ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ತೊಲೆ ಬಂಗಾರ, 19 ತೊಲೆ ಬೆಳ್ಳಿ ಆಭರಣ ವಶ

ಕಮಲಾಪುರ ಪೊಲೀಸರಿಂದ ಓರ್ವ ಯುವಕನ ಬಂಧನ
Last Updated 25 ಅಕ್ಟೋಬರ್ 2022, 13:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಪೊಲೀಸರು ಓರ್ವ ಯುವಕನನ್ನು ಬಂಧಿಸಿ, ಆತನಿಂದ ಒಂದು ತೊಲೆ ಬಂಗಾರ, 19 ತೊಲೆ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಮಲಾಪುರದ ಕುಂಟೆ ಏರಿಯಾದ ಶಿವಕುಮಾರ ಶೇಖರಪ್ಪ (21) ಬಂಧನಕ್ಕೆ ಒಳಗಾದ ಯುವಕ. ಯುವಕನಿಂದ 5 ಗ್ರಾಮ ಒಂದು ಜೊತೆ ಬಂಗಾರದ ಕಿವಿಯ ಓಲೆ, 3 ಗ್ರಾಂ ಒಂದು ಜೊತೆ ಮಕ್ಕಳ ಚಿನ್ನದ ಕಿವಿಯೋಲೆ, 2 ಗ್ರಾಂ ಆರು ಮಕ್ಕಳ ಸಣ್ಣ ಉಂಗುರ, 5 ತೊಲೆಯ ಒಂದು ಜೊತೆ ಬೆಳ್ಳಿ ಕಾಲು ಚೈನ್‌, 3 ತೊಲೆಯ ಒಂದು ಬೆಳ್ಳಿ ಕಡಗ, 1 ತೊಲೆ ಕೊರಳಿನ ಬೆಳ್ಳಿ ಚೈನ್‌, 4 ತೊಲೆಯ ಎರಡು ಬೆಳ್ಳಿ ಉಂಗುರಗಳು, 1 ತೊಲೆ ಬೆಳ್ಳಿ ಲಿಂಗದ ಕಾಯಿ, 5 ತೊಲೆ ದೊಡ್ಡ ಬೆಳ್ಳಿ ಲಿಂಗದ ಕಾಯಿ ವಶಪಡಿಸಿಕೊಂಡಿದ್ದಾರೆ.

ಕಮಲಾಪುರದ 11ನೇ ವಾರ್ಡಿನಲ್ಲಿ ಸುಶೀಲಮ್ಮ ಎಂಬುವರ ಮನೆಯಲ್ಲಿ ಬಾಡಿಗೆಯಲ್ಲಿರುವ ಜಿ.ಕೆ. ರೂಪ ಅವರು ಕುಟುಂಬ ಸದಸ್ಯರೊಂದಿಗೆ ಸೆ. 30ರಂದು ಮಾವನ ಮನೆಗೆ ಹೋಗಿದ್ದರು. ಅದೇ ದಿನ ರಾತ್ರಿ ಕಳ್ಳತನವಾಗಿತ್ತು. ಈ ಕುರಿತು ಅವರು ಕಮಲಾಪುರ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದರು. ಅವರ ದೂರಿನ ಮೇರೆಗೆ ಪಿಎಸ್‌ಐ ಜಯಲಕ್ಷ್ಮಿ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಗಫೂರ್‌ ಸಾಬ್‌, ಕಾನ್‌ಸ್ಟೆಬಲ್‌ಗಳಾದ ಹರೀಶ, ಪಿ.ಸಿ. ಮಹಾಂತೇಶ, ಬಸವರಾಜ ಮೇಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT