ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ 22ನೇ ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಅರವಿಂದ ಪಟೇಲ್ ಅವರ ಮೆರವಣಿಗೆಗೆ ಶಾಸಕ ಸೋಮಶೇಖರ್ ರೆಡ್ಡಿ ಅವರು ಬುದುವಾರ ಬೆಳಗ್ಗೆ ನಗರದಲ್ಲಿ ಚಾಲನೆ ನೀಡಿದರು.
ನಗರದ ಕಮ್ಮ ಭವನದ ಬಳಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ದೊರೆತ ನಂತರ ಕಮ್ಮಭವನದಿಂದ ಕೋರ್ಟ್ ರಸ್ತೆಯ ಮೂಲಕ ರಾಯಲ್ ವೃತ್ತದ ಮಾರ್ಗವಾಗಿ ರಾಘವ ಕಲಾಮಂದಿರದವರೆಗೆ ತಲುಪಿತು.
ಮೆರವಣಿಗೆಯಲ್ಲಿ ನೂರಾರು ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದವು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ಡಾ.ನಿಷ್ಠಿ ರುದ್ರಪ್ಪ, ಸಿರಿಗೇರಿ ಪನ್ನರಾಜ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.