<p>ಬಳ್ಳಾರಿ: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸೇರಿದಂತೆ ಆಟೊ ಗ್ಯಾಸ್ ಕೊರತೆ ತೀವ್ರವಾಗಿದ್ದು, ನಗರದ ಬಹುತೇಕ ಆಟೊ ಎಲ್ಪಿಜಿ ಕೇಂದ್ರಗಳು ಭಾನುವಾರ ಬಂದ್ ಆದವು. ಹೀಗಾಗಿ, ಆಟೊ ಚಾಲಕರು ತೀವ್ರ ತೊಂದರೆ ಅನುಭವಿಸಿದರು.</p>.<p>ಗಾಂಧಿನಗರದಲ್ಲಿ ಎರಡು, ಇನ್ಫ್ಯಾಂಟರಿ ರಸ್ತೆ, ಏಳು ಮಕ್ಕಳ ತಾಯಿ ದೇವಾಲಯದ ಬಳಿ, ಬೆಂಗಳೂರು ರಸ್ತೆಯ ಎಪಿಎಂಸಿ ಬಳಿ, ಡಾ. ರಾಜ್ಕುಮಾರ್ ರಸ್ತೆ, ಕಣೇಕಲ್ ರಸ್ತೆಯಲ್ಲಿರುವ ಎಲ್ಪಿಜಿ ಕೇಂದ್ರಗಳು ಬಂದ್ ಆಗಿವೆ. ಇಂಧನ ದೊರೆಯದ ಹಿನ್ನೆಲೆಯಲ್ಲಿ ಮನೆಯಲ್ಲಿನ ಅಡುಗೆ ಅನಿಲವನ್ನೇ ಆಟೊ ಚಾಲಕರು ಬಳಸಲು ಆರಂಭಿಸಿದ್ದಾರೆ.</p>.<p>‘ಮೂರು ದಿನಗಳ ಹಿಂದೆ ಎಲ್ಪಿಜಿ ದೊರೆಯುತ್ತಿದ್ದರೂ, ಪೂರ್ಣ ಪ್ರಮಾಣದ ಗ್ಯಾಸ್ ತುಂಬಿಸುತ್ತಿರಲಿಲ್ಲ. 5 ಲೀಟರ್ ಮಾತ್ರ ಹಾಕಲಾಗುತ್ತಿತ್ತು. ಲೀಟರ್ಗೆ ₹100 ತಲುಪಿದ್ದರೂ ಖರೀದಿಸಿದ್ದೆವು. ಈಗ ಗ್ಯಾಸ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ’ ಎಂದು ಆಟೊ ಚಾಲಕ ಇಬ್ರಾಹಿಂ ಹೇಳಿದರು.</p>.<p>‘ಪ್ರಯಾಣಿಕರು ಸೀಟ್ಗೆ ₹10 ಮಾತ್ರ ನೀಡುತ್ತಾರೆ. ಹೆಚ್ಚು ಕೇಳಿದರೆ ಇಲ್ಲ ಎನ್ನುತ್ತಾರೆ’ ಎಂದೂ ಅವರು ಹೇಳಿದರು.</p>.<p>ಅಟೊ ಚಾಲಕ ರಾಜಾಸಾಬ್ ಮಾತನಾಡಿ, ‘ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ, ರಾಜ್ಯದಲ್ಲಿ ಆಟೊ ಎಲ್ಪಿಜಿ ಸಮರ್ಪಕ ಪೂರೈಕೆಗೆ ಕ್ರಮಕೈಗೊಳ್ಳಬೇಕು. ರಾಜ್ಯ ಸರ್ಕಾರ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.</p>.<p>‘ಆಟೊ ಚಾಲಕರ ಸಂಘದ ಅಧ್ಯಕ್ಷರಿಗೆ ಈ ಬಗ್ಗೆ ಹೇಳಿದರೆ, ಅವರೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ನೊಂದು ನುಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260406-25-827203777</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸೇರಿದಂತೆ ಆಟೊ ಗ್ಯಾಸ್ ಕೊರತೆ ತೀವ್ರವಾಗಿದ್ದು, ನಗರದ ಬಹುತೇಕ ಆಟೊ ಎಲ್ಪಿಜಿ ಕೇಂದ್ರಗಳು ಭಾನುವಾರ ಬಂದ್ ಆದವು. ಹೀಗಾಗಿ, ಆಟೊ ಚಾಲಕರು ತೀವ್ರ ತೊಂದರೆ ಅನುಭವಿಸಿದರು.