<p><strong>ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ):</strong> ಪಟ್ಟಣದ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿ.ಆರಿಕಾ ಅವರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದ ಅಂಕ ನಮೂದಿಸುವಲ್ಲಿ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ.</p>.<p>ಪರೀಕ್ಷೆಯಲ್ಲಿ 58 ಅಂಕ ಗಳಿಸಿದ್ದ ಆರಿಕಾಗೆ ಕೇವಲ 17 ಅಂಕ ನೀಡಲಾಗಿತ್ತು. ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದಾಗ ಈ ತಪ್ಪು ಗೊತ್ತಾಗಿದೆ. ವಿದ್ಯಾರ್ಥಿನಿ ಮರು ಮೌಲ್ಯಮಾಪನಕ್ಕೆ ದಂಡ ತೆತ್ತು ಅರ್ಜಿ ಸಲ್ಲಿಸಬೇಕಾಗಿದೆ.</p>.<p>ಮೌಲ್ಯಮಾಪಕರ ನಿರ್ಲಕ್ಷ್ಯದಿಂದ 41 ಅಂಕಗಳ ವ್ಯತ್ಯಾಸವಾಗಿದೆ. ಇದು ಸರಿಯಾದಲ್ಲಿ ಆರಿಕಾ 538 ಅಂಕ ಗಳಿಸಲಿದ್ದಾರೆ ಎಂದು ಮುಖ್ಯ ಶಿಕ್ಷಕ ಮಂಜುನಾಥ ತಿಳಿಸಿದ್ದಾರೆ.</p>.<p><strong>ಮೊದಲು 6, ಈಗ 64: (ತಿಕೋಟಾ (ವಿಜಯಪುರ) ವರದಿ):</strong> ಎಸ್ಎಸ್ಎಲ್ಸಿ ಪರೀಕ್ಷೆ ಇಂಗ್ಲಿಷ್ ವಿಷಯದಲ್ಲಿ 06 ಅಂಕ ಫಲಿತಾಂಶ ಪ್ರಕಟವಾಗಿದ್ದ, ಬಿಜ್ಜರಗಿ ಗ್ರಾಮದ ಮಾಣಿಕೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಯಾ ಮಾದೇವ ಚೌಧರಿ ಅವರು ಉತ್ತರಪತ್ರಿಕೆ ಛಾಯಾಪ್ರತಿ ಪಡೆದಾಗ 64 ಅಂಕ ಪಡೆದಿರುವುದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ):</strong> ಪಟ್ಟಣದ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿ.ಆರಿಕಾ ಅವರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದ ಅಂಕ ನಮೂದಿಸುವಲ್ಲಿ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ.</p>.<p>ಪರೀಕ್ಷೆಯಲ್ಲಿ 58 ಅಂಕ ಗಳಿಸಿದ್ದ ಆರಿಕಾಗೆ ಕೇವಲ 17 ಅಂಕ ನೀಡಲಾಗಿತ್ತು. ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದಾಗ ಈ ತಪ್ಪು ಗೊತ್ತಾಗಿದೆ. ವಿದ್ಯಾರ್ಥಿನಿ ಮರು ಮೌಲ್ಯಮಾಪನಕ್ಕೆ ದಂಡ ತೆತ್ತು ಅರ್ಜಿ ಸಲ್ಲಿಸಬೇಕಾಗಿದೆ.</p>.<p>ಮೌಲ್ಯಮಾಪಕರ ನಿರ್ಲಕ್ಷ್ಯದಿಂದ 41 ಅಂಕಗಳ ವ್ಯತ್ಯಾಸವಾಗಿದೆ. ಇದು ಸರಿಯಾದಲ್ಲಿ ಆರಿಕಾ 538 ಅಂಕ ಗಳಿಸಲಿದ್ದಾರೆ ಎಂದು ಮುಖ್ಯ ಶಿಕ್ಷಕ ಮಂಜುನಾಥ ತಿಳಿಸಿದ್ದಾರೆ.</p>.<p><strong>ಮೊದಲು 6, ಈಗ 64: (ತಿಕೋಟಾ (ವಿಜಯಪುರ) ವರದಿ):</strong> ಎಸ್ಎಸ್ಎಲ್ಸಿ ಪರೀಕ್ಷೆ ಇಂಗ್ಲಿಷ್ ವಿಷಯದಲ್ಲಿ 06 ಅಂಕ ಫಲಿತಾಂಶ ಪ್ರಕಟವಾಗಿದ್ದ, ಬಿಜ್ಜರಗಿ ಗ್ರಾಮದ ಮಾಣಿಕೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಯಾ ಮಾದೇವ ಚೌಧರಿ ಅವರು ಉತ್ತರಪತ್ರಿಕೆ ಛಾಯಾಪ್ರತಿ ಪಡೆದಾಗ 64 ಅಂಕ ಪಡೆದಿರುವುದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>