<p><strong>ಕೂಡ್ಲಿಗಿ</strong>: ಇತ್ತೀಚೆಗೆ ಕರಡಿ ದಾಳಿಯಿಂದ ಮೃತಪಟ್ಟಿದ್ದ ತಾಲ್ಲೂಕಿನ ಹಾಲಸಾಗರ ಗ್ರಾಮದ ಜಿ.ಓಬಯ್ಯ ಅವರ ಮನೆಗೆ ಭೇಟಿ ನೀಡಿದ ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಹಾಗೂ ಅರಣ್ಯಾಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.</p>.<p>ನಂತರ ಸರ್ಕಾರದಿಂದ ನೀಡುವ ₹ 20 ಲಕ್ಷ ಪರಿಹಾರದ ಚೆಕ್ ಹಾಗೂ ಮಾಸಿಕ ₹ 4 ಸಾವಿರ ವೇತನದ ಅದೇಶ ಪ್ರತಿಯನ್ನು ನೀಡುವುದರ ಜೊತೆಗೆ ಶಾಸಕರು ತಮ್ಮ ವೈಯಕ್ತಿಕ ₹ 50 ಸಾವಿರ ನಗದನ್ನು ಮೃತ ಓಬಯ್ಯನ ಪತ್ನಿ ಅಂಜಿನಮ್ಮನಿಗ ನೀಡಿ ಧೈರ್ಯ ತುಂಬಿದರು.</p>.<p>ನಂತರ ಶಾಸಕ ಡಾ.ಶ್ರೀನಿವಾಸ್ ಎನ್.ಟಿ.ಮಾತನಾಡಿ, ಆಕಸ್ಮಿಕವಾಗಿ ನಡೆದ ಘಟನೆಯಿಂದ ಬಡ ಕುಟುಂಬಕ್ಕೆ ತೀರ ಅನ್ಯಾಯವಾಗಿದೆ. ಅದರಿಂದ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಹರಿಹಾರವನ್ನು ತಕ್ಷಣವೇ ನೀಡಿದ್ದೇವೆ. ಈ ಹಣವನ್ನು ಅನ್ಯ ಕಾರಣಗಳಿಗೆ ಬಳಸಿಕೊಳ್ಳದೆ ಜೀವನದ ಭದ್ರತೆಗೆ ಉಳಿಸಿಕೊಳ್ಳಬೇಕು ಎಂದು ಹೇಳಿದ ಅವರು, ಕಾಡಾಂಚಿನ ಗ್ರಾಮಗಳಲ್ಲಿ ಕರಡಿಗಳ ಹಾವಳಿ ಇದ್ದು, ರೈತರು ಹಾಗೂ ಜನರು ಎಚ್ಚರಿಕೆಯಿಂದ ಹೊಲಗಳಲ್ಲಿ ಕೆಲಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಅರಣ್ಯ ಇಲಾಖೆಯ ಡಿಸಿಎಫ್ ಅನುಪಮ, ಎಸಿಎಫ್ ಭಾಸ್ಕರ, ತಹಶೀಲ್ದಾರ್ ವಿ.ಕೆ.ನೇತ್ರಾವತಿ, ವಲಯ ಅರಣಾಧಿಕಾರಿಗಳಾದ ಗುಡೇಕೋಟೆ ಜಗದೀಶ್ ಮೇದಾ, ಕೂಡ್ಲಿಗಿಯ ಸಂದೀಪ್ ನಾಯಕ, ಹಾಲೇಶ್, ಮುಖಂಡರಾದ ಎಸ್. ವೆಂಕಟೇಶ್, ಗುಡೇಕೋಟೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎನ್.ಕೃಷ್ಣ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ</strong>: ಇತ್ತೀಚೆಗೆ ಕರಡಿ ದಾಳಿಯಿಂದ ಮೃತಪಟ್ಟಿದ್ದ ತಾಲ್ಲೂಕಿನ ಹಾಲಸಾಗರ ಗ್ರಾಮದ ಜಿ.ಓಬಯ್ಯ ಅವರ ಮನೆಗೆ ಭೇಟಿ ನೀಡಿದ ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಹಾಗೂ ಅರಣ್ಯಾಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.</p>.<p>ನಂತರ ಸರ್ಕಾರದಿಂದ ನೀಡುವ ₹ 20 ಲಕ್ಷ ಪರಿಹಾರದ ಚೆಕ್ ಹಾಗೂ ಮಾಸಿಕ ₹ 4 ಸಾವಿರ ವೇತನದ ಅದೇಶ ಪ್ರತಿಯನ್ನು ನೀಡುವುದರ ಜೊತೆಗೆ ಶಾಸಕರು ತಮ್ಮ ವೈಯಕ್ತಿಕ ₹ 50 ಸಾವಿರ ನಗದನ್ನು ಮೃತ ಓಬಯ್ಯನ ಪತ್ನಿ ಅಂಜಿನಮ್ಮನಿಗ ನೀಡಿ ಧೈರ್ಯ ತುಂಬಿದರು.</p>.<p>ನಂತರ ಶಾಸಕ ಡಾ.ಶ್ರೀನಿವಾಸ್ ಎನ್.ಟಿ.ಮಾತನಾಡಿ, ಆಕಸ್ಮಿಕವಾಗಿ ನಡೆದ ಘಟನೆಯಿಂದ ಬಡ ಕುಟುಂಬಕ್ಕೆ ತೀರ ಅನ್ಯಾಯವಾಗಿದೆ. ಅದರಿಂದ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಹರಿಹಾರವನ್ನು ತಕ್ಷಣವೇ ನೀಡಿದ್ದೇವೆ. ಈ ಹಣವನ್ನು ಅನ್ಯ ಕಾರಣಗಳಿಗೆ ಬಳಸಿಕೊಳ್ಳದೆ ಜೀವನದ ಭದ್ರತೆಗೆ ಉಳಿಸಿಕೊಳ್