<p>ಬಳ್ಳಾರಿ: ತಾಲ್ಲೂಕಿನ ಅಸುಂಡಿ ಮತ್ತು ಯಾಳ್ಪಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಾದಾ ಮರಳು ಗಣಿಗಾರಿಕೆ ನಡೆಸುತ್ತಿರುವ ಲೈಸೆನ್ಸ್ದಾರರು ನಿಯಮಗಳನ್ನು ಉಲ್ಲಂಘಿಸಿರುವುದು ಬಳ್ಳಾರಿ ಉಪ ವಿಭಾಗಾಧಿಕಾರಿ ಮತ್ತು ಭೂ ವಿಜ್ಞಾನಿಗಳ ಜಂಟಿ ಸ್ಥಳ ತಪಾಸಣಾ ವರದಿಯಿಂದ ಬಹಿರಂಗವಾಗಿದೆ.</p>.<p>ಎಂ. ರಾಮಕೃಷ್ಣ ರಾವ್ ಎಂಬುವವರಿಗೆ ಅಸುಂಡಿ ಗ್ರಾಮದಲ್ಲಿ 12.20 ಎಕರೆ ಹಾಗೂ ಯಾಳ್ಪಿ ಗ್ರಾಮದಲ್ಲಿ 9.90 ಎಕರೆ ಪ್ರದೇಶದಲ್ಲಿ 2022 ರಿಂದ 2027 ರವರೆಗೆ ಮರಳು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994 ಮತ್ತು 2024 ರ ತಿದ್ದುಪಡಿ ನಿಯಮಗಳಡಿ ಪದೇ ಪದೇ ನಿಯಮಗಳನ್ನು ಗಾಳಿಗೆ ತೂರಿರುವುದು ತಪಾಸಣೆ ವೇಳೆ ಸಾಬೀತಾಗಿದೆ.</p>.<p>ವರದಿಯಲ್ಲೇನಿದೆ?: ಸಹಾಯಕ ಆಯುಕ್ತರು ಮತ್ತು ಗಣಿ ಇಲಾಖೆಯ ಭೂವಿಜ್ಞಾನಿಗಳು ಮೇ 4 ರಂದು ನಡೆಸಿದ ಜಂಟಿ ತಪಾಸಣೆಯಲ್ಲಿ ಲೈಸೆನ್ಸ್ ಸಂಖ್ಯೆ ಬಿಎಲ್ಆರ್-379 ಮತ್ತು ಬಿಎಲ್ಆರ್-380 ರ ಪ್ರದೇಶಗಳಲ್ಲಿ ಹಲವು ಲೋಪಗಳು ಕಂಡು ಬಂದಿವೆ.</p>.<p>ಅತಿಯಾದ ಗಣಿಗಾರಿಕೆ: ಪರಿಸರ ವಿಮೋಚನಾ ಪತ್ರದ (ಇಸಿ) ನಿಯಮದಂತೆ ಭೂಮಿಯ ಮೇಲ್ಪದರದಿಂದ ಗರಿಷ್ಠ 7 ಮೀಟರ್ ಆಳದವರೆಗೆ ಮಾತ್ರ ಮರಳು ತೆಗೆಯಲು ಅವಕಾಶವಿತ್ತು. ಆದರೆ, ಎರಡೂ ಲೈಸೆನ್ಸ್ ಪ್ರದೇಶಗಳಲ್ಲಿ 7 ಮೀಟರ್ಗಿಂತಲೂ ಹೆಚ್ಚಿನ ಆಳಕ್ಕೆ ಗಣಿಗಾರಿಕೆ ನಡೆಸಿರುವುದು ದೃಢಪಟ್ಟಿದೆ.</p>.<p>ಅಕ್ರಮ ದಾಸ್ತಾನು: ಅಸುಂಡಿ ಗ್ರಾಮದ ಲೈಸೆನ್ಸ್ (ಬಿಎಲ್ಆರ್-379) ವ್ಯಾಪ್ತಿಯ ಹೊರಗೆ ಸುಮಾರು 8500 ಮೆಟ್ರಿಕ್ ಟನ್ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಈ ಹಿಂದೆ ಇದೇ ಕಾರಣಕ್ಕೆ ₹25,000 ದಂಡ ವಿಧಿಸಿದ್ದರೂ ಸಹ, ಲೈಸೆನ್ಸ್ದಾರರು ಮತ್ತೆ ಅದೇ ಉಲ್ಲಂಘನೆಯನ್ನು ಪುನರಾವರ್ತನೆ ಮಾಡಿದ್ದಾರೆ.</p>.<p>ಸಿಸಿ ಟಿವಿ ನಿರ್ವಹಣೆ ಲೋಪ: ಸ್ಟಾಕ್ ಯಾರ್ಡ್ಗಳಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಹಿಂದಿನ 10 ದಿನಗಳ ವಿಡಿಯೋ ದಾಖಲೆಗಳು ಲಭ್ಯವಿರಲಿಲ್ಲ.</p>.<p>ರಸ್ತೆ ನಿರ್ವಹಣೆ ವೈಫಲ್ಯ: ಮರಳು ಸಾಗಾಣಿಕೆಯಿಂದಾಗಿ ಸಂಪರ್ಕ ರಸ್ತೆಗಳು ದುರಸ್ತಿಯಾಗಿದ್ದರೂ, ಗುತ್ತಿಗೆದಾರರು ಅವುಗಳನ್ನು ಯೋಗ್ಯ ಸ್ಥಿತಿಯಲ್ಲಿ ನಿರ್ವಹಣೆ ಮಾಡಿಲ್ಲ ಎಂದು ಜಂಟಿ ಸ್ಥಳ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-25-1733866057</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ತಾಲ್ಲೂಕಿನ ಅಸುಂಡಿ ಮತ್ತು ಯಾಳ್ಪಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಾದಾ ಮರಳು ಗಣಿಗಾರಿಕೆ ನಡೆಸುತ್ತಿರುವ ಲೈಸೆನ್ಸ್ದಾರರು ನಿಯಮಗಳನ್ನು ಉಲ್ಲಂಘಿಸಿರುವುದು ಬಳ್ಳಾರಿ ಉಪ ವಿಭಾಗಾಧಿಕಾರಿ ಮತ್ತು ಭೂ ವಿಜ್ಞಾನಿಗಳ ಜಂಟಿ ಸ್ಥಳ ತಪಾಸಣಾ ವರದಿಯಿಂದ ಬಹಿರಂಗವಾಗಿದೆ.