ಬಜೆಟ್ನಲ್ಲಿ ಬಳ್ಳಾರಿ ಜಿಲ್ಲೆಗೆ ಉಂಟಾಗಿರುವ ನಿರಾಸೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣವೆಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಪರಸ್ಪರರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇಂಥ ದುಸ್ಥಿತಿಗೆ ಕಾರಣ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಜಿಲ್ಲೆಗೆ ಇಂಥದ್ದೇ ಬೇಕು ಹೀಗೇ ಆಗಬೇಕು ಎಂದು ಎಲ್ಲರೂ ಒಟ್ಟಿಗೆ ಬಂದು ಕೇಳಿದ ನಿದರ್ಶನಗಳೇ ಇಲ್ಲ ಎಂದು ಸರ್ಕಾರದ ಹಂತದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಹೀಗಾಗಿ ಬಜೆಟ್ನಲ್ಲಿ ಬಳ್ಳಾರಿ ತಬ್ಬಲಿಯಾಗಬೇಕಾಗಿ ಬಂದಿದೆ ಎನ್ನಲಾಗಿದೆ.