ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಕಾರ್ಯದಿಂದ ಜನ್ಮ ಸಾರ್ಥಕ

‘ಮಲ್ಲಿಕಾರ್ಜುನ ದೇವರ ಕಂಬಿ ಐದೇಸಿ ಮಹೋತ್ಸವದಲ್ಲಿ ಬಸವರಾಜೇಂದ್ರ ಸ್ವಾಮೀಜಿ
Last Updated 29 ಮಾರ್ಚ್ 2018, 6:37 IST
ಅಕ್ಷರ ಗಾತ್ರ

ಪಾಲಬಾವಿ: ‘ಧರ್ಮವನ್ನು ನಾವು ರಕ್ಷಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಉತ್ತಮ ಕಾರ್ಯದಲ್ಲಿ ತೊಡಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಅಚಲೇರಿ-ಜಿಡಗಾ ಮಠದ ಪೀಠಾಧಿಪತಿ ಬಸವರಾಜೇಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಬುಧವಾರ ನಡೆದ ‘ಮಲ್ಲಿಕಾರ್ಜುನ ದೇವರ ಕಂಬಿ ಐದೇಸಿ ಮಹೋತ್ಸವ’ದಲ್ಲಿ ಅವರು ಮಾತನಾಡಿದರು.‘ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಪಡಸಾವಳಿ ಗ್ರಾಮದಲ್ಲಿ 1912ರಲ್ಲಿ ಲಿಂ.ಬಸವಣ್ಣಯ್ಯ ಮುತ್ತಾ ಶರಣಬಸವೇಶ್ವರ ಪುರಾಣವನ್ನು ಪ್ರಾರಂಭಿಸಿದ್ದರು. ಅಂದು ಆರಂಭಗೊಂಡ ಪುರಾಣ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಶತಮಾನೋತ್ಸವ ಕಂಡಿದೆ’ ಎಂದರು.

‘ಇದೇ 14ರಿಂದ ಶರಣಬಸವೇಶ್ವರ ಸಂಚಾರಿ ಪುರಾಣ ಹಾಗೂ ಭಿಕ್ಷಾಯಾತ್ರೆ ಆರಂಭಿಸಿದ್ದು, ಪಾಲಬಾವಿ ಗ್ರಾಮದಲ್ಲಿ ಇದೇ 31 ಹಾಗೂ ಏ. 1ರಂದು ನಡೆಸಲಾಗುವುದು. ಏ.20ರಂದು ಪಡಸಾವಳಿ ಗ್ರಾಮದಲ್ಲಿ ಶರಣ ಬಸವೇಶ್ವರ ಪುರಾಣದ ಶತಮಾನೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯ
ಕ್ರಮ ಜರುಗಲಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂಜಯ ತೇಗೂರ, ಮುಖಂಡರಾದ ಮಹಾದೇವ ಮರಡಿ, ರಾಮಪ್ಪ ಕಾಡಶೆಟ್ಟಿ, ಭೀಮಪ್ಪ ಮರಡಿ, ಪರಪ್ಪ ಗೋಡಿ, ಶಿವಪ್ಪ ಕಾಡಶೆಟ್ಟಿ, ಸಂಗಪ್ಪ ತುಪ್ಪದ, ಈರಪ್ಪ ಮೂಡಲಗಿ, ರಾಮಪ್ಪ ತೇಗೂರ, ಗಿರೇಪ್ಪ ಬಳಗಾರ, ಸಂಗಪ್ಪ ಸೈದಾಪೂರ, ಶಿವಬಸವ ಕಾಪಸಿ ಇದ್ದರು.

ಸಿದ್ಧಾರೂಢ ಮಠ: ಜಾತ್ರೆ 31ರಿಂದ ಪಾಲಬಾವಿ ಸಮೀಪದ ಹಂದಿಗುಂದದ ನವನಗರದಲ್ಲಿರುವ ಸಿದ್ಧಾರೂಢ ಮಠದಲ್ಲಿ ಇದೇ 31 ಹಾಗೂ ಏ.1ರಂದು 8ನೇ ವರ್ಷದ  ಜಾತ್ರಾ ಮಹೋತ್ಸವ ಹಾಗೂ ಪಾರಮಾರ್ತಿಕ ಮಹೋತ್ಸವ ಆಯೋಜಿಸಲಾಗಿದೆ.ಸಿದ್ದೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹಾಗೂ ರಕ್ಷಿ-ಶಿರಗಾಂವ ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಾದಾಮಿ ಕಾಟಾಪೂರ ಪೂರ್ಣಾನಂದ ಮಠದ ನೀರಾಮಯಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಗುರುಲಿಂಗಯ್ಯ ಸ್ವಾಮೀಜಿ ಮಠದ ಗುರು ಲಿಂಗಯ್ಯ ಸ್ವಾಮೀಜಿ ಹಿರೇಮಠ ಹಾಗೂ ಪಾಲಬಾವಿಯ ಶಾಂತ-ಮಲ್ಲ ಕುಟೀರದ ವೀರಯ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಜಾನಪದ ಕಲಾವಿದ ವೀರಭದ್ರಪ್ಪ ತೇರದಾಳ ಮುಖ್ಯಅತಿಥಿಯಾಗಿ ಭಾಗವಹಿಸುವರು.

