ್ನು ಟ್ರ್ಯಾಕ್ಟರ್ ಸಹಾಯದಿಂದ ಹದ ಮಾಡಿಸಿದರು. ನಂತರ ಕೊಟ್ಟಿಗೆ ಗೊಬ್ಬರವನ್ನು ಸಾಲುಗಳಲ್ಲಿ ಹಾಕಿದರು. ಸಾಲಿನಿಂದ ಸಾಲಿಗೆ 12 ಅಡಿ, ಗಿಡದಿಂದ ಗಿಡಕ್ಕೆ 8 ಅಡಿಗೆ ಒಂದರಂತೆ ದಾಳಿಂಬೆ ಸಸಿ ನೆಟ್ಟಿದ್ದಾರೆ. 35 ಗುಂಟೆ ಜಮೀನಿನಲ್ಲಿ 294 ಸಸಿಗಳನ್ನು ಹಾಕಿ, ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಎರಡೂವರೆ ವರ್ಷದಲ್ಲಿ ಫಸಲು ಕೈಗೆ ಬಂದಿದೆ.</p>.<p><strong>ಕೃಷಿ ವಿಧಾನ</strong>: ಮಣ್ಣು ಮಾಡಿ ಸಸಿ ನೆಟ್ಟು ಸಸಿ ಸುತ್ತ ಮಣ್ಣಿನಲ್ಲಿ ಗೊಬ್ಬರ ಮುಚ್ಚಿ ನಂತರ ನೀರನ್ನು ಹನಿ ನೀರಾವರಿಯ ಮೂಲಕ ಹಾಯಿಸಬೇಕು. ಎರಡು ತಿಂಗಳಿಗೊಮ್ಮೆ ಸಸಿಗಳ ಸುತ್ತಲೂ ಕಳೆ ತೆಗೆದು, ಸಾಲುಗಳ ಮಧ್ಯದಲ್ಲಿ ಟ್ರ್ಯಾಕ್ಟರ್ ಮೂಲಕ ಹರಗಿ ಗೊಬ್ಬರ ತಿರುವಿ ಹಾಕಿದಾಗ ಬೇರಿಗೆ ಮಣ್ಣು ಸಡಿಲಾಗಿ ಪೋಶಕಾಂಶಗಳು ಸಸಿಗೆ ಸಿಗುತ್ತವೆ. ಇದರಿಂದ ಸಸಿಗಳು ವಿಸ್ತಾರವಾಗಿ ಬೆಳೆಯುತ್ತವೆ.</p>.<p>ದಾಳಿಂಬೆ ಗಿಡಗಳ ಜೊತೆಗೆ 200 ಟೊಮೆಟೊ, 200 ಬದನೆಗಿಡ, 30 ತೆಂಗು ಗಿಡಗಳನ್ನು ಕೂಡ ಬೆಳೆದು, ಜವಾರಿ ಹಸುಗಳ ಸಾಕಣೆ ಮಾಡಿ ಅವುಗಳಿಂದ ಆದಾಯ ಪಡೆಯುತ್ತಿದ್ದಾರೆ.</p>.<p>ದಾಳಿಂಬೆ ಇಳುವರಿ, ಆದಾಯ: ‘35 ಗುಂಟೆ ಜಮೀನಿನಲ್ಲಿ ಒಂದು ಗಿಡಕ್ಕೆ 25 ಕೆ.ಜಿಯಂತೆ 294 ಗಿಡಗಳಿಗೆ 7,350 ಕೆ.ಜಿ ಇಳುವರಿ ಬರುತ್ತದೆ. ದಾಳಿಂಬೆ ಹಣ್ಣನ್ನು ಹೈದರಾಬಾದ್ ಮಾರುಕಟ್ಟೆಗೆ ಕಳುಹಿಸುತ್ತೇವೆ. 294 ಗಿಡಗಳಿಗೆ ₹8,50,000 ಆದಾಯ ದೊರೆಯುತ್ತದೆ’ ಎಂದು ಅವರು ತಿಳಿಸಿದರು.</p>.<p>ಕೇವಲ 9ನೇ ತರಗತಿಯವರೆಗೆ ಶಾಲೆ ಕಲಿತಿರುವ ಶ್ರೀಶೈಲ ಉದ್ಯೋಗ ಅರಸಿಕೊಂಡು ಹೋಗಿ ಮಂಗಳೂರು ಕೆ.ಎಂ.