ಬಲಕುಂದಿ ಗ್ರಾಮದ ಗುಡ್ಡದ ಮೇಲೆ ಇರುವ ಶಂಕರಪ್ಪ ತಾತ ದೇವಸ್ಥಾನದಲ್ಲಿ ನಿತ್ಯ ಪೂಜೆ ಮಾಡುತ್ತಿದ್ದರು. ದೇವರು ನಾಲಿಗೆ ಕೇಳಿದ ಎನ್ನುತ್ತ ನಾಲಿಗೆಯನ್ನೇ ಕತ್ತರಿಸಿ ಕೊಂಡಿದ್ದಾರೆ. ಇದನ್ನು ಸಂಜ್ಞೆ ಮಾಡಿ ಮನೆಯವರಿಗೆ ತಿಳಿಸಿದರು. ಕುಟುಂಬಸ್ಥರು ನಾಲಿಗೆ ಹುಡುಕಿ, ತೆಕ್ಕಲಕೋಟೆ ಆಸ್ಪತ್ರೆಗೆ ಧಾವಿಸಿದ್ದಾರೆ. ಚಿಕಿತ್ಸೆಗೂ ಮುಂಚೆಯೇ ಓಡಿ ಹೋಗಿದ್ದ ಅವರನ್ನು ಮನೆಯವರು ಬಳ್ಳಾರಿಯ ವಿಮ್ಸ್ ಗೆ ದಾಖಲಿಸಿದರು.