‘ಪರಿಸರ ಆಲಿಕೆ ಸಭೆಯಲ್ಲಿ ಸ್ಥಳೀಯ ಪರಿಸರವಾದಿಗಳಿಗೆ, ಭೂಸಂತ್ರಸ್ತರಿಗೆ ಹಾಗೂ ಸ್ಥಳೀಯ ಸಂಘಟನೆಗಳ ಅಭಿಪ್ರಾಯಗಳಿಗೆ ಅವಕಾಶ ನೀಡಬೇಕೆ ಹೊರತು ಹೊರ ರಾಜ್ಯ, ಜಿಲ್ಲೆಯ ಪರಿಸರವಾದಿಗಳಿಗೆ, ಸಂಘಟನೆಗಳಿಗೆ ಅವಕಾಶ ನೀಡಬಾರದು. ಸರ್ಕಾರವು ಆಲಿಕೆ ಸಭೆ ನಡೆಸಿದ ತಕ್ಷಣ ಕೈಗಾರಿಕೆಗಳನ್ನು ಸ್ಥಾಪಿಸಿಲು ಮುಂದಾಗಬೇಕು. ಕಾಟಾಚಾರಕ್ಕೆ ಸಭೆ ನಡೆಸಿ, ಸುಳ್ಳು ಭರವಸೆ ನೀಡಿ, ಮತ್ತೆ ರೈತರನ್ನು ವಂಚಿಸುವ, ಮೋಸಮಾಡುವ ಕೆಲಸ ಮಾಡಬಾರದು’ ಎಂದು ಹೋರಾಟಗಾರ ಟಿ.ಕೆ.ಕಾಮೇಶ್ ಆಕ್ರೋಶ ವ್ಯಕ್ತಪಡಿಸಿದರು.