<p><strong>ಬಳ್ಳಾರಿ:</strong> ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ‘ಹೊರನಾಡು ಕನ್ನಡಿಗರು’ ಅಥವಾ ‘ಕರ್ನಾಟಕೇತರರು’ ಎಂಬ ಹಣೆಪಟ್ಟಿ ಬಿದ್ದಿದ್ದು, ಇವರಿಗೆ ಕರ್ನಾಟಕದಲ್ಲಿ ಕಾಲೇಜು ಶಿಕ್ಷಣ ಗಗನ ಕುಸುಮವಾಗಿದೆ. </p>.<p>ಎಸ್ಎಸ್ಎಲ್ಸಿ ಬಳಿಕ ಕರ್ನಾಟಕದ ಕಾಲೇಜುಗಳಲ್ಲಿ ಸೀಟು ಸಿಗುತ್ತಿಲ್ಲ. ಕಲಾ ವಿಭಾಗದಲ್ಲಿ ಸೀಟು ಉಳಿದಿದ್ದರೆ ಮಾತ್ರ ಗಡಿನಾಡ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆಯೇ ಹೊರತು, ವಿಜ್ಞಾನ, ವಾಣಿಜ್ಯ ವಿಭಾಗಕ್ಕೆ ಸೀಟು ಸಿಗದಂತಾಗಿದೆ. ಶೈಕ್ಷಣಿಕ ಭದ್ರತೆ ಇಲ್ಲದೇ, ವಿದ್ಯಾರ್ಥಿಗಳು ಕ್ರಮೇಣ ಬೇರೆ ಭಾಷಾ ಶಿಕ್ಷಣದತ್ತ ಮುಖ ಮಾಡುವಂತಾಗಿದೆ. </p>.<p>1956ರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಸಂದರ್ಭದಲ್ಲಿ ಕರ್ನೂಲು ಹಾಗೂ ಅನಂತಪುರ ಜಿಲ್ಲೆಯ ಆಲೂರು, ಆದೋನಿ, ರಾಯದುರ್ಗ ಹಾಗೂ ಮಡಕಶಿರದಂಥ ಅಚ್ಚಕನ್ನಡ ಮಾತನಾಡುವ ಪ್ರದೇಶಗಳು ಆಂಧ್ರ ಪ್ರದೇಶದ ಪಾಲಾದವು.</p>.<p>ಈ ಪ್ರದೇಶಗಳು ಭೌಗೋಳಿಕವಾಗಿ ಬೇರೆ ರಾಜ್ಯದಲ್ಲಿದ್ದರೂ, ಸಾಂಸ್ಕೃತಿಕ, ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಪ್ರಸ್ತುತ ಈ ಭಾಗಗಳಲ್ಲಿ 65ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಇನ್ನು ತೆಲಂಗಾಣದ ಮೆದಕ್, ಮೆಹಬೂಬ್ನಗರ, ಹೈದರಾಬಾದ್ ನಗರಗಳಲ್ಲಿಯೂ ಕನ್ನಡ ಮಾಧ್ಯಮ ಶಾಲೆಗಳಿವೆ. ಸುಮಾರು 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. </p>.<p>‘10ನೇ ತರಗತಿಯ ನಂತರ ವ್ಯಾಸಂಗಕ್ಕಾಗಿ ಕರ್ನಾಟಕಕ್ಕೆ ಬರುವ ನಮ್ಮ ಮಕ್ಕಳಿಗೆ ಕಾಲೇಜು ಮತ್ತು ವೃತ್ತಿಶಿಕ್ಷಣ ಕೋರ್ಸ್ ಹಂತದಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಭರವಸೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ಆಂಧ್ರ ಪ್ರದೇಶದ ಹಿರೇಹಾಳ್ ಮಂಡಳಂನ ಕನ್ನಡ ಶಿಕ್ಷಕ ಹಿರೇಹಾಳಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. </p>.<p>‘ಖಾಸಗಿ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸರ್ಕಾರಿ ವಸತಿ ನಿಲಯಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ಮಕ್ಕಳು ಕನ್ನಡದಿಂದ ವಿಮುಖರಾಗುತ್ತಿದ್ದಾರೆ. ಪರಿಣಾಮವಾಗಿ, ಕಳೆದ ವರ್ಷ ಆದೋನಿಯಲ್ಲಿ 3 ಕನ್ನಡ ಶಾಲೆಗಳು ಮುಚ್ಚಿವೆ. ಇದು ಆಂಧ್ರದಲ್ಲಿ ಕನ್ನಡದ ಅಸ್ತಿತ್ವಕ್ಕೆ ಸಂಚಕಾರ ತಂದಿದೆ’ ಎಂದು ತಿಳಿಸಿದರು. </p>.