<p><strong>ಬಳ್ಳಾರಿ:</strong> ಕವಿ ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನಕ್ಕೆ 2025ರ ಸಂಗಂ ಪ್ರಶಸ್ತಿಗೆ ಭಾಜನವಾಗಿದೆ ಎಂದು ಹಿರಿಯ ಕತೆಗಾರ ಪ್ರೊ. ಅಮರೇಶ ನುಗಡೋಣಿ ಘೋಷಿಸಿದರು.</p>.<p>ನಗರದ ಜ್ಞಾನಾಮೃತ ಕಾಲೇಜು ಸಭಾಂಗಣದಲ್ಲಿ ಸಂಗಂ ಟ್ರಸ್ಟ್ ಶನಿವಾರ ‘ಸಂಗಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ-ತೆಲುಗು ನುಡಿಸಾಂಗತ್ಯ ಕಾರ್ಯಕ್ರಮ ನಡೆಯಿತು. ಪ್ರಶಸ್ತಿ ಸುತ್ತಿನಲ್ಲಿ ಅಮರೇಶ ನುಗಡೋಣಿ ಅವರು ಪ್ರಶಸ್ತಿ ವಿಜೇತರ ಹೆಸರು ಘೋಷಿಸಿದರು.</p>.<p>ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಶಸ್ತಿ ಪ್ರಮಾಣಪತ್ರ ಒಳಗೊಂಡಿದೆ.</p>.<p>ಬಳಿಕ ಮಾತನಾಡಿದ ಅವರು, ‘ಕಾವ್ಯದ ಸೂಕ್ಷ್ಮತೆ ದಕ್ಕಿಸಿಕೊಂಡಲ್ಲಿ ಕವಿಯೊಬ್ಬ ಕಾವ್ಯ ಕಟ್ಟಬಲ್ಲ. ಆದ್ದರಿಂದ ಕಾವ್ಯದ ಸೆಲೆ ಎಂದಿಗೂ ಬತ್ತಬಾರದು. ಇಂತಹ ಕಾರ್ಯಕ್ರಮಗಳು ನಾಡಿನಲ್ಲಿ ನಡೆಯಲಿ’ ಎಂದು ಆಶಿಸಿದರು.</p>.<p>ಸಂಗಂ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ಮಾತನಾಡಿದರು. ಪ್ರಶಸ್ತಿಗೆ 162 ಕವನ ಸಂಕಲನಗಳು ಬಂದಿದ್ದವು. ಇವುಗಳಲ್ಲಿ ಅಂತಿಮವಾಗಿ ಐದು ಸಂಕಲನ ಆಯ್ಕೆ ಮಾಡಿ ಒಂದಕ್ಕೆ ಪ್ರಶಸ್ತಿ ಘೋಷಿಸಲಾಯಿತು.</p>.<p>ತೀರ್ಪುಗಾರರಾಗಿ ಜಿ.ಪಿ. ಬಸವರಾಜ, ಸಬಿತಾ ಬನ್ನಾಡಿ, ರಾಜೇಂದ್ರ ಪ್ರಸಾದ್ ಕಾರ್ಯ ನಿರ್ವಹಿಸಿದ್ದರು.</p>.<p>ಸಂಗಂ ಜಂಟಿ ಕಾರ್ಯದರ್ಶಿ ಡಾ. ಪುಷ್ಪಲತ ಹಾಗೂ ಸಂಗಂ ಪ್ರಶಸ್ತಿಯ ಅಂತಿಮ ಹಂತದಲ್ಲಿ ಕವಿಗಳಾದ ಶೋಭಾನಾಯಕ, ಸವಿರಾಜ್ ಆನಂದೂರು, ಕಮಲಾಕರ್ ಕಡವೆ ವೇದಿಕೆಯಲ್ಲಿ ಇದ್ದರು.</p>.<p>ಕನ್ನಡ-ತೆಲುಗು ನುಡಿಸಾಂಗತ್ಯ ಹಿತಕರ: ಓ.ಎಲ್. ನಾಗಭೂಷಣಸ್ವಾಮಿ</p>.<p>ಬಳ್ಳಾರಿ: ‘ಭಾಷೆ ಮತ್ತು ಭೌಗೋಳಿಕ ಪ್ರದೇಶಗಳಿಗೆ ಗಡಿ ಇರಬಾರದು. ಅದರಲ್ಲೂ ಕನ್ನಡ ಹಾಗೂ ತೆಲುಗು ಭಾಷೆಗಳ ನಡುವಿನ ಸಾಂಗತ್ಯ ಅತ್ಯಂತ ಹಿತಕರವಾದುದು’ ಎಂದು ಹಿರಿಯ ವಿಮರ್ಶಕ ಒ.ಎಲ್. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.</p>.<p>‘ಸಂಗಂ ಟ್ರಸ್ಟ್’ನಿಂದ ನಡೆದ ಕನ್ನಡ-ತೆಲುಗು ನುಡಿಸಾಂಗತ್ಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಕವಿಯಾದವನು ಕೇವಲ ಸ್ವಂತ ಅನುಭವಕ್ಕೆ ಸೀಮಿತವಾಗದೆ, ಸಮಾಜದ ಸುಖ-ದುಃಖಗಳನ್ನು ತನ್ನದಾಗಿಸಿಕೊಂಡಾಗ ಮಾತ್ರ ಉತ್ತಮ ಕಾವ್ಯ ಸೃಷ್ಟಿಯಾಗಲು ಸಾಧ್ಯ’ ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.