ಹಿಂದಿನ ಸರ್ಕಾರದಲ್ಲಿ ಟಿ.ಬಿ. ಸ್ಯಾನಿಟೋರಿಯಂನಿಂದ ವಿನಾಯಕನಗರ, ಅಲ್ಲೀಪುರ, ಹೊಸಪೇಟೆ ಬೈಪಾಸ್ವರೆಗೆ ರಸ್ತೆ ವಿಸ್ತರಣೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಟೆಂಡರ್ ಕರೆದಿತ್ತು. ಕೆಲವು ಪ್ರಭಾವಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ರಸ್ತೆಯನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.