ಎಫ್ ನಲ್ಲಿ ಹಾಲಿನ ಟ್ಯಾಂಕರ್ ವಾಹನ ಚಲಾವಣೆ ಮಾಡುತ್ತಿದ್ದರು. ತಂದೆಯ ಮರಣದ ನಂತರ ಮರಳಿ ಗ್ರಾಮಕ್ಕೆ ಆಗಮಿಸಿ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದು ಲಾಭ ಪಡೆದಿದ್ದಾರೆ. ಪತ್ನಿ ಸುಧಾ ಅವರು ಕೃಷಿಯಲ್ಲಿ ಸಾಥ್ ನೀಡುತ್ತಿರುವುದನ್ನು ಪ್ರಜಾವಾಣಿಗೆ ತಿಳಿಸಿದರು.</p>.<div><blockquote>ದಾಳಿಂಬೆ ಬೆಳೆದರೆ ತುಂಬಾ ಲಾಭ ಇದೆ. ಆದರೆ ಮಧ್ಯವರ್ತಿಗಳೇ ಹೆಚ್ಚು ಲಾಭಪಡೆಯುತ್ತಿದ್ದಾರೆ. ಸರ್ಕಾರ ಸೂಕ್ತ ಮಾರುಕಟ್ಟೆ ಒದಗಿಸಬೇಕು.</blockquote><span class="attribution">– ಶ್ರೀಶೈಲ ಜೈನಾಪುರ, ಯುವ ರೈತ, ಹೊನ್ನಿಹಾಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ</strong>: ತಾಲ್ಲೂಕಿನ ಹೊನ್ನಿಹಾಳ ಗ್ರಾಮದ ಯುವ ರೈತ ಶ್ರೀಶೈಲ ಭೀಮಪ್ಪ ಜೈನಾಪುರ ಗುಣಮಟ್ಟದ ದಾಳಿಂಬೆ ಬೆಳೆದು ಮಾದರಿಯಾಗಿದ್ದಾರೆ.</p>.<p>ಮೊದಲು ಶೇಂಗಾ ಸಜ್ಜಿ ಬೆಳೆದು ಕೈ ಸುಟ್ಟುಕೊಂಡಿದ್ದ ಇವರು 35 ಗುಂಟೆ ತೋಟದಲ್ಲಿ ಮಹಾರಾಷ್ಟ್ರದ ಕೇಸರ್ ದಾಳಿಂಬೆಯನ್ನು ಬೆಳೆದು ಉತ್ತಮ ಫಸಲು ಪಡೆದಿದ್ದಾರೆ.</p>.<p>1 ಎಕರೆ ಜಮೀನಿನಲ್ಲಿ 35 ಗುಂಟೆ ದಾಳಿಂಬೆ ಹಣ್ಣು ಬೆಳೆಯಲು ಮೊದಲು ಭೂಮಿಯನ್ನು ಟ್ರ್ಯಾಕ್ಟರ್ ಸಹಾಯದಿಂದ ಹದ ಮಾಡಿಸಿದರು. ನಂತರ ಕೊಟ್ಟಿಗೆ ಗೊಬ್ಬರವನ್ನು ಸಾಲುಗಳಲ್ಲಿ ಹಾಕಿದರು. ಸಾಲಿನಿಂದ ಸಾಲಿಗೆ 12 ಅಡಿ, ಗಿಡದಿಂದ ಗಿಡಕ್ಕೆ 8 ಅಡಿಗೆ ಒಂದರಂತೆ ದಾಳಿಂಬೆ ಸಸಿ ನೆಟ್ಟಿದ್ದಾರೆ. 35 ಗುಂಟೆ ಜಮೀನಿನಲ್ಲಿ 294 ಸಸಿಗಳನ್ನು ಹಾಕಿ, ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಎರಡೂವರೆ ವರ್ಷದಲ್ಲಿ ಫಸಲು ಕೈಗೆ ಬಂದಿದೆ.</p>.