<p><strong>ಬಳ್ಳಾರಿ:</strong> ನಗರದ ಅವ್ವಂಬಾವಿ ಪ್ರದೇಶದ 11.59 ಎಕರೆ ಸರ್ಕಾರಿ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ನಡೆದಿದ್ದ ಪ್ರಯತ್ನಗಳನ್ನು ಜಿಲ್ಲಾಡಳಿತ ವಿಫಲಗೊಳಿಸಿದೆ. ಈ ಸಂಬಂಧ ಈ ಹಿಂದೆ ತಹಶೀಲ್ದಾರ್ ನೀಡಿದ್ದ ವಿವಾದಿತ ಆದೇಶಗಳನ್ನು ಉಪವಿಭಾಗಾಧಿಕಾರಿ (ಎ.ಸಿ) ನ್ಯಾಯಾಲಯವು ರದ್ದು ಪಡಿಸಿದೆ.</p>.<p>ಜತೆಗೆ, ಜಮೀನು ಅಕ್ರಮ ಪರಾಭಾರೆಗೆ ಪ್ರಯತ್ನಿಸಿದವರ ವಿರುದ್ಧ ಕ್ರಮಕ್ಕೆ ಉಪವಿಭಾಗಾಧಿಕಾರಿ ರಾಜೇಶ ಎಚ್.ಡಿ ಆದೇಶಿಸಿದ್ದಾರೆ. ಅದರಂತೆ ಜಮೀನನ್ನು ಬುಧವಾರ ಜಿಲ್ಲಾಡಳಿತದ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಅವರ ‘ಸರ್ಕಾರಿ ಭೂಮಿ ರಕ್ಷಣಾ ಸಮಿತಿ’ಯು ವಶಕ್ಕೆ ಪಡೆಯಿತು.</p>.<p>ಅವ್ವಂಬಾವಿಯಲ್ಲಿರುವ ಸರ್ವೆ ನಂ. 348ರಲ್ಲಿರುವ 11.59 ಎಕರೆ ಜಮೀನು ‘ಇನಾಂ’ ಜಮೀನಾಗಿತ್ತು. ಪಾರ್ವತಮ್ಮ (ಪ್ರತಿವಾದಿ) ಎಂಬುವರು 1982ರ ಫಾರಂ-2 ಮಂಜೂರಾತಿ ಪತ್ರದ ಆಧಾರದ ಮೇಲೆ ಈ ಜಮೀನು ತಮಗೆ ಸೇರಿದ್ದೆಂದು ವಾದಿಸಿ, ಪಹಣಿಯಲ್ಲಿ ಹೆಸರು ನಮೂದಿಸಲು ಕೋರಿದ್ದರು. ಈ ವಿಚಾರವಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿತ್ತು.</p>.<p>ಹೈಕೋರ್ಟ್ ಆದೇಶದ ನೆಪದಲ್ಲಿ ಬಳ್ಳಾರಿಯ ಈ ಹಿಂದಿನ ತಹಶೀಲ್ದಾರ್ ಆಗಿದ್ದ ಗುರುರಾಜ್ ಎಂಬುವರು 2024ರ ಮಾರ್ಚ್ ಮತ್ತು ಜುಲೈನಲ್ಲಿ ಪಾರ್ವತಮ್ಮ ಅವರ ಹೆಸರಿಗೆ ಪಹಣಿ ಇಂಡೀಕರಣ ಮಾಡಲು ಆದೇಶ ಹೊರಡಿಸಿದ್ದರು.</p>.<p>ತನಿಖೆ ವೇಳೆ ಮಹತ್ವದ ಸಂಗತಿಗಳು ಬಯಲಾಗಿದ್ದವು. ತಹಶೀಲ್ದಾರ್ ಕಚೇರಿ ಅಥವಾ ಅಭಿಲೇಖಾಲಯದಲ್ಲಿ ಈ ಜಮೀನಿಗೆ ಸಂಬಂಧಿಸಿದ ಇನಾಂ ಮಂಜೂರಾತಿಯ ಯಾವುದೇ ಮೂಲ ಕಡತಗಳು ಸಿಕ್ಕಿರಲಿಲ್ಲ. ಪಾರ್ವತಮ್ಮ ಅವರು ಸಲ್ಲಿಸಿರುವ ಫಾರಂ-2 ಮಂಜೂರಾತಿ ಪತ್ರವು ‘ನಕಲಿ’ ಅಥವಾ ಸೃಷ್ಟಿಸಿದ ದಾಖಲೆ ಎಂದು ದೃಢಪಟ್ಟಿತ್ತು. ಇನಾಂ ರದ್ದತಿ ಕಾಯ್ದೆಯಡಿ ಮರು ಮಂಜೂರಾತಿ ಪಡೆಯಲು ಬೇಕಾದ ಯಾವುದೇ ಸಾಗುವಳಿ ಪುರಾವೆಗಳು ಅರ್ಜಿದಾರರ ಬಳಿ ಇರಲಿಲ್ಲ ಎಂಬುದು ಸಾಬೀತಾಗಿದೆ.</p>.