</p>.<p>ನ್ಯಾಷನಲ್ ಬುಕ್ ಟ್ರಸ್ಟ್ನ ಅಧಿಕಾರಿ ಡಾ.ಪತ್ತಿಪಾಕ ಮೋಹನ್ ಮಾತನಾಡಿ, ‘ತೆಲುಗು ಮೂಲದ ಪಂಪ ಕನ್ನಡದ ಆದಿಕವಿಯಾದದ್ದು ಭಾಷಾ ಬಾಂಧವ್ಯಕ್ಕೆ ಸಾಕ್ಷಿ’ ಎಂದರು. ನಿವೃತ್ತ ಉಪನ್ಯಾಸಕ ಆರ್. ದೇವಣ್ಣ ಅವರು ಬಸವಣ್ಣ, ಶ್ರೀಕೃಷ್ಣದೇವರಾಯ ಹಾಗೂ ಪುರಂದರದಾಸರ ಕೊಡುಗೆಗಳನ್ನು ಸ್ಮರಿಸಿದರು.</p>.<p>‘ಸಾಹಿತ್ಯಶ್ರೀ’ ಪ್ರಶಸ್ತಿ ಪುರಸ್ಕೃತ ನಿಷ್ಠಿರುದ್ರಪ್ಪ ಮತ್ತು ಅಬ್ದುಲ್ ಹೈ ತೋರಣಗಲ್ಲು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p>.<p>ಡಾ. ಅರವಿಂದ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ನಾಗಣ್ಣ ಕಿಲಾರಿ ಅವರ ‘ಕಾಯಗುಡ್ಡ’ ಸೇರಿದಂತೆ ಮೂರು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಪಾಲಿಕೆ ಮೇಯರ್ ಕೆ. ಗಾದೆಪ್ಪ, ಕೆ. ಶಿವಲಿಂಗಪ್ಪ ಹಂದಿಹಾಳು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-25-1798343417</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಕವಿ ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನಕ್ಕೆ 2025ರ ಸಂಗಂ ಪ್ರಶಸ್ತಿಗೆ ಭಾಜನವಾಗಿದೆ ಎಂದು ಹಿರಿಯ ಕತೆಗಾರ ಪ್ರೊ. ಅಮರೇಶ ನುಗಡೋಣಿ ಘೋಷಿಸಿದರು.</p>.<p>ನಗರದ ಜ್ಞಾನಾಮೃತ ಕಾಲೇಜು ಸಭಾಂಗಣದಲ್ಲಿ ಸಂಗಂ ಟ್ರಸ್ಟ್ ಶನಿವಾರ ‘ಸಂಗಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ-ತೆಲುಗು ನುಡಿಸಾಂಗತ್ಯ ಕಾರ್ಯಕ್ರಮ ನಡೆಯಿತು. ಪ್ರಶಸ್ತಿ ಸುತ್ತಿನಲ್ಲಿ ಅಮರೇಶ ನುಗಡೋಣಿ ಅವರು ಪ್ರಶಸ್ತಿ ವಿಜೇತರ ಹೆಸರು ಘೋಷಿಸಿದರು.</p>.<p>ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಶಸ್ತಿ ಪ್ರಮಾಣಪತ್ರ ಒಳಗೊಂಡಿದೆ.</p>.<p>ಬಳಿಕ ಮಾತನಾಡಿದ ಅವರು, ‘ಕಾವ್ಯದ ಸೂಕ್ಷ್ಮತೆ ದಕ್ಕಿಸಿಕೊಂಡಲ್ಲಿ ಕವಿಯೊಬ್ಬ ಕಾವ್ಯ ಕಟ್ಟಬಲ್ಲ. ಆದ್ದರಿಂದ ಕಾವ್ಯದ ಸೆಲೆ ಎಂದಿಗೂ ಬತ್ತಬಾರದು. ಇಂತಹ ಕಾರ್ಯಕ್ರಮಗಳು ನಾಡಿನಲ್ಲಿ ನಡೆಯಲಿ’ ಎಂದು ಆಶಿಸಿದರು.</p>.<p>ಸಂಗಂ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ಮಾತನಾಡಿದರು. ಪ್ರಶಸ್ತಿಗೆ 162 ಕವನ ಸಂಕಲನಗಳು ಬಂದಿದ್ದವು. ಇವುಗಳಲ್ಲಿ ಅಂತಿಮವಾಗಿ ಐದು ಸಂಕಲನ ಆಯ್ಕೆ ಮಾಡಿ ಒಂದಕ್ಕೆ ಪ್ರಶಸ್ತಿ ಘೋಷಿಸಲಾಯಿತು.