<p><strong>ಕೃಷಿ ವಿಧಾನ</strong>: ಮಣ್ಣು ಮಾಡಿ ಸಸಿ ನೆಟ್ಟು ಸಸಿ ಸುತ್ತ ಮಣ್ಣಿನಲ್ಲಿ ಗೊಬ್ಬರ ಮುಚ್ಚಿ ನಂತರ ನೀರನ್ನು ಹನಿ ನೀರಾವರಿಯ ಮೂಲಕ ಹಾಯಿಸಬೇಕು. ಎರಡು ತಿಂಗಳಿಗೊಮ್ಮೆ ಸಸಿಗಳ ಸುತ್ತಲೂ ಕಳೆ ತೆಗೆದು, ಸಾಲುಗಳ ಮಧ್ಯದಲ್ಲಿ ಟ್ರ್ಯಾಕ್ಟರ್ ಮೂಲಕ ಹರಗಿ ಗೊಬ್ಬರ ತಿರುವಿ ಹಾಕಿದಾಗ ಬೇರಿಗೆ ಮಣ್ಣು ಸಡಿಲಾಗಿ ಪೋಶಕಾಂಶಗಳು ಸಸಿಗೆ ಸಿಗುತ್ತವೆ. ಇದರಿಂದ ಸಸಿಗಳು ವಿಸ್ತಾರವಾಗಿ ಬೆಳೆಯುತ್ತವೆ.</p>.<p>ದಾಳಿಂಬೆ ಗಿಡಗಳ ಜೊತೆಗೆ 200 ಟೊಮೆಟೊ, 200 ಬದನೆಗಿಡ, 30 ತೆಂಗು ಗಿಡಗಳನ್ನು ಕೂಡ ಬೆಳೆದು, ಜವಾರಿ ಹಸುಗಳ ಸಾಕಣೆ ಮಾಡಿ ಅವುಗಳಿಂದ ಆದಾಯ ಪಡೆಯುತ್ತಿದ್ದಾರೆ.</p>.<p>ದಾಳಿಂಬೆ ಇಳುವರಿ, ಆದಾಯ: ‘35 ಗುಂಟೆ ಜಮೀನಿನಲ್ಲಿ ಒಂದು ಗಿಡಕ್ಕೆ 25 ಕೆ.ಜಿಯಂತೆ 294 ಗಿಡಗಳಿಗೆ 7,350 ಕೆ.ಜಿ ಇಳುವರಿ ಬರುತ್ತದೆ. ದಾಳಿಂಬೆ ಹಣ್ಣನ್ನು ಹೈದರಾಬಾದ್ ಮಾರುಕಟ್ಟೆಗೆ ಕಳುಹಿಸುತ್ತೇವೆ. 294 ಗಿಡಗಳಿಗೆ ₹8,50,000 ಆದಾಯ ದೊರೆಯುತ್ತದೆ’ ಎಂದು ಅವರು ತಿಳಿಸಿದರು.</p>.<p>ಕೇವಲ 9ನೇ ತರಗತಿಯವರೆಗೆ ಶಾಲೆ ಕಲಿತಿರುವ ಶ್ರೀಶೈಲ ಉದ್ಯೋಗ ಅರಸಿಕೊಂಡು ಹೋಗಿ ಮಂಗಳೂರು ಕೆ.ಎಂ.ಎಫ್ ನಲ್ಲಿ ಹಾಲಿನ ಟ್ಯಾಂಕರ್ ವಾಹನ ಚಲಾವಣೆ ಮಾಡುತ್ತಿದ್ದರು. ತಂದೆಯ ಮರಣದ ನಂತರ ಮರಳಿ ಗ್ರಾಮಕ್ಕೆ ಆಗಮಿಸಿ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದು ಲಾಭ ಪಡೆದಿದ್ದಾರೆ. ಪತ್ನಿ ಸುಧಾ ಅವರು ಕೃಷಿಯಲ್ಲಿ ಸಾಥ್ ನೀಡುತ್ತಿರುವುದನ್ನು ಪ್ರಜಾವಾಣಿಗೆ ತಿಳಿಸಿದರು.</p>.<div><blockquote>ದಾಳಿಂಬೆ ಬೆಳೆದರೆ ತುಂಬಾ ಲಾಭ ಇದೆ. ಆದರೆ ಮಧ್ಯವರ್ತಿಗಳೇ ಹೆಚ್ಚು ಲಾಭಪಡೆಯುತ್ತಿದ್ದಾರೆ. ಸರ್ಕಾರ ಸೂಕ್ತ ಮಾರುಕಟ್ಟೆ ಒದಗಿಸಬೇಕು.</blockquote><span class="attribution">– ಶ್ರೀಶೈಲ ಜೈನಾಪುರ, ಯುವ ರೈತ, ಹೊನ್ನಿಹಾಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>