<p>ಈ ಹಿನ್ನೆಲೆಯಲ್ಲಿ ಮೇ 12 ರಂದು ಅಂತಿಮ ಆದೇಶ ಹೊರಡಿಸಿದ ಬಳ್ಳಾರಿ ಉಪವಿಭಾಗಾಧಿಕಾರಿ ನ್ಯಾಯಾಲಯ 2024ರ ಮಾರ್ಚ್ ಮತ್ತು ಜುಲೈನಲ್ಲಿ ಅಂದಿನ ತಹಶೀಲ್ದಾರ್ ಹೊರಡಿಸಿದ್ದ ಆದೇಶಗಳನ್ನು ರದ್ದುಗೊಳಿಸಿದ್ದಾರೆ. ಜತೆಗೆ ವಿವಾದಿತ 11.59 ಎಕರೆ ಜಮೀನನ್ನು ಎಲ್ಲಾ ಋಣಭಾರಗಳಿಂದ ಮುಕ್ತಗೊಳಿಸಿ, ಪಹಣಿಯಲ್ಲಿ ‘ಕರ್ನಾಟಕ ಸರ್ಕಾರ’ ಎಂದು ಮುಂದುವರಿಸಲು ಸೂಚಿಸಿದ್ದಾರೆ. ಸರ್ಕಾರಿ ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಪ್ರತಿವಾದಿ ಪಾರ್ವತಮ್ಮ ಅವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 192(ಎ) ಮತ್ತು 192(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲು ತಹಶೀಲ್ದಾರರಿಗೆ ಆದೇಶಿಸಲಾಗಿದೆ.</p>.<p>ಈ ಹಗರಣದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಈಗಾಗಲೇ ಅನುಮತಿ ನೀಡಿದ್ದಾರೆ. ಈ ಜಮೀನಿನ ಮೌಲ್ಯ ಕನಿಷ್ಠ ₹150 ಕೋಟಿಗೂ ಹೆಚ್ಚಿದೆ ಎಂದು ಅಂದಾಜು ಇದೆ.</p>.<p>ಈ ಭೂಮಿ ಜಿಲ್ಲಾಡಳಿತದ ಕೈತಪ್ಪುತ್ತಿದ್ದ ಬಗ್ಗೆ ‘ಪ್ರಜಾವಾಣಿ’ಯ 2024ರ ಅ. 29ರ ಸಂಚಿಕೆಯಲ್ಲಿ ‘ಕರ್ತವ್ಯ ಲೋಪ: ಕೈತಪ್ಪಿದ ಜಮೀನು’ ಶೀರ್ಷಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-25-852015645</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ನಗರದ ಅವ್ವಂಬಾವಿ ಪ್ರದೇಶದ 11.59 ಎಕರೆ ಸರ್ಕಾರಿ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ನಡೆದಿದ್ದ ಪ್ರಯತ್ನಗಳನ್ನು ಜಿಲ್ಲಾಡಳಿತ ವಿಫಲಗೊಳಿಸಿದೆ. ಈ ಸಂಬಂಧ ಈ ಹಿಂದೆ ತಹಶೀಲ್ದಾರ್ ನೀಡಿದ್ದ ವಿವಾದಿತ ಆದೇಶಗಳನ್ನು ಉಪವಿಭಾಗಾಧಿಕಾರಿ (ಎ.ಸಿ) ನ್ಯಾಯಾಲಯವು ರದ್ದು ಪಡಿಸಿದೆ.</p>.<p>ಜತೆಗೆ, ಜಮೀನು ಅಕ್ರಮ ಪರಾಭಾರೆಗೆ ಪ್ರಯತ್ನಿಸಿದವರ ವಿರುದ್ಧ ಕ್ರಮಕ್ಕೆ ಉಪವಿಭಾಗಾಧಿಕಾರಿ ರಾಜೇಶ ಎಚ್.ಡಿ ಆದೇಶಿಸಿದ್ದಾರೆ. ಅದರಂತೆ ಜಮೀನನ್ನು ಬುಧವಾರ ಜಿಲ್ಲಾಡಳಿತದ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಅವರ ‘ಸರ್ಕಾರಿ ಭೂಮಿ ರಕ್ಷಣಾ ಸಮಿತಿ’ಯು ವಶಕ್ಕೆ ಪಡೆಯಿತು.</p>.<p>ಅವ್ವಂಬಾವಿಯಲ್ಲಿರುವ ಸರ್ವೆ ನಂ. 348ರಲ್ಲಿರುವ 11.59 ಎಕರೆ ಜಮೀನು ‘ಇನಾಂ’ ಜಮೀನಾಗಿತ್ತು. ಪಾರ್ವತಮ್ಮ (ಪ್ರತಿವಾದಿ) ಎಂಬುವರು 1982ರ ಫಾರಂ-2 ಮಂಜೂರಾತಿ ಪತ್ರದ ಆಧಾರದ ಮೇಲೆ ಈ ಜಮೀನು ತಮಗೆ ಸೇರಿದ್ದೆಂದು ವಾದಿಸಿ, ಪಹಣಿಯಲ್ಲಿ ಹೆಸರು ನಮೂದಿಸಲು ಕೋರಿದ್ದರು. ಈ ವಿಚಾರವಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿತ್ತು.