</p>.<p>ತೀರ್ಪುಗಾರರಾಗಿ ಜಿ.ಪಿ. ಬಸವರಾಜ, ಸಬಿತಾ ಬನ್ನಾಡಿ, ರಾಜೇಂದ್ರ ಪ್ರಸಾದ್ ಕಾರ್ಯ ನಿರ್ವಹಿಸಿದ್ದರು.</p>.<p>ಸಂಗಂ ಜಂಟಿ ಕಾರ್ಯದರ್ಶಿ ಡಾ. ಪುಷ್ಪಲತ ಹಾಗೂ ಸಂಗಂ ಪ್ರಶಸ್ತಿಯ ಅಂತಿಮ ಹಂತದಲ್ಲಿ ಕವಿಗಳಾದ ಶೋಭಾನಾಯಕ, ಸವಿರಾಜ್ ಆನಂದೂರು, ಕಮಲಾಕರ್ ಕಡವೆ ವೇದಿಕೆಯಲ್ಲಿ ಇದ್ದರು.</p>.<p>ಕನ್ನಡ-ತೆಲುಗು ನುಡಿಸಾಂಗತ್ಯ ಹಿತಕರ: ಓ.ಎಲ್. ನಾಗಭೂಷಣಸ್ವಾಮಿ</p>.<p>ಬಳ್ಳಾರಿ: ‘ಭಾಷೆ ಮತ್ತು ಭೌಗೋಳಿಕ ಪ್ರದೇಶಗಳಿಗೆ ಗಡಿ ಇರಬಾರದು. ಅದರಲ್ಲೂ ಕನ್ನಡ ಹಾಗೂ ತೆಲುಗು ಭಾಷೆಗಳ ನಡುವಿನ ಸಾಂಗತ್ಯ ಅತ್ಯಂತ ಹಿತಕರವಾದುದು’ ಎಂದು ಹಿರಿಯ ವಿಮರ್ಶಕ ಒ.ಎಲ್. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.</p>.<p>‘ಸಂಗಂ ಟ್ರಸ್ಟ್’ನಿಂದ ನಡೆದ ಕನ್ನಡ-ತೆಲುಗು ನುಡಿಸಾಂಗತ್ಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಕವಿಯಾದವನು ಕೇವಲ ಸ್ವಂತ ಅನುಭವಕ್ಕೆ ಸೀಮಿತವಾಗದೆ, ಸಮಾಜದ ಸುಖ-ದುಃಖಗಳನ್ನು ತನ್ನದಾಗಿಸಿಕೊಂಡಾಗ ಮಾತ್ರ ಉತ್ತಮ ಕಾವ್ಯ ಸೃಷ್ಟಿಯಾಗಲು ಸಾಧ್ಯ’ ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.</p>.<p>ನ್ಯಾಷನಲ್ ಬುಕ್ ಟ್ರಸ್ಟ್ನ ಅಧಿಕಾರಿ ಡಾ.ಪತ್ತಿಪಾಕ ಮೋಹನ್ ಮಾತನಾಡಿ, ‘ತೆಲುಗು ಮೂಲದ ಪಂಪ ಕನ್ನಡದ ಆದಿಕವಿಯಾದದ್ದು ಭಾಷಾ ಬಾಂಧವ್ಯಕ್ಕೆ ಸಾಕ್ಷಿ’ ಎಂದರು. ನಿವೃತ್ತ ಉಪನ್ಯಾಸಕ ಆರ್. ದೇವಣ್ಣ ಅವರು ಬಸವಣ್ಣ, ಶ್ರೀಕೃಷ್ಣದೇವರಾಯ ಹಾಗೂ ಪುರಂದರದಾಸರ ಕೊಡುಗೆಗಳನ್ನು ಸ್ಮರಿಸಿದರು.</p>.<p>‘ಸಾಹಿತ್ಯಶ್ರೀ’ ಪ್ರಶಸ್ತಿ ಪುರಸ್ಕೃತ ನಿಷ್ಠಿರುದ್ರಪ್ಪ ಮತ್ತು ಅಬ್ದುಲ್ ಹೈ ತೋರಣಗಲ್ಲು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p>.<p>ಡಾ. ಅರವಿಂದ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ನಾಗಣ್ಣ ಕಿಲಾರಿ ಅವರ ‘ಕಾಯಗುಡ್ಡ’ ಸೇರಿದಂತೆ ಮೂರು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಪಾಲಿಕೆ ಮೇಯರ್ ಕೆ. ಗಾದೆಪ್ಪ, ಕೆ. ಶಿವಲಿಂಗಪ್ಪ ಹಂದಿಹಾಳು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-25-1798343417</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>