<p><strong>ಕುರುಗೋಡು:</strong> ಅಡುಗೆ ಅನಿಲ ಸಿಲಿಂಡರ್ ಕೊರತೆ ಎದುರಾಗಬಹುದು ಎನ್ನುವ ಆತಂಕ ಮತ್ತು ದುಗುಡದಿಂದ ಜನರು ಸಿಲಿಂಡರ್ಗಾಗಿ ಸಾಲುಗಟ್ಟಿ ನಿಂತ ದೃಶ್ಯ ಸೋಮವಾರ ಕಂಡುಬಂತು.</p>.<p>ಪಟ್ಟಣದ ನೂರಾರು ಜನರು ಇಲ್ಲಿನ ಅಪ್ಪಾಜಿ ಭಾರತ್ ಗ್ಯಾಸ್ ಗ್ರಾಮೀಣ ವಿತರಕರ ಕಚೇರಿ ಎದುರು ಖಾಲಿ ಸಿಲಿಂಡರ್ಗಳೊಂದಿಗೆ ಸಾಲಿನಲ್ಲಿ ನಿಂತು ಸಿಲಿಂಡರ್ ಖರೀದಿಸಿದರು.</p>.<p>ಪಟ್ಟಣದ ಜನತೆಯ ಜತೆಗೆ ಗ್ರಾಮಿಣ ಭಾಗದ ಜನರೂ ಖರೀದಿಗೆ ಮುಗಿಬಿದ್ದಿರುವುದರಿಂದ ವಿತರಕರು ನಿಯಂತ್ರಿಸಲು ಹರಸಾಹಪ ಪಡಬೇಕಾಯಿತು.</p>.<p>ವಾಣಿಜ್ಯ ಬಳಕೆಯ ಸಿಲಿಂಗಡರ್ಗಳನ್ನು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ತಯಾರಿಕೆ, ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲು ಮೀಸಲಿರಿಸಿದೆ. ಹೋಟೆಲ್ ಸೇರಿದಂತೆ ಖಾಸಗಿ ಬಳಕೆಗೆ ಸಿಲಿಂಡರ್ ದೊರೆಯದ ಪರಿಣಾಮ ಕೆಲವು ಹೋಟೆಲ್ಗಳಲ್ಲಿ ಕಟ್ಟಿಗೆ ಬಳಸಿ ಆಹಾರ ಪದಾರ್ಥ ತಯಾರಿಸುತ್ತಿರುವುದು ಕಂಡುಬಂತು. ತಳ್ಳುವ ಬಂಡಿಗಳಲ್ಲಿ ಹೋಟೆಲ್ ನಡೆಸುವವರಿಗೆ ವಾಣಿಜ್ಯ ಬಳಕೆ ಸಿಲಿಂಡರ್ ದೊರೆಯದ ಪರಿಣಾಮ ಸಮಸ್ಯೆ ಎದುರಾಗಿದ್ದು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.</p>.<div><blockquote>ಸಿಲಿಂಡರ್ ಕೊರತೆಯಾಗಬಹುದು ಎಂದು ಭಯಭೀತರಾದ ಜನರು ಖರೀದಿಗೆ ಮುಗಿಬಿದ್ದಿದ್ದಾರೆ. ಗ್ರಾಹಕರ ಅಗತ್ಯಕ್ಕೆ ತಕ್ಕಷ್ಟು ಸಿಲಿಂಡರ್ ದಾಸ್ತಾನು ಲಭ್ಯವಿದೆ. ಗ್ರಾಹಕರಿಗೆ ಸಮರ್ಪಕವಾಗಿ ಸರಬರಾಜು ಮಾಡಲಾಗುವುದು</blockquote><span class="attribution">ಅನೀಲ್ ಭಾರತ್ ಗ್ಯಾಸ್ ಗ್ರಾಮೀಣ ವಿತರಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು:</strong> ಅಡುಗೆ ಅನಿಲ ಸಿಲಿಂಡರ್ ಕೊರತೆ ಎದುರಾಗಬಹುದು ಎನ್ನುವ ಆತಂಕ ಮತ್ತು ದುಗುಡದಿಂದ ಜನರು ಸಿಲಿಂಡರ್ಗಾಗಿ ಸಾಲುಗಟ್ಟಿ ನಿಂತ ದೃಶ್ಯ ಸೋಮವಾರ ಕಂಡುಬಂತು.</p>.<p>ಪಟ್ಟಣದ ನೂರಾರು ಜನರು ಇಲ್ಲಿನ ಅಪ್ಪಾಜಿ ಭಾರತ್ ಗ್ಯಾಸ್ ಗ್ರಾಮೀಣ ವಿತರಕರ ಕಚೇರಿ ಎದುರು ಖಾಲಿ ಸಿಲಿಂಡರ್ಗಳೊಂದಿಗೆ ಸಾಲಿನಲ್ಲಿ ನಿಂತು ಸಿಲಿಂಡರ್ ಖರೀದಿಸಿದರು.</p>.<p>ಪಟ್ಟಣದ ಜನತೆಯ ಜತೆಗೆ ಗ್ರಾಮಿಣ ಭಾಗದ ಜನರೂ ಖರೀದಿಗೆ ಮುಗಿಬಿದ್ದಿರುವುದರಿಂದ ವಿತರಕರು ನಿಯಂತ್ರಿಸಲು ಹರಸಾಹಪ ಪಡಬೇಕಾಯಿತು.</p>.<p>ವಾಣಿಜ್ಯ ಬಳಕೆಯ ಸಿಲಿಂಗಡರ್ಗಳನ್ನು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ತಯಾರಿಕೆ, ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲು ಮೀಸಲಿರಿಸಿದೆ. ಹೋಟೆಲ್ ಸೇರಿದಂತೆ ಖಾಸಗಿ ಬಳಕೆಗೆ ಸಿಲಿಂಡರ್ ದೊರೆಯದ ಪರಿಣಾಮ ಕೆಲವು ಹೋಟೆಲ್ಗಳಲ್ಲಿ ಕಟ್ಟಿಗೆ ಬಳಸಿ ಆಹಾರ ಪದಾರ್ಥ ತಯಾರಿಸುತ್ತಿರುವುದು ಕಂಡುಬಂತು. ತಳ್ಳುವ ಬಂಡಿಗಳಲ್ಲಿ ಹೋಟೆಲ್ ನಡೆಸುವವರಿಗೆ ವಾಣಿಜ್ಯ ಬಳಕೆ ಸಿಲಿಂಡರ್ ದೊರೆಯದ ಪರಿಣಾಮ ಸಮಸ್ಯೆ ಎದುರಾಗಿದ್ದು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.</p>.<div><blockquote>ಸಿಲಿಂಡರ್ ಕೊರತೆಯಾಗಬಹುದು ಎಂದು ಭಯಭೀತರಾದ ಜನರು ಖರೀದಿಗೆ ಮುಗಿಬಿದ್ದಿದ್ದಾರೆ. ಗ್ರಾಹಕರ ಅಗತ್ಯಕ್ಕೆ ತಕ್ಕಷ್ಟು ಸಿಲಿಂಡರ್ ದಾಸ್ತಾನು ಲಭ್ಯವಿದೆ. ಗ್ರಾಹಕರಿಗೆ ಸಮರ್ಪಕವಾಗಿ ಸರಬರಾಜು ಮಾಡಲಾಗುವುದು</blockquote><span class="attribution">ಅನೀಲ್ ಭಾರತ್ ಗ್ಯಾಸ್ ಗ್ರಾಮೀಣ ವಿತರಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>