<p>ಕಂಪ್ಲಿ: ಇಲ್ಲಿನ ಕೋಟೆ ಪ್ರದೇಶದ ತುಂಗಭದ್ರಾದೇವಿ ಮೀನುಗಾರರ ಕಾಲೊನಿಯ ಕಾಳಮ್ಮದೇವಿ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ದೇವಿಗೆ ಕಠಿಣ ಹರಕೆ ತೀರಿಸಿದರು.</p>.<p>ತುಂಗಭದ್ರಾ ನದಿ ತೀರದ ಗಂಗಮ್ಮ ಕಟ್ಟೆಯಿಂದ ಆರಂಭಗೊಂಡ ಹರಕೆ ಮೆರವಣಿಗೆಯು ಸುಂಕ್ಲಮ್ಮ ದೇವಸ್ಥಾನ ಬಳಿ ಸಮಾರೋಪಗೊಂಡಿತು.</p>.<p>ಹರಕೆ ಹೊತ್ತ ಪುರುಷರು ಬೆನ್ನು ಹಾಗೂ ಮೊಣಕಾಲಿನ ಹಿಂಭಾಗಕ್ಕೆ ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ಬಿದಿರಿನ ಬೊಂಬುಗಳಿಂದ ನಿರ್ಮಿಸಿದ ಅಟ್ಟದಲ್ಲಿ ನೇತಾಡುತ್ತ ಅಸ್ತ್ರ ಹರಕೆ ತೀರಿಸಿದರು.</p>.<p>ಮೂವರು ಮಹಿಳೆಯರು 12 ಅಡಿ ಉದ್ದದ ತ್ರಿಶೂಲ ಶಸ್ತ್ರವನ್ನು ದವಡೆಯಲ್ಲಿ ಧರಿಸಿದ್ದರು. ಬೆನ್ನಿಗೆ ಎರಡು ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡ ನಾಲ್ವರು ಆಟೊವನ್ನು ಸುಂಕಲಮ್ಮದೇವಿ ದೇವಸ್ಥಾನದವರೆಗೆ ಎಳೆದು ಹರಕೆ ತೀರಿಸಿದರು. ತಮಿಳುನಾಡಿನ ವಾದ್ಯ ಕಲಾವಿದರು ಪಂಬೈ ಮತ್ತು ಡೆಮೈ ವಾದ್ಯ ನುಡಿಸಿದರು.</p>.<p>ಹರಕೆ ಈ ಬಾರಿ ಕಡಿಮೆ: ‘ತಮಿಳು ಮೀನುಗಾರ ಕುಟುಂಬಗಳು ಈ ಉತ್ಸವ ಮತ್ತು ಹರೆಕೆ ತೀರಿಸುವ ಆಚರಣೆ ನಡೆಸುತ್ತಾ ಬಂದಿವೆ. ಈ ಬಾರಿ ಹರಕೆ ತೀರಿಸುವವರ ಸಂಖ್ಯೆ ಕಡಿಮೆಯಿತ್ತು’ ಎಂದು ಸ್ಥಳೀಯರು ಹೇಳುತ್ತಾರೆ.</p>.<p>ಕಂಪ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಂ. ರಾಜೇಶ, ಮಾಜಿ ಅಧ್ಯಕ್ಷ ಎಸ್.ಆರ್. ಚಿನ್ನರಾಜು, ಪ್ರಮುಖರಾದ ಟಿ. ಮಣಿ, ಸ್ವಾಮಿ ದೊರೈ, ಗುರುಮೂರ್ತಿ, ಗಣೇಶ್, ಎಂ. ರಾಜ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-25-591594823</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಪ್ಲಿ: ಇಲ್ಲಿನ ಕೋಟೆ ಪ್ರದೇಶದ ತುಂಗಭದ್ರಾದೇವಿ ಮೀನುಗಾರರ ಕಾಲೊನಿಯ ಕಾಳಮ್ಮದೇವಿ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ದೇವಿಗೆ ಕಠಿಣ ಹರಕೆ ತೀರಿಸಿದರು.</p>.<p>ತುಂಗಭದ್ರಾ ನದಿ ತೀರದ ಗಂಗಮ್ಮ ಕಟ್ಟೆಯಿಂದ ಆರಂಭಗೊಂಡ ಹರಕೆ ಮೆರವಣಿಗೆಯು ಸುಂಕ್ಲಮ್ಮ ದೇವಸ್ಥಾನ ಬಳಿ ಸಮಾರೋಪಗೊಂಡಿತು.</p>.<p>ಹರಕೆ ಹೊತ್ತ ಪುರುಷರು ಬೆನ್ನು ಹಾಗೂ ಮೊಣಕಾಲಿನ ಹಿಂಭಾಗಕ್ಕೆ ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ಬಿದಿರಿನ ಬೊಂಬುಗಳಿಂದ ನಿರ್ಮಿಸಿದ ಅಟ್ಟದಲ್ಲಿ ನೇತಾಡುತ್ತ ಅಸ್ತ್ರ ಹರಕೆ ತೀರಿಸಿದರು.</p>.<p>ಮೂವರು ಮಹಿಳೆಯರು 12 ಅಡಿ ಉದ್ದದ ತ್ರಿಶೂಲ ಶಸ್ತ್ರವನ್ನು ದವಡೆಯಲ್ಲಿ ಧರಿಸಿದ್ದರು. ಬೆನ್ನಿಗೆ ಎರಡು ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡ ನಾಲ್ವರು ಆಟೊವನ್ನು ಸುಂಕಲಮ್ಮದೇವಿ ದೇವಸ್ಥಾನದವರೆಗೆ ಎಳೆದು ಹರಕೆ ತೀರಿಸಿದರು. ತಮಿಳುನಾಡಿನ ವಾದ್ಯ ಕಲಾವಿದರು ಪಂಬೈ ಮತ್ತು ಡೆಮೈ ವಾದ್ಯ ನುಡಿಸಿದರು.</p>.<p>ಹರಕೆ ಈ ಬಾರಿ ಕಡಿಮೆ: ‘ತಮಿಳು ಮೀನುಗಾರ ಕುಟುಂಬಗಳು ಈ ಉತ್ಸವ ಮತ್ತು ಹರೆಕೆ ತೀರಿಸುವ ಆಚರಣೆ ನಡೆಸುತ್ತಾ ಬಂದಿವೆ. ಈ ಬಾರಿ ಹರಕೆ ತೀರಿಸುವವರ ಸಂಖ್ಯೆ ಕಡಿಮೆಯಿತ್ತು’ ಎಂದು ಸ್ಥಳೀಯರು ಹೇಳುತ್ತಾರೆ.</p>.<p>ಕಂಪ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಂ. ರಾಜೇಶ, ಮಾಜಿ ಅಧ್ಯಕ್ಷ ಎಸ್.ಆರ್. ಚಿನ್ನರಾಜು, ಪ್ರಮುಖರಾದ ಟಿ. ಮಣಿ, ಸ್ವಾಮಿ ದೊರೈ, ಗುರುಮೂರ್ತಿ, ಗಣೇಶ್, ಎಂ. ರಾಜ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-25-591594823</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>