ತಾಲ್ಲೂಕಿನ ಮಧುರಖಂಡಿಯ ಬಿಸ್ಮಿಲ್ಲಾ ದಸ್ತಗೀರಸಾಬ ನಾಗರಾಳ(28) ಜುಲೈ 9 ರಂದು ಮನೆಯಲ್ಲಿ ಬೆಂಕಿ ಹಚ್ಚಿಕಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಹಚ್ಚಿಕೊಂಡ ಬೆಂಕಿ ಮಕ್ಕಳಿಗೂ ತಗಲಿದ್ದರಿಂದ ಯಾಸಿದಾ(6), ಹಾಗೂ ಸನಾ(4) ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮಹಿಳೆಯ ಪುತ್ರ 8 ವರ್ಷದ ಸಮೀರ್ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.