<div><blockquote>ಗಡಿ ಭಾಗದ ಕನ್ನಡ ಸಂಘ ಕರ್ನಾಟಕ ಭಾಗದ ಕಾಲೇಜುಗಳ ಸಭೆಯನ್ನು ಶೀಘ್ರ ಕರೆಯಲಾಗುವುದು. ಹೊರನಾಡ ಕನ್ನಡಿಗರ ವಿಚಾರದಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಲಾಗುವುದು </blockquote><span class="attribution">ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ ಬಳ್ಳಾರಿ </span></div>.<div><blockquote>ಆಂಧ್ರ ಪ್ರದೇಶದಲ್ಲಿ ಕಲಿತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಕರ್ನಾಟಕ ಸರ್ಕಾರ ನೆರವಾಗಬೇಕು. ಹೊರನಾಡಿನಲ್ಲಿ ಕನ್ನಡದ ಬಲವರ್ಧನೆ ಮಾಡಬೇಕು</blockquote><span class="attribution"> ಗಿರಿಜಾಪತಿ ಆಂಧ್ರ ಪ್ರದೇಶ ಕನ್ನಡ ಶಿಕ್ಷಕ ಸಂಘದ ಅಧ್ಯಕ್ಷ</span></div>.<h2>ಮೀಸಲು ಕಲ್ಪಿಸಲು ಆಗ್ರಹ </h2>.<p>‘ಆಂಧ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಘೋಷಿಸಬೇಕು. ಆಂಧ್ರದಲ್ಲಿ ನೀಡುವ ಜಾತಿ ಆದಾಯ ಪ್ರಮಾಣಪತ್ರಗಳಿಗೆ ಮಾನ್ಯತೆ ನೀಡಬೇಕು. ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಗಣಿತ ವಿಜ್ಞಾನ ಕನ್ನಡ ಶಿಕ್ಷಕರನ್ನು ಸರ್ಕಾರ ನೇಮಿಸಬೇಕು’ ಎಂದು ಆಂಧ್ರಪ್ರದೇಶ ಕನ್ನಡ ಶಿಕ್ಷಕ ಸಂಘ ಒತ್ತಾಯಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ‘ಹೊರನಾಡು ಕನ್ನಡಿಗರು’ ಅಥವಾ ‘ಕರ್ನಾಟಕೇತರರು’ ಎಂಬ ಹಣೆಪಟ್ಟಿ ಬಿದ್ದಿದ್ದು, ಇವರಿಗೆ ಕರ್ನಾಟಕದಲ್ಲಿ ಕಾಲೇಜು ಶಿಕ್ಷಣ ಗಗನ ಕುಸುಮವಾಗಿದೆ. </p>.<p>ಎಸ್ಎಸ್ಎಲ್ಸಿ ಬಳಿಕ ಕರ್ನಾಟಕದ ಕಾಲೇಜುಗಳಲ್ಲಿ ಸೀಟು ಸಿಗುತ್ತಿಲ್ಲ. ಕಲಾ ವಿಭಾಗದಲ್ಲಿ ಸೀಟು ಉಳಿದಿದ್ದರೆ ಮಾತ್ರ ಗಡಿನಾಡ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆಯೇ ಹೊರತು, ವಿಜ್ಞಾನ, ವಾಣಿಜ್ಯ ವಿಭಾಗಕ್ಕೆ ಸೀಟು ಸಿಗದಂತಾಗಿದೆ. ಶೈಕ್ಷಣಿಕ ಭದ್ರತೆ ಇಲ್ಲದೇ, ವಿದ್ಯಾರ್ಥಿಗಳು ಕ್ರಮೇಣ ಬೇರೆ ಭಾಷಾ ಶಿಕ್ಷಣದತ್ತ ಮುಖ ಮಾಡುವಂತಾಗಿದೆ. </p>.<p>1956ರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಸಂದರ್ಭದಲ್ಲಿ ಕರ್ನೂಲು ಹಾಗೂ ಅನಂತಪುರ ಜಿಲ್ಲೆಯ ಆಲೂರು, ಆದೋನಿ, ರಾಯದುರ್ಗ ಹಾಗೂ ಮಡಕಶಿರದಂಥ ಅಚ್ಚಕನ್ನಡ ಮಾತನಾಡುವ ಪ್ರದೇಶಗಳು ಆಂಧ್ರ ಪ್ರದೇಶದ ಪಾಲಾದವು.</p>.<p>ಈ ಪ್ರದೇಶಗಳು ಭೌಗೋಳಿಕವಾಗಿ ಬೇರೆ ರಾಜ್ಯದಲ್ಲಿದ್ದರೂ, ಸಾಂಸ್ಕೃತಿಕ, ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಪ್ರಸ್ತುತ ಈ ಭಾಗಗಳಲ್ಲಿ 65ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಇನ್ನು ತೆಲಂಗಾಣದ ಮೆದಕ್, ಮೆಹಬೂಬ್ನಗರ, ಹೈದರಾಬಾದ್ ನಗರಗಳಲ್ಲಿಯೂ ಕನ್ನಡ ಮಾಧ್ಯಮ ಶಾಲೆಗಳಿವೆ. ಸುಮಾರು 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. </p>.