ಮೃತರಿಗೆ ಪತ್ನಿ, ಮಗಳು, ಮಗ ಇದ್ದಾರೆ.‘ಬಿ’ ಟಿ.ವಿ. ಬಳ್ಳಾರಿ ಜಿಲ್ಲಾ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಸ್ನೇಹಿತ ಭಾಸ್ಕರ್ ಅವರೊಂದಿಗೆ ತಾಲ್ಲೂಕಿನ ಕಮಲಾಪುರಕ್ಕೆ ಹೋಗುತ್ತಿದ್ದಾಗ ಎಮ್ಮೆ ಅಡ್ಡಬಂದಿದೆ. ನಿಯಂತ್ರಣ ತಪ್ಪಿ ಬಿದ್ದು, ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಸವರಾಜ ಅವರಿಗೆ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ಅವರು ಮೃತಪಟ್ಟರು. ಶುಕ್ರವಾರ (ನ.4) ಕಮಲಾಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.