<p><strong>ಬಳ್ಳಾರಿ</strong>: ಬಳ್ಳಾರಿ ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-67 (ಬೈಪಾಸ್ ಆರಂಭಿ ಬಿಂಧುವಿನಿಂದ ಸುಧಾ ಕ್ರಾಸ್ ವರೆಗೆ)ಅನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸುವಂತೆ ಬಳ್ಳಾರಿ ಸಂಸದ ಇ. ತುಕರಾಂ ಅವರು ಮಾಡಿದ ಮನವಿಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಮ್ಮತಿಸಿದ್ದಾರೆ. </p>.<p>‘ಒನ್ಟೈಮ್ ಡೆವೆಲಪ್ಮೆಂಟ್’ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿ ಸಿದ್ಧಪಡಿಸುವಂತೆ ಗಡ್ಕರಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇದರೊಂದಿಗೆ ಅತ್ಯಂತ ಸಂಚಾರ ದಟ್ಟಣೆಯಿಂದ ಕೂಡಿದ್ದ ರಸ್ತೆಯಲ್ಲಿ ಸುಗಮ ಸಂಚಾರದ ಭರವಸೆ ಮೂಡಿದೆ. </p>.<p>ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ನವದೆಹಲಿಯಲ್ಲಿರುವ ಬಳ್ಳಾರಿ ಸಂಸದ ತುಕಾರಾಂ ಗುರುವಾರ ನಿತಿನ್ ಗಡ್ಕರಿ ಅವರನ್ನು ಭೇಟಿಯಾದರು. ‘ಅಂಕೋಲಾ–ಗುತ್ತಿ ನಡುವಿನ ರಾಷ್ಟ್ರೀಯ ಹೆದ್ದಾರಿ-67 ಬಳ್ಳಾರಿ ನಗರದ ಹೃದಯಭಾಗದ ಮೂಲಕ ಹಾದು ಹೋಗುತ್ತದೆ. ಈ ಹೆದ್ದಾರಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಅಂತರ್ ರಾಜ್ಯ ರಸ್ತೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ-150ಎ, ರಾಷ್ಟ್ರೀಯ ಹೆದ್ದಾರಿ-167 ಹಾಗೂ ರಾಜ್ಯ ಹೆದ್ದಾರಿ-128 ಗಳೊಂದಿಗೆ ಸಂಪರ್ಕ ಹೊಂದಿದೆ.</p>.<p>ಬಳ್ಳಾರಿ ಬೈಪಾಸ್ನ ಆರಂಭಿಕ ಬಿಂದುವಿನಿಂದ ಸುಧಾ ಕ್ರಾಸ್ ಕ್ರಾಸ್ ವರೆಗೆ 7.5 ಕಿಮೀ ಹಾಗೂ ಅನಂತಪುರ ಕ್ರಾಸ್ನಿಂದ ಎನ್ಎಚ್-150ಎ ಬೈಪಾಸ್ ಜಂಕ್ಷನ್ ವರೆಗೆ 3.15 ಕಿಮೀ ಸೇರಿ ಒಟ್ಟು 10.65 ಕಿಮೀ ರಸ್ತೆ ವಿಸ್ತರಣೆ ಅತ್ಯಾವಶ್ಯಕವಾಗಿದೆ ಎಂದು ಸಂಸದರು ಮನವಿಯಲ್ಲಿ ತಿಳಿಸಿದ್ದಾರೆ.</p>.<p><strong>ಗೂಳ್ಯ ಸೇತುವೆ: ವರದಿ ಪಡೆಯುವ ಭರವಸೆ </strong></p>.<p>ಬಳ್ಳಾರಿ ತಾಲ್ಲೂಕಿನ ಬಸಾರಕೋಡು ಗ್ರಾಮದ ಸಮೀಪ ವೇದಾವತಿ ನದಿಗೆ ಸೇತುವೆ ನಿರ್ಮಾಣ ಮಾಡುವಂತೆಯೂ ಸಂಸದ ಇ. ತುಕರಾಂ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು. </p>.<p>ಈ ಕುರಿತು ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ. </p>.<p>ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟಕ–ಆಂಧ್ರಪ್ರದೇಶ ಗಡಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ವೇದಾವತಿ ನದಿಗೆ ಗೂಳ್ಯ ಸೇತುವೆ ನಿರ್ಮಾಣ ಅತ್ಯಂತ ಅಗತ್ಯವಿದೆ ಎಂದೂ ಅವರು ಮನವಿ ಮಾಡಿದ್ದಾರೆ. </p>.<p>ಈ ಸೇತುವೆ ನಿರ್ಮಾಣವಾದರೆ ಬಳ್ಳಾರಿ ತಾಲ್ಲೂಕಿನ ಬಸಾರಕೋಡು ಸೇರಿದಂತೆ ಗಡಿಭಾಗದ ಹಲವು ಗ್ರಾಮಗಳು ಮತ್ತು ಆಂಧ್ರಪ್ರದೇಶದ ಗೂಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ ದೊರೆಯಲಿದೆ ಎಂದು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. </p>.<div><blockquote>ಬೈಪಾಸ್ನಿಂದ ಸುದಾ ಕ್ರಾಸ್ ವರೆಗಿನ ರಸ್ತೆ ಗೂಳ್ಯ ಸೇತುವೆ ನಿರ್ಮಾಣಕ್ಕೆ ಕುರಿತು ಕೇಂದ್ರ ಸಚಿವ ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನರಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ವಿಶ್ವಾಸವಿದೆ. </blockquote><span class="attribution"> – ಇ. ತುಕಾರಾಂ ಸಂಸದ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಬಳ್ಳಾರಿ ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-67 (ಬೈಪಾಸ್ ಆರಂಭಿ ಬಿಂಧುವಿನಿಂದ ಸುಧಾ ಕ್ರಾಸ್ ವರೆಗೆ)ಅನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸುವಂತೆ ಬಳ್ಳಾರಿ ಸಂಸದ ಇ. ತುಕರಾಂ ಅವರು ಮಾಡಿದ ಮನವಿಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಮ್ಮತಿಸಿದ್ದಾರೆ. </p>.