<p>‘10ನೇ ತರಗತಿಯ ನಂತರ ವ್ಯಾಸಂಗಕ್ಕಾಗಿ ಕರ್ನಾಟಕಕ್ಕೆ ಬರುವ ನಮ್ಮ ಮಕ್ಕಳಿಗೆ ಕಾಲೇಜು ಮತ್ತು ವೃತ್ತಿಶಿಕ್ಷಣ ಕೋರ್ಸ್ ಹಂತದಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಭರವಸೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ಆಂಧ್ರ ಪ್ರದೇಶದ ಹಿರೇಹಾಳ್ ಮಂಡಳಂನ ಕನ್ನಡ ಶಿಕ್ಷಕ ಹಿರೇಹಾಳಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. </p>.<p>‘ಖಾಸಗಿ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸರ್ಕಾರಿ ವಸತಿ ನಿಲಯಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ಮಕ್ಕಳು ಕನ್ನಡದಿಂದ ವಿಮುಖರಾಗುತ್ತಿದ್ದಾರೆ. ಪರಿಣಾಮವಾಗಿ, ಕಳೆದ ವರ್ಷ ಆದೋನಿಯಲ್ಲಿ 3 ಕನ್ನಡ ಶಾಲೆಗಳು ಮುಚ್ಚಿವೆ. ಇದು ಆಂಧ್ರದಲ್ಲಿ ಕನ್ನಡದ ಅಸ್ತಿತ್ವಕ್ಕೆ ಸಂಚಕಾರ ತಂದಿದೆ’ ಎಂದು ತಿಳಿಸಿದರು. </p>.<div><blockquote>ಗಡಿ ಭಾಗದ ಕನ್ನಡ ಸಂಘ ಕರ್ನಾಟಕ ಭಾಗದ ಕಾಲೇಜುಗಳ ಸಭೆಯನ್ನು ಶೀಘ್ರ ಕರೆಯಲಾಗುವುದು. ಹೊರನಾಡ ಕನ್ನಡಿಗರ ವಿಚಾರದಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಲಾಗುವುದು </blockquote><span class="attribution">ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ ಬಳ್ಳಾರಿ </span></div>.<div><blockquote>ಆಂಧ್ರ ಪ್ರದೇಶದಲ್ಲಿ ಕಲಿತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಕರ್ನಾಟಕ ಸರ್ಕಾರ ನೆರವಾಗಬೇಕು. ಹೊರನಾಡಿನಲ್ಲಿ ಕನ್ನಡದ ಬಲವರ್ಧನೆ ಮಾಡಬೇಕು</blockquote><span class="attribution"> ಗಿರಿಜಾಪತಿ ಆಂಧ್ರ ಪ್ರದೇಶ ಕನ್ನಡ ಶಿಕ್ಷಕ ಸಂಘದ ಅಧ್ಯಕ್ಷ</span></div>.<h2>ಮೀಸಲು ಕಲ್ಪಿಸಲು ಆಗ್ರಹ </h2>.<p>‘ಆಂಧ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಘೋಷಿಸಬೇಕು. ಆಂಧ್ರದಲ್ಲಿ ನೀಡುವ ಜಾತಿ ಆದಾಯ ಪ್ರಮಾಣಪತ್ರಗಳಿಗೆ ಮಾನ್ಯತೆ ನೀಡಬೇಕು. ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಗಣಿತ ವಿಜ್ಞಾನ ಕನ್ನಡ ಶಿಕ್ಷಕರನ್ನು ಸರ್ಕಾರ ನೇಮಿಸಬೇಕು’ ಎಂದು ಆಂಧ್ರಪ್ರದೇಶ ಕನ್ನಡ ಶಿಕ್ಷಕ ಸಂಘ ಒತ್ತಾಯಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>