</p>.<p>ಗಾಂಧಿನಗರದಲ್ಲಿ ಎರಡು, ಇನ್ಫ್ಯಾಂಟರಿ ರಸ್ತೆ, ಏಳು ಮಕ್ಕಳ ತಾಯಿ ದೇವಾಲಯದ ಬಳಿ, ಬೆಂಗಳೂರು ರಸ್ತೆಯ ಎಪಿಎಂಸಿ ಬಳಿ, ಡಾ. ರಾಜ್ಕುಮಾರ್ ರಸ್ತೆ, ಕಣೇಕಲ್ ರಸ್ತೆಯಲ್ಲಿರುವ ಎಲ್ಪಿಜಿ ಕೇಂದ್ರಗಳು ಬಂದ್ ಆಗಿವೆ. ಇಂಧನ ದೊರೆಯದ ಹಿನ್ನೆಲೆಯಲ್ಲಿ ಮನೆಯಲ್ಲಿನ ಅಡುಗೆ ಅನಿಲವನ್ನೇ ಆಟೊ ಚಾಲಕರು ಬಳಸಲು ಆರಂಭಿಸಿದ್ದಾರೆ.</p>.<p>‘ಮೂರು ದಿನಗಳ ಹಿಂದೆ ಎಲ್ಪಿಜಿ ದೊರೆಯುತ್ತಿದ್ದರೂ, ಪೂರ್ಣ ಪ್ರಮಾಣದ ಗ್ಯಾಸ್ ತುಂಬಿಸುತ್ತಿರಲಿಲ್ಲ. 5 ಲೀಟರ್ ಮಾತ್ರ ಹಾಕಲಾಗುತ್ತಿತ್ತು. ಲೀಟರ್ಗೆ ₹100 ತಲುಪಿದ್ದರೂ ಖರೀದಿಸಿದ್ದೆವು. ಈಗ ಗ್ಯಾಸ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ’ ಎಂದು ಆಟೊ ಚಾಲಕ ಇಬ್ರಾಹಿಂ ಹೇಳಿದರು.</p>.<p>‘ಪ್ರಯಾಣಿಕರು ಸೀಟ್ಗೆ ₹10 ಮಾತ್ರ ನೀಡುತ್ತಾರೆ. ಹೆಚ್ಚು ಕೇಳಿದರೆ ಇಲ್ಲ ಎನ್ನುತ್ತಾರೆ’ ಎಂದೂ ಅವರು ಹೇಳಿದರು.</p>.<p>ಅಟೊ ಚಾಲಕ ರಾಜಾಸಾಬ್ ಮಾತನಾಡಿ, ‘ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ, ರಾಜ್ಯದಲ್ಲಿ ಆಟೊ ಎಲ್ಪಿಜಿ ಸಮರ್ಪಕ ಪೂರೈಕೆಗೆ ಕ್ರಮಕೈಗೊಳ್ಳಬೇಕು. ರಾಜ್ಯ ಸರ್ಕಾರ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.</p>.<p>‘ಆಟೊ ಚಾಲಕರ ಸಂಘದ ಅಧ್ಯಕ್ಷರಿಗೆ ಈ ಬಗ್ಗೆ ಹೇಳಿದರೆ, ಅವರೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ನೊಂದು ನುಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260406-25-827203777</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>