<p>‘ಒನ್ಟೈಮ್ ಡೆವೆಲಪ್ಮೆಂಟ್’ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿ ಸಿದ್ಧಪಡಿಸುವಂತೆ ಗಡ್ಕರಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇದರೊಂದಿಗೆ ಅತ್ಯಂತ ಸಂಚಾರ ದಟ್ಟಣೆಯಿಂದ ಕೂಡಿದ್ದ ರಸ್ತೆಯಲ್ಲಿ ಸುಗಮ ಸಂಚಾರದ ಭರವಸೆ ಮೂಡಿದೆ. </p>.<p>ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ನವದೆಹಲಿಯಲ್ಲಿರುವ ಬಳ್ಳಾರಿ ಸಂಸದ ತುಕಾರಾಂ ಗುರುವಾರ ನಿತಿನ್ ಗಡ್ಕರಿ ಅವರನ್ನು ಭೇಟಿಯಾದರು. ‘ಅಂಕೋಲಾ–ಗುತ್ತಿ ನಡುವಿನ ರಾಷ್ಟ್ರೀಯ ಹೆದ್ದಾರಿ-67 ಬಳ್ಳಾರಿ ನಗರದ ಹೃದಯಭಾಗದ ಮೂಲಕ ಹಾದು ಹೋಗುತ್ತದೆ. ಈ ಹೆದ್ದಾರಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಅಂತರ್ ರಾಜ್ಯ ರಸ್ತೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ-150ಎ, ರಾಷ್ಟ್ರೀಯ ಹೆದ್ದಾರಿ-167 ಹಾಗೂ ರಾಜ್ಯ ಹೆದ್ದಾರಿ-128 ಗಳೊಂದಿಗೆ ಸಂಪರ್ಕ ಹೊಂದಿದೆ.</p>.<p>ಬಳ್ಳಾರಿ ಬೈಪಾಸ್ನ ಆರಂಭಿಕ ಬಿಂದುವಿನಿಂದ ಸುಧಾ ಕ್ರಾಸ್ ಕ್ರಾಸ್ ವರೆಗೆ 7.5 ಕಿಮೀ ಹಾಗೂ ಅನಂತಪುರ ಕ್ರಾಸ್ನಿಂದ ಎನ್ಎಚ್-150ಎ ಬೈಪಾಸ್ ಜಂಕ್ಷನ್ ವರೆಗೆ 3.15 ಕಿಮೀ ಸೇರಿ ಒಟ್ಟು 10.65 ಕಿಮೀ ರಸ್ತೆ ವಿಸ್ತರಣೆ ಅತ್ಯಾವಶ್ಯಕವಾಗಿದೆ ಎಂದು ಸಂಸದರು ಮನವಿಯಲ್ಲಿ ತಿಳಿಸಿದ್ದಾರೆ.</p>.<p><strong>ಗೂಳ್ಯ ಸೇತುವೆ: ವರದಿ ಪಡೆಯುವ ಭರವಸೆ </strong></p>.<p>ಬಳ್ಳಾರಿ ತಾಲ್ಲೂಕಿನ ಬಸಾರಕೋಡು ಗ್ರಾಮದ ಸಮೀಪ ವೇದಾವತಿ ನದಿಗೆ ಸೇತುವೆ ನಿರ್ಮಾಣ ಮಾಡುವಂತೆಯೂ ಸಂಸದ ಇ. ತುಕರಾಂ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು. </p>.<p>ಈ ಕುರಿತು ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ. </p>.<p>ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟಕ–ಆಂಧ್ರಪ್ರದೇಶ ಗಡಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ವೇದಾವತಿ ನದಿಗೆ ಗೂಳ್ಯ ಸೇತುವೆ ನಿರ್ಮಾಣ ಅತ್ಯಂತ ಅಗತ್ಯವಿದೆ ಎಂದೂ ಅವರು ಮನವಿ ಮಾಡಿದ್ದಾರೆ. </p>.<p>ಈ ಸೇತುವೆ ನಿರ್ಮಾಣವಾದರೆ ಬಳ್ಳಾರಿ ತಾಲ್ಲೂಕಿನ ಬಸಾರಕೋಡು ಸೇರಿದಂತೆ ಗಡಿಭಾಗದ ಹಲವು ಗ್ರಾಮಗಳು ಮತ್ತು ಆಂಧ್ರಪ್ರದೇಶದ ಗೂಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ ದೊರೆಯಲಿದೆ ಎಂದು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. </p>.<div><blockquote>ಬೈಪಾಸ್ನಿಂದ ಸುದಾ ಕ್ರಾಸ್ ವರೆಗಿನ ರಸ್ತೆ ಗೂಳ್ಯ ಸೇತುವೆ ನಿರ್ಮಾಣಕ್ಕೆ ಕುರಿತು ಕೇಂದ್ರ ಸಚಿವ ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನರಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ವಿಶ್ವಾಸವಿದೆ. </blockquote><span class="attribution"> – ಇ. ತುಕಾರಾಂ ಸಂಸದ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>