<p>ತೆಕ್ಕಲಕೋಟೆ: ಸಮೀಪದ ದರೂರು ಗ್ರಾಮದಲ್ಲಿ ಸೂಫಿ ಸಂತ ಹಜರತ್ ಹೊನ್ನೂರುವಲಿ ಅವರ 85ನೇ ವರ್ಷದ ಉರುಸ್ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ಜರುಗಿತು.</p>.<p>ಉರುಸ್ ನಿಮಿತ್ತ ಬೆಳಗಿನ ಜಾವ ಗಂಧವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ‘ಸಂದಲ್’ ಮೆರವಣಿಗೆಯಲ್ಲಿ ಸ್ಥಳೀಯ ಜಾನಪದ ತಂಡಗಳಾದ ಡೊಳ್ಳು ಕುಣಿತ, ತಾಷ ತಮಟೆ ವಾದನ ಮೂಲಕ ಸರ್ವ ಧರ್ಮಿಯರು ಸೇರಿ ಮೆರವಣಿಗೆಯ ಮೂಲಕ ದರ್ಗಾಕ್ಕೆ ತಲುಪಿಸಿದರು.</p>.<p>ನಂತರ ಬೆಳಿಗ್ಗೆ 10 ಗಂಟೆಗೆ ಸಜ್ಜಾದೆ ನರ್ಷೀನ್ ಬಿ. ಹಸನ್ ಸಾಬ್ ದಾದ ಅವರಿಗೆ ಯಲ್ಲಾಪುರದ ಮೌಲಾಬಿ ಆಲಂಭಾಕ್ಷಿಸಾಬ್ ಕುಟುಂಬದವರು 55ನೇ ತುಲಾಭಾರ (ನಾಣ್ಯ) ಸೇವೆ ಸೇರಿದಂತೆ ಒಟ್ಟು 6 ಜನ ಭಕ್ತರು ತುಲಾಭಾರ ನಡೆಸಿಕೊಟ್ಟರು. ಉರುಸ್ ಪ್ರಯುಕ್ತ ದರ್ಗಾವು ವಿದ್ಯುತ್ ದೀಪಗಳ ಅಲಂಕಾರದಿಂದ ಝಗಮಗಿಸಿತು.</p>.<p>ಹಿಂದೂ– ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಧಾರ್ಮಿಕ ಕಾರ್ಯ ನೆರವೇರಿಸಿ ಭಾವೈಕ್ಯ ಮೆರೆದರು. ತಮ್ಮ ಇಷ್ಟಾರ್ಥ ಈಡೇರಿದವರು ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು.</p>.<p>‘ಇಲ್ಲಿ ಯಾವುದೇ ಜಾತಿ, ಮತ ಭೇದವಿಲ್ಲದೆ ಸರ್ವಧರ್ಮೀಯರು ಭಾಗವಹಿಸಿ ಉರುಸ್ ಆಚರಿಸುತ್ತಾರೆ. ಈ ಪರಂಪರೆಯು ಸರ್ವಧರ್ಮ ಸಮಭಾವಕ್ಕೆ ಮಾದರಿ’ ಎಂದು ರಾಜ್ಯ ಪಿಂಜಾರ್ ನದಾಫ್ ಸಂಘದ ರಾಜ್ಯ ಕಾರ್ಯದರ್ಶಿ ಅಲ್ಲಾಭಕ್ಷಿ ತಿಳಿಸಿದರು.</p>.<p>ಉರುಸ್ ಅಂಗವಾಗಿ ಬಳ್ಳಾರಿ, ಹುಬ್ಬಳ್ಳಿ, ಕೊಪ್ಪಳ ಜಿಲ್ಲೆಗಳಿಂದ, ಸುತ್ತಲಿನ ಗ್ರಾಮಗಳಾದ ಕರೂರು, ದರೂರು, ಎಚ್ ಹೊಸಹಳ್ಳಿ, ಸಿರಿಗೇರಿ, ಬಲಕುಂದಿಗಳಿಂದ ಭಕ್ತರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260415-25-22626354</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೆಕ್ಕಲಕೋಟೆ: ಸಮೀಪದ ದರೂರು ಗ್ರಾಮದಲ್ಲಿ ಸೂಫಿ ಸಂತ ಹಜರತ್ ಹೊನ್ನೂರುವಲಿ ಅವರ 85ನೇ ವರ್ಷದ ಉರುಸ್ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ಜರುಗಿತು.</p>.<p>ಉರುಸ್ ನಿಮಿತ್ತ ಬೆಳಗಿನ ಜಾವ ಗಂಧವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ‘ಸಂದಲ್’ ಮೆರವಣಿಗೆಯಲ್ಲಿ ಸ್ಥಳೀಯ ಜಾನಪದ ತಂಡಗಳಾದ ಡೊಳ್ಳು ಕುಣಿತ, ತಾಷ ತಮಟೆ ವಾದನ ಮೂಲಕ ಸರ್ವ ಧರ್ಮಿಯರು ಸೇರಿ ಮೆರವಣಿಗೆಯ ಮೂಲಕ ದರ್ಗಾಕ್ಕೆ ತಲುಪಿಸಿದರು.</p>.<p>ನಂತರ ಬೆಳಿಗ್ಗೆ 10 ಗಂಟೆಗೆ ಸಜ್ಜಾದೆ ನರ್ಷೀನ್ ಬಿ. ಹಸನ್ ಸಾಬ್ ದಾದ ಅವರಿಗೆ ಯಲ್ಲಾಪುರದ ಮೌಲಾಬಿ ಆಲಂಭಾಕ್ಷಿಸಾಬ್ ಕುಟುಂಬದವರು 55ನೇ ತುಲಾಭಾರ (ನಾಣ್ಯ) ಸೇವೆ ಸೇರಿದಂತೆ ಒಟ್ಟು 6 ಜನ ಭಕ್ತರು ತುಲಾಭಾರ ನಡೆಸಿಕೊಟ್ಟರು. ಉರುಸ್ ಪ್ರಯುಕ್ತ ದರ್ಗಾವು ವಿದ್ಯುತ್ ದೀಪಗಳ ಅಲಂಕಾರದಿಂದ ಝಗಮಗಿಸಿತು.</p>.<p>ಹಿಂದೂ– ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಧಾರ್ಮಿಕ ಕಾರ್ಯ ನೆರವೇರಿಸಿ ಭಾವೈಕ್ಯ ಮೆರೆದರು. ತಮ್ಮ ಇಷ್ಟಾರ್ಥ ಈಡೇರಿದವರು ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು.</p>.<p>‘ಇಲ್ಲಿ ಯಾವುದೇ ಜಾತಿ, ಮತ ಭೇದವಿಲ್ಲದೆ ಸರ್ವಧರ್ಮೀಯರು ಭಾಗವಹಿಸಿ ಉರುಸ್ ಆಚರಿಸುತ್ತಾರೆ. ಈ ಪರಂಪರೆಯು ಸರ್ವಧರ್ಮ ಸಮಭಾವಕ್ಕೆ ಮಾದರಿ’ ಎಂದು ರಾಜ್ಯ ಪಿಂಜಾರ್ ನದಾಫ್ ಸಂಘದ ರಾಜ್ಯ ಕಾರ್ಯದರ್ಶಿ ಅಲ್ಲಾಭಕ್ಷಿ ತಿಳಿಸಿದರು.</p>.<p>ಉರುಸ್ ಅಂಗವಾಗಿ ಬಳ್ಳಾರಿ, ಹುಬ್ಬಳ್ಳಿ, ಕೊಪ್ಪಳ ಜಿಲ್ಲೆಗಳಿಂದ, ಸುತ್ತಲಿನ ಗ್ರಾಮಗಳಾದ ಕರೂರು, ದರೂರು, ಎಚ್ ಹೊಸಹಳ್ಳಿ, ಸಿರಿಗೇರಿ, ಬಲಕುಂದಿಗಳಿಂದ ಭಕ್ತರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260415-25-22626354</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>