‘ಅ. 15ರಂದು ಮಹೇಶ್ ಅವರ ಜನ್ಮದಿನವಿದೆ. ಶುಕ್ರವಾರ ಅನಾಥಾಶ್ರಮಕ್ಕೆ ಬಂದು ಅವರ 9 ತಿಂಗಳ ವೇತನದ ಹಣ ನೀಡಿದರು. ಮಕ್ಕಳಿಗೆ ಏನು ಬೇಕೆಂದು ಕೇಳಿದಾಗ, ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸುವಂತೆ ಕೋರಿದರು. ಅವರು ತಕ್ಷಣವೇ ಒಪ್ಪಿಕೊಂಡು ಮಕ್ಕಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು’ ಎಂದು ಅನಾಥಾಶ್ರಮದ ಗಾಳೆಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.