<p>ಬಳ್ಳಾರಿ: ಖನಿಜ ಸಾಗಾಣಿಕೆ ಪರವಾನಗಿಯನ್ನು ದುರುಪಯೋಗಪಡಿಸಿಕೊಂಡು ಕಳ್ಳತನದಿಂದ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಜಾಲವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎರಡು ಟಿಪ್ಪರ್ ಲಾರಿಗಳು ಹಾಗೂ ಸುಮಾರು 36 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>.<p>ಕೌಲ್ ಬಜಾರ್ನ ಕೆ. ಸತ್ಯನಾರಾಯಣ (52), ಓಬುಳಾಪುರಂನ ಕೆ. ನಾಗರಾಜ (32) ಬಂಧಿತ ಆರೋಪಿಗಳು. ಇವರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 318(4) ಮತ್ತು 303(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಘಟನೆ ವಿವರ: ಮೇ 23ರಂದು ಆಂಧ್ರಪ್ರದೇಶದ ಸೋಮಲಾಪುರ ರೈಲ್ವೇ ಸೈಡಿಂಗ್ಸ್ ಪ್ರದೇಶದಿಂದ ಬಳ್ಳಾರಿಯ ಹಲಕುಂದಿ ಗ್ರಾಮದಲ್ಲಿರುವ ಶ್ರೀ ತಿರುಪತಿ ಸ್ಟೀಲ್ಸ್ ಕಾಸ್ಟ್ ಲಿಮಿಟೆಡ್ ಘಟಕಕ್ಕೆ ಅದಿರು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಮಾಹಿತಿ ಮೇರೆಗೆ ಭೂವಿಜ್ಞಾನಿ ನವೀನ್ ಜಿ. ಮತ್ತು ತಂಡದವರು ಬಳ್ಳಾರಿ ಗ್ರಾಮೀಣ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.</p>.<p>ಹಲಕುಂದಿ ಗ್ರಾಮದ ವಿ.ಆರ್.ಕೆ.ಪಿ ಫ್ಯಾಕ್ಟರಿ ರಸ್ತೆಯ ರೈಲ್ವೇ ಗೇಟ್ ಸಮೀಪ ಸಂಚರಿಸುತ್ತಿದ್ದ ಎರಡು ಲಾರಿಗಳನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಬಯಲಾಗಿದೆ.</p>.<p>ಲಾರಿ ಸಂಖ್ಯೆ ಕೆ.ಎ 34/9696: ಈ ವಾಹನವು ಬೆಳಿಗ್ಗೆ 7.26ಕ್ಕೆ ಪರವಾನಗಿ ಪಡೆದು ಒಮ್ಮೆ ಅದಿರನ್ನು ಅನ್-ಲೋಡ್ ಮಾಡಿತ್ತು. ಆದರೆ ಚಾಲಕ ಅದೇ ಪರವಾನಗಿಯನ್ನು ಬಳಸಿ ಎರಡನೇ ಬಾರಿ ಅದಿರು ತುಂಬಿಕೊಂಡು ಸಾಗಿಸುತ್ತಿದ್ದ.</p>.<p>ಲಾರಿ ಸಂಖ್ಯೆ ಕೆ.ಎ 34/ಬಿ 7858: ಈ ವಾಹನವೂ ಸಹ ಹಳೆಯ ಪರವಾನಗಿಯನ್ನೇ ಬಳಸಿ ಪುನಃ ಅದಿರು ಸಾಗಾಟ ಮಾಡುತ್ತಿರುವುದು ಜಿಪಿಎಸ್ ತಂತ್ರಾಂಶದ ಪರಿಶೀಲನೆಯಿಂದ ದೃಢಪಟ್ಟಿದೆ.</p>.<p>ಜಪ್ತಿ ಮಾಡಲಾದ ಅದಿರಿನ ಒಟ್ಟು ಮೌಲ್ಯ ಹಾಗೂ ರಾಜಧನ ಸೇರಿ ಸರ್ಕಾರಕ್ಕೆ ಸುಮಾರು ₹1,12,716 ನಷ್ಟ ಉಂಟುಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಲಾರಿಗಳ ಮೌಲ್ಯ ಸೇರಿದಂತೆ ಒಟ್ಟು ಸುಮಾರು ₹7.12 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-25-1186823005</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ಖನಿಜ ಸಾಗಾಣಿಕೆ ಪರವಾನಗಿಯನ್ನು ದುರುಪಯೋಗಪಡಿಸಿಕೊಂಡು ಕಳ್ಳತನದಿಂದ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಜಾಲವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎರಡು ಟಿಪ್ಪರ್ ಲಾರಿಗಳು ಹಾಗೂ ಸುಮಾರು 36 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>.<p>ಕೌಲ್ ಬಜಾರ್ನ ಕೆ. ಸತ್ಯನಾರಾಯಣ (52), ಓಬುಳಾಪುರಂನ ಕೆ. ನಾಗರಾಜ (32) ಬಂಧಿತ ಆರೋಪಿಗಳು. ಇವರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 318(4) ಮತ್ತು 303(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಘಟನೆ ವಿವರ: ಮೇ 23ರಂದು ಆಂಧ್ರಪ್ರದೇಶದ ಸೋಮಲಾಪುರ ರೈಲ್ವೇ ಸೈಡಿಂಗ್ಸ್ ಪ್ರದೇಶದಿಂದ ಬಳ್ಳಾರಿಯ ಹಲಕುಂದಿ ಗ್ರಾಮದಲ್ಲಿರುವ ಶ್ರೀ ತಿರುಪತಿ ಸ್ಟೀಲ್ಸ್ ಕಾಸ್ಟ್ ಲಿಮಿಟೆಡ್ ಘಟಕಕ್ಕೆ ಅದಿರು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಮಾಹಿತಿ ಮೇರೆಗೆ ಭೂವಿಜ್ಞಾನಿ ನವೀನ್ ಜಿ. ಮತ್ತು ತಂಡದವರು ಬಳ್ಳಾರಿ ಗ್ರಾಮೀಣ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.</p>.<p>ಹಲಕುಂದಿ ಗ್ರಾಮದ ವಿ.ಆರ್.ಕೆ.ಪಿ ಫ್ಯಾಕ್ಟರಿ ರಸ್ತೆಯ ರೈಲ್ವೇ ಗೇಟ್ ಸಮೀಪ ಸಂಚರಿಸುತ್ತಿದ್ದ ಎರಡು ಲಾರಿಗಳನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಬಯಲಾಗಿದೆ.</p>.<p>ಲಾರಿ ಸಂಖ್ಯೆ ಕೆ.ಎ 34/9696: ಈ ವಾಹನವು ಬೆಳಿಗ್ಗೆ 7.26ಕ್ಕೆ ಪರವಾನಗಿ ಪಡೆದು ಒಮ್ಮೆ ಅದಿರನ್ನು ಅನ್-ಲೋಡ್ ಮಾಡಿತ್ತು. ಆದರೆ ಚಾಲಕ ಅದೇ ಪರವಾನಗಿಯನ್ನು ಬಳಸಿ ಎರಡನೇ ಬಾರಿ ಅದಿರು ತುಂಬಿಕೊಂಡು ಸಾಗಿಸುತ್ತಿದ್ದ.</p>.<p>ಲಾರಿ ಸಂಖ್ಯೆ ಕೆ.ಎ 34/ಬಿ 7858: ಈ ವಾಹನವೂ ಸಹ ಹಳೆಯ ಪರವಾನಗಿಯನ್ನೇ ಬಳಸಿ ಪುನಃ ಅದಿರು ಸಾಗಾಟ ಮಾಡುತ್ತಿರುವುದು ಜಿಪಿಎಸ್ ತಂತ್ರಾಂಶದ ಪರಿಶೀಲನೆಯಿಂದ ದೃಢಪಟ್ಟಿದೆ.</p>.<p>ಜಪ್ತಿ ಮಾಡಲಾದ ಅದಿರಿನ ಒಟ್ಟು ಮೌಲ್ಯ ಹಾಗೂ ರಾಜಧನ ಸೇರಿ ಸರ್ಕಾರಕ್ಕೆ ಸುಮಾರು ₹1,12,716 ನಷ್ಟ ಉಂಟುಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಲಾರಿಗಳ ಮೌಲ್ಯ ಸೇರಿದಂತೆ ಒಟ್ಟು ಸುಮಾರು ₹7.12 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-25-1186823005</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>