31ರಂದು ರಾತ್ರಿ 8ಕ್ಕೆ ಶಿವಾನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ‘ಮಾನವ ಜನ್ಮದ ಪ್ರಾಮುಖ್ಯತೆ ವಿಷಯ’ ಕುರಿತು ಪ್ರವಚನ ನಡೆಯಲಿದೆ. ವೀರಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ರಾತ್ರಿ 10ಕ್ಕೆ ಸಿದ್ದೇಶ್ವರ ಭಜನಾ ಮಂಡಳದಿಂದ ಭಜನಾ ಕಾರ್ಯಕ್ರಮವಿದೆ. 1ರಂದು ಬೆಳಿಗ್ಗೆ ಸಿದ್ಧಾರೂಢ ಕತೃ ಗದ್ದುಗೆಗೆ ಅಭಿಷೇಕ ಹಾಗೂ ಸಿದ್ಧಾರೂಢರ ಪಂಚಲೋಹ ಮೂರ್ತಿಗೆ ವಿಶೇಷ ಪೂಜೆ ನೆರವೇರಲಿದೆ. 8ಕ್ಕೆ ಹಾಲಸಿದ್ದೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ಜರುಗಲಿದೆ. 10ಕ್ಕೆ ತಾಯಂದಿರಿಗೆ ಉಡಿ ತುಂಬಲಾಗುವುದು. ಅನ್ನಪ್ರಸಾದ ವಿತರಣೆ ಇರಲಿದೆಎಂದು ಪ್ರಕಟಣೆ ತಿಳಿಸಿದೆ.

ಪಾಲಬಾವಿ: ಗ್ರಾಮದ ಲೋಕನ್ನವರ ತೋಟದಲ್ಲಿ ಏಳು ಮಕ್ಕಳತಾಯಿ ಜಾತ್ರಾ ಮಹೋತ್ಸವ ಏ. 2 ಹಾಗೂ 3ರಂದು ನಡೆಯಲಿದೆ.2ರಂದು ಬೆಳಿಗ್ಗೆ ಬಸವಣ್ಣ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿದೆ. ಸಂಜೆ 4ಕ್ಕೆ ಪೂರ್ಣಕುಂಭ ಮೇಳದೊಂದಿಗೆ ಹಳ್ಳೂರ ಹಾಗೂ ಪಾಲಬಾವಿ ಗ್ರಾಮಗಳ ಲಕ್ಷ್ಮೀದೇವಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 6ಕ್ಕೆ ಏಳು ಮಕ್ಕಳತಾಯಿ ದೇವಸ್ಥಾನ ತಲುಪಲಿದೆ. ಅಥಣಿ ತಾಲ್ಲೂಕು ಕಿರಣಗಿ ಗ್ರಾಮದ ಪ್ರಭಾವತಿ ಭಜನಾ ಮಂಡಳ ಹಾಗೂ ಗೋಕಾಕ ತಾಲ್ಲೂಕು ಹಳ್ಳೂರ ಗ್ರಾಮದ ಸಿದ್ಧಾರೂಢ ಭಜನಾ ಮಂಡಳದಿಂದ ಭಜನಾ ಕಾರ್ಯಕ್ರಮವಿದೆ. 3ರಂದು ತಾಯಂದಿರಿಗೆ ಉಡಿ ತುಂಬಲಾಗುವುದು. ಬಾಗಲಕೋಟೆ ಜಿಲ್ಲೆ ಅಡಹಳ್ಳಿ ಗ್ರಾಮದ ಅಡವಿಸಿದ್ದೇಶ್ವರ ಗಾಯನ ಸಂಘ ಹಾಗೂ ಗೋಕಾಕ ತಾಲ್ಲೂಕು ಹಳ್ಳೂರದ ಲಕ್ಷ್ಮೀದೇವಿ ಗಾಯನ ಸಂಘದಿಂದ ಚೌಡಕಿ ಪದಗಳ ಹಾಡುಗಾರಿಕೆ ನಡೆಯಲಿದೆ. ಅನ್ನಸಂತರ್ಪಣೆ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT