<p><strong>ಕಂಪ್ಲಿ</strong>: ಪತಿ, ಅತ್ತೆಯ ಕಿರುಕುಳ ಮತ್ತು ವರದಕ್ಷಿಣೆ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬರು ತವರು ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಪಟ್ಟಣದ 11ನೇ ವಾರ್ಡ್ ತಾಯಮ್ಮನ ಗುಡಿ ಹತ್ತಿರ ಭಾನುವಾರ ನಡೆದಿದೆ.</p>.<p>ಐಶ್ವರ್ಯ(24) ನೇಣಿಗೆ ಶರಣಾದವರು. ಈ ಮಹಿಳೆ ಪ್ರದೀಪಕುಮಾರ್ ಎಂಬುವವರನ್ನು ಪ್ರೀತಿಸಿ ಮನೆಯಲ್ಲಿ ಹೇಳದೆ 2024ರ ಡಿ.26ರಂದು ವಿವಾಹವಾಗಿದ್ದರು. ನಂತರ ವಿಷಯ ತಿಳಿದ ಐಶ್ವರ್ಯಳ ತಂದೆ ಚಂದ್ರಮೌಳಿ ಕುರುಗೋಡು ನೋದಣಿ ಕಚೇರಿಯಲ್ಲಿ 2025ರ ಜ.15ರಂದು ವಿವಾಹ ನೋಂದಣಿ ಮಾಡಿಸಿದ್ದರು.</p>.<p>ಪತಿ ಮನೆಗೆ ಹೋದ ಐಶ್ಚರ್ಯಳಿಗೆ ಅತ್ತೆಯಿಂದ ಕಿರುಕುಳ ಇದ್ದು ಇದಕ್ಕೆ ಪತಿಯೂ ಸಹಮತ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಬೇಸತ್ತು ನೇಣಿಗೆ ಶರಣಾಗಿರುವುದಾಗಿ, ಅಲ್ಲದೆ ತನ್ನ ಮೊಬೈಲ್ ಪೋನ್, ತಾಳಿಯ ಒಂದು ತೊಲೆ ಬಂಗಾರದ ಗುಂಡು ಅಪ್ಪ ಅಮ್ಮ ಕೊಡಿಸಿದ್ದರಿಂದ ಅವರಿಗೇ ಮರಳಿಸುವಂತೆ ಡೆತ್ ನೋಟ್ನಲ್ಲಿ ಬರೆದಿಟ್ಟಿರುವುದಾಗಿ ಮೃತಳ ತಂದೆ ಚಂದ್ರಮೌಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p>ಡಿವೈಎಸ್ಪಿ ಪ್ರಸಾದ್ ಗೋಖಲೆ, ಪಿಐ ಕೆ.ಬಿ. ವಾಸುಕುಮಾರ್, ಸುಕೋ (ಸ್ಥಳ ಪರಿಶೀಲನಾಧಿಕಾರಿಗಳು) ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ಮುಂದುವರಿದಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-25-1556557854</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ</strong>: ಪತಿ, ಅತ್ತೆಯ ಕಿರುಕುಳ ಮತ್ತು ವರದಕ್ಷಿಣೆ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬರು ತವರು ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಪಟ್ಟಣದ 11ನೇ ವಾರ್ಡ್ ತಾಯಮ್ಮನ ಗುಡಿ ಹತ್ತಿರ ಭಾನುವಾರ ನಡೆದಿದೆ.</p>.<p>ಐಶ್ವರ್ಯ(24) ನೇಣಿಗೆ ಶರಣಾದವರು. ಈ ಮಹಿಳೆ ಪ್ರದೀಪಕುಮಾರ್ ಎಂಬುವವರನ್ನು ಪ್ರೀತಿಸಿ ಮನೆಯಲ್ಲಿ ಹೇಳದೆ 2024ರ ಡಿ.26ರಂದು ವಿವಾಹವಾಗಿದ್ದರು. ನಂತರ ವಿಷಯ ತಿಳಿದ ಐಶ್ವರ್ಯಳ ತಂದೆ ಚಂದ್ರಮೌಳಿ ಕುರುಗೋಡು ನೋದಣಿ ಕಚೇರಿಯಲ್ಲಿ 2025ರ ಜ.15ರಂದು ವಿವಾಹ ನೋಂದಣಿ ಮಾಡಿಸಿದ್ದರು.</p>.<p>ಪತಿ ಮನೆಗೆ ಹೋದ ಐಶ್ಚರ್ಯಳಿಗೆ ಅತ್ತೆಯಿಂದ ಕಿರುಕುಳ ಇದ್ದು ಇದಕ್ಕೆ ಪತಿಯೂ ಸಹಮತ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಬೇಸತ್ತು ನೇಣಿಗೆ ಶರಣಾಗಿರುವುದಾಗಿ, ಅಲ್ಲದೆ ತನ್ನ ಮೊಬೈಲ್ ಪೋನ್, ತಾಳಿಯ ಒಂದು ತೊಲೆ ಬಂಗಾರದ ಗುಂಡು ಅಪ್ಪ ಅಮ್ಮ ಕೊಡಿಸಿದ್ದರಿಂದ ಅವರಿಗೇ ಮರಳಿಸುವಂತೆ ಡೆತ್ ನೋಟ್ನಲ್ಲಿ ಬರೆದಿಟ್ಟಿರುವುದಾಗಿ ಮೃತಳ ತಂದೆ ಚಂದ್ರಮೌಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p>ಡಿವೈಎಸ್ಪಿ ಪ್ರಸಾದ್ ಗೋಖಲೆ, ಪಿಐ ಕೆ.ಬಿ. ವಾಸುಕುಮಾರ್, ಸುಕೋ (ಸ್ಥಳ ಪರಿಶೀಲನಾಧಿಕಾರಿಗಳು) ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ಮುಂದುವರಿದಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-25-1556557854</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>