</p>.<p>ಹೈಕೋರ್ಟ್ ಆದೇಶದ ನೆಪದಲ್ಲಿ ಬಳ್ಳಾರಿಯ ಈ ಹಿಂದಿನ ತಹಶೀಲ್ದಾರ್ ಆಗಿದ್ದ ಗುರುರಾಜ್ ಎಂಬುವರು 2024ರ ಮಾರ್ಚ್ ಮತ್ತು ಜುಲೈನಲ್ಲಿ ಪಾರ್ವತಮ್ಮ ಅವರ ಹೆಸರಿಗೆ ಪಹಣಿ ಇಂಡೀಕರಣ ಮಾಡಲು ಆದೇಶ ಹೊರಡಿಸಿದ್ದರು.</p>.<p>ತನಿಖೆ ವೇಳೆ ಮಹತ್ವದ ಸಂಗತಿಗಳು ಬಯಲಾಗಿದ್ದವು. ತಹಶೀಲ್ದಾರ್ ಕಚೇರಿ ಅಥವಾ ಅಭಿಲೇಖಾಲಯದಲ್ಲಿ ಈ ಜಮೀನಿಗೆ ಸಂಬಂಧಿಸಿದ ಇನಾಂ ಮಂಜೂರಾತಿಯ ಯಾವುದೇ ಮೂಲ ಕಡತಗಳು ಸಿಕ್ಕಿರಲಿಲ್ಲ. ಪಾರ್ವತಮ್ಮ ಅವರು ಸಲ್ಲಿಸಿರುವ ಫಾರಂ-2 ಮಂಜೂರಾತಿ ಪತ್ರವು ‘ನಕಲಿ’ ಅಥವಾ ಸೃಷ್ಟಿಸಿದ ದಾಖಲೆ ಎಂದು ದೃಢಪಟ್ಟಿತ್ತು. ಇನಾಂ ರದ್ದತಿ ಕಾಯ್ದೆಯಡಿ ಮರು ಮಂಜೂರಾತಿ ಪಡೆಯಲು ಬೇಕಾದ ಯಾವುದೇ ಸಾಗುವಳಿ ಪುರಾವೆಗಳು ಅರ್ಜಿದಾರರ ಬಳಿ ಇರಲಿಲ್ಲ ಎಂಬುದು ಸಾಬೀತಾಗಿದೆ.</p>.<p>ಈ ಹಿನ್ನೆಲೆಯಲ್ಲಿ ಮೇ 12 ರಂದು ಅಂತಿಮ ಆದೇಶ ಹೊರಡಿಸಿದ ಬಳ್ಳಾರಿ ಉಪವಿಭಾಗಾಧಿಕಾರಿ ನ್ಯಾಯಾಲಯ 2024ರ ಮಾರ್ಚ್ ಮತ್ತು ಜುಲೈನಲ್ಲಿ ಅಂದಿನ ತಹಶೀಲ್ದಾರ್ ಹೊರಡಿಸಿದ್ದ ಆದೇಶಗಳನ್ನು ರದ್ದುಗೊಳಿಸಿದ್ದಾರೆ. ಜತೆಗೆ ವಿವಾದಿತ 11.59 ಎಕರೆ ಜಮೀನನ್ನು ಎಲ್ಲಾ ಋಣಭಾರಗಳಿಂದ ಮುಕ್ತಗೊಳಿಸಿ, ಪಹಣಿಯಲ್ಲಿ ‘ಕರ್ನಾಟಕ ಸರ್ಕಾರ’ ಎಂದು ಮುಂದುವರಿಸಲು ಸೂಚಿಸಿದ್ದಾರೆ. ಸರ್ಕಾರಿ ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಪ್ರತಿವಾದಿ ಪಾರ್ವತಮ್ಮ ಅವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 192(ಎ) ಮತ್ತು 192(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲು ತಹಶೀಲ್ದಾರರಿಗೆ ಆದೇಶಿಸಲಾಗಿದೆ.</p>.<p>ಈ ಹಗರಣದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಈಗಾಗಲೇ ಅನುಮತಿ ನೀಡಿದ್ದಾರೆ. ಈ ಜಮೀನಿನ ಮೌಲ್ಯ ಕನಿಷ್ಠ ₹150 ಕೋಟಿಗೂ ಹೆಚ್ಚಿದೆ ಎಂದು ಅಂದಾಜು ಇದೆ.</p>.<p>ಈ ಭೂಮಿ ಜಿಲ್ಲಾಡಳಿತದ ಕೈತಪ್ಪುತ್ತಿದ್ದ ಬಗ್ಗೆ ‘ಪ್ರಜಾವಾಣಿ’ಯ 2024ರ ಅ. 29ರ ಸಂಚಿಕೆಯಲ್ಲಿ ‘ಕರ್ತವ್ಯ ಲೋಪ: ಕೈತಪ್ಪಿದ ಜಮೀನು’ ಶೀರ್ಷಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-25-852015645</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>