<p><strong>ಬಳ್ಳಾರಿ</strong>: ‘ನಾವಾಡುವ ಭಾಷೆಯು ಬರವಣಿಗೆಗೆ ನೈಜತೆ ನೀಡುತ್ತದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಅಮರೇಶ ನುಗಡೋಣಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ‘ಸಂಗಂ ಸಾಹಿತ್ಯ ಪುರಸ್ಕಾರ’ ಮತ್ತು ದ್ರಾವಿಡ ಬಳಗ ಸರಣಿಯ ಕವಿಗೋಷ್ಠಿಯಲ್ಲಿ ಅವರು ಭಾನುವಾರ ಮಾತನಾಡಿದರು.</p>.<p>‘ಗ್ರಾಮ್ಯ ಭಾಷೆಯನ್ನು ಸಾಹಿತ್ಯಿಕ ಭಾಷೆಯಾಗಿ ಬೇಂದ್ರೆ, ದೇವನೂರು ಮಹಾದೇವ, ವಚನಕಾರರು ಹಾಗೂ ಜಾನಪದೀಯರು ಚೆನ್ನಾಗಿ ಬಳಸಿದ್ದಾರೆ’ ಎಂದು ನಿದರ್ಶನ ಸಹಿತ ಮಾತನಾಡಿದರು.</p>.<p>ಪ್ರೊ.ಅಮರೇಶ ನುಗಡೋಣಿ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಪಲ್ಲವ ವೆಂಕಟೇಶ್, ಟಿ. ಎಸ್ ಗೊರವರ ಹಾಗೂ ಚೈತ್ರ ಭಾಗವಹಿಸಿದ್ದರು.</p>.<p>ಎರಡೂ ಭಾಷೆಗೆ ಸಾಹಿತ್ಯಿಕ ಇತಿಹಾಸ: ‘ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಕನ್ನಡ ತೆಲುಗಿಗೆ ಸಾವಿರಾರು ವರ್ಷಗಳ ಸಾಹಿತ್ಯಿಕ ಹಾಗೂ ಶಾಸನ ಪರಂಪರೆ ಇದೆ’ ಎಂದು ಕರ್ನೂಲು ಸಾಹಿತಿ ಮಾರುತಿ ಪೌರೋಹಿತಂ ಹೇಳಿದರು.</p>.<p>ಕಾರ್ಯಕ್ರಮದ ಕಥಾ ಸಮಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ತೆಲುಗಿನ ಮೇರು ಕವಿಗಳಾದ ನನ್ನಯ್ಯ, ತಿಕ್ಕಣ್ಣ ಹಾಗೂ ಶ್ರೀನಾಥರಂತೆ ಕನ್ನಡದ ಪಂಪ, ರನ್ನ ಕುವೆಂಪು ಮೊದಲಾದ ಮಹನೀಯರು ಶಿಖರಪ್ರಾಯರು’ ಎಂದು ನೆನೆಸಿದರು.</p>.<p>‘ಎರಡೂ ಭಾಷೆಗಳ ಭಕ್ತಿ, ಜಾನಪದ, ಅಧುನಿಕ, ಬಂಡಾಯ ಸಾಹಿತ್ಯ ಪರಂಪರೆ ವಿಶಿಷ್ಟವಾಗಿದೆ. ಅಲ್ಲದೆ ಸಂಗೀತ, ನಾಟಕ, ಸಿನಿಮಾ ರಂಗಭೂಮಿಗೆ ಅಪಾರ ಕೊಡುಗೆ ನೀಡುತ್ತಿವೆ. ಇಲ್ಲಿನ ಪ್ರಾದೇಶಿಕ ಉಪಭಾಷೆಗಳಲ್ಲಿ ವೈವಿಧ್ಯತೆ ಇದೆ’ ಎಂದು ಭಾಷಾ ವಿಶೇಷತೆ ಕೊಂಡಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-25-1238964988</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ‘ನಾವಾಡುವ ಭಾಷೆಯು ಬರವಣಿಗೆಗೆ ನೈಜತೆ ನೀಡುತ್ತದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಅಮರೇಶ ನುಗಡೋಣಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ‘ಸಂಗಂ ಸಾಹಿತ್ಯ ಪುರಸ್ಕಾರ’ ಮತ್ತು ದ್ರಾವಿಡ ಬಳಗ ಸರಣಿಯ ಕವಿಗೋಷ್ಠಿಯಲ್ಲಿ ಅವರು ಭಾನುವಾರ ಮಾತನಾಡಿದರು.</p>.<p>‘ಗ್ರಾಮ್ಯ ಭಾಷೆಯನ್ನು ಸಾಹಿತ್ಯಿಕ ಭಾಷೆಯಾಗಿ ಬೇಂದ್ರೆ, ದೇವನೂರು ಮಹಾದೇವ, ವಚನಕಾರರು ಹಾಗೂ ಜಾನಪದೀಯರು ಚೆನ್ನಾಗಿ ಬಳಸಿದ್ದಾರೆ’ ಎಂದು ನಿದರ್ಶನ ಸಹಿತ ಮಾತನಾಡಿದರು.</p>.<p>ಪ್ರೊ.ಅಮರೇಶ ನುಗಡೋಣಿ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಪಲ್ಲವ ವೆಂಕಟೇಶ್, ಟಿ. ಎಸ್ ಗೊರವರ ಹಾಗೂ ಚೈತ್ರ ಭಾಗವಹಿಸಿದ್ದರು.</p>.<p>ಎರಡೂ ಭಾಷೆಗೆ ಸಾಹಿತ್ಯಿಕ ಇತಿಹಾಸ: ‘ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಕನ್ನಡ ತೆಲುಗಿಗೆ ಸಾವಿರಾರು ವರ್ಷಗಳ ಸಾಹಿತ್ಯಿಕ ಹಾಗೂ ಶಾಸನ ಪರಂಪರೆ ಇದೆ’ ಎಂದು ಕರ್ನೂಲು ಸಾಹಿತಿ ಮಾರುತಿ ಪೌರೋಹಿತಂ ಹೇಳಿದರು.</p>.<p>ಕಾರ್ಯಕ್ರಮದ ಕಥಾ ಸಮಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ತೆಲುಗಿನ ಮೇರು ಕವಿಗಳಾದ ನನ್ನಯ್ಯ, ತಿಕ್ಕಣ್ಣ ಹಾಗೂ ಶ್ರೀನಾಥರಂತೆ ಕನ್ನಡದ ಪಂಪ, ರನ್ನ ಕುವೆಂಪು ಮೊದಲಾದ ಮಹನೀಯರು ಶಿಖರಪ್ರಾಯರು’ ಎಂದು ನೆನೆಸಿದರು.</p>.<p>‘ಎರಡೂ ಭಾಷೆಗಳ ಭಕ್ತಿ, ಜಾನಪದ, ಅಧುನಿಕ, ಬಂಡಾಯ ಸಾಹಿತ್ಯ ಪರಂಪರೆ ವಿಶಿಷ್ಟವಾಗಿದೆ. ಅಲ್ಲದೆ ಸಂಗೀತ, ನಾಟಕ, ಸಿನಿಮಾ ರಂಗಭೂಮಿಗೆ ಅಪಾರ ಕೊಡುಗೆ ನೀಡುತ್ತಿವೆ. ಇಲ್ಲಿನ ಪ್ರಾದೇಶಿಕ ಉಪಭಾಷೆಗಳಲ್ಲಿ ವೈವಿಧ್ಯತೆ ಇದೆ’ ಎಂದು ಭಾಷಾ ವಿಶೇಷತೆ ಕೊಂಡಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-25-1238964988</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>