</p>.<p>ಎಂ. ರಾಮಕೃಷ್ಣ ರಾವ್ ಎಂಬುವವರಿಗೆ ಅಸುಂಡಿ ಗ್ರಾಮದಲ್ಲಿ 12.20 ಎಕರೆ ಹಾಗೂ ಯಾಳ್ಪಿ ಗ್ರಾಮದಲ್ಲಿ 9.90 ಎಕರೆ ಪ್ರದೇಶದಲ್ಲಿ 2022 ರಿಂದ 2027 ರವರೆಗೆ ಮರಳು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994 ಮತ್ತು 2024 ರ ತಿದ್ದುಪಡಿ ನಿಯಮಗಳಡಿ ಪದೇ ಪದೇ ನಿಯಮಗಳನ್ನು ಗಾಳಿಗೆ ತೂರಿರುವುದು ತಪಾಸಣೆ ವೇಳೆ ಸಾಬೀತಾಗಿದೆ.</p>.<p>ವರದಿಯಲ್ಲೇನಿದೆ?: ಸಹಾಯಕ ಆಯುಕ್ತರು ಮತ್ತು ಗಣಿ ಇಲಾಖೆಯ ಭೂವಿಜ್ಞಾನಿಗಳು ಮೇ 4 ರಂದು ನಡೆಸಿದ ಜಂಟಿ ತಪಾಸಣೆಯಲ್ಲಿ ಲೈಸೆನ್ಸ್ ಸಂಖ್ಯೆ ಬಿಎಲ್ಆರ್-379 ಮತ್ತು ಬಿಎಲ್ಆರ್-380 ರ ಪ್ರದೇಶಗಳಲ್ಲಿ ಹಲವು ಲೋಪಗಳು ಕಂಡು ಬಂದಿವೆ.</p>.<p>ಅತಿಯಾದ ಗಣಿಗಾರಿಕೆ: ಪರಿಸರ ವಿಮೋಚನಾ ಪತ್ರದ (ಇಸಿ) ನಿಯಮದಂತೆ ಭೂಮಿಯ ಮೇಲ್ಪದರದಿಂದ ಗರಿಷ್ಠ 7 ಮೀಟರ್ ಆಳದವರೆಗೆ ಮಾತ್ರ ಮರಳು ತೆಗೆಯಲು ಅವಕಾಶವಿತ್ತು. ಆದರೆ, ಎರಡೂ ಲೈಸೆನ್ಸ್ ಪ್ರದೇಶಗಳಲ್ಲಿ 7 ಮೀಟರ್ಗಿಂತಲೂ ಹೆಚ್ಚಿನ ಆಳಕ್ಕೆ ಗಣಿಗಾರಿಕೆ ನಡೆಸಿರುವುದು ದೃಢಪಟ್ಟಿದೆ.</p>.<p>ಅಕ್ರಮ ದಾಸ್ತಾನು: ಅಸುಂಡಿ ಗ್ರಾಮದ ಲೈಸೆನ್ಸ್ (ಬಿಎಲ್ಆರ್-379) ವ್ಯಾಪ್ತಿಯ ಹೊರಗೆ ಸುಮಾರು 8500 ಮೆಟ್ರಿಕ್ ಟನ್ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಈ ಹಿಂದೆ ಇದೇ ಕಾರಣಕ್ಕೆ ₹25,000 ದಂಡ ವಿಧಿಸಿದ್ದರೂ ಸಹ, ಲೈಸೆನ್ಸ್ದಾರರು ಮತ್ತೆ ಅದೇ ಉಲ್ಲಂಘನೆಯನ್ನು ಪುನರಾವರ್ತನೆ ಮಾಡಿದ್ದಾರೆ.</p>.<p>ಸಿಸಿ ಟಿವಿ ನಿರ್ವಹಣೆ ಲೋಪ: ಸ್ಟಾಕ್ ಯಾರ್ಡ್ಗಳಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಹಿಂದಿನ 10 ದಿನಗಳ ವಿಡಿಯೋ ದಾಖಲೆಗಳು ಲಭ್ಯವಿರಲಿಲ್ಲ.</p>.<p>ರಸ್ತೆ ನಿರ್ವಹಣೆ ವೈಫಲ್ಯ: ಮರಳು ಸಾಗಾಣಿಕೆಯಿಂದಾಗಿ ಸಂಪರ್ಕ ರಸ್ತೆಗಳು ದುರಸ್ತಿಯಾಗಿದ್ದರೂ, ಗುತ್ತಿಗೆದಾರರು ಅವುಗಳನ್ನು ಯೋಗ್ಯ ಸ್ಥಿತಿಯಲ್ಲಿ ನಿರ್ವಹಣೆ ಮಾಡಿಲ್ಲ ಎಂದು ಜಂಟಿ ಸ್ಥಳ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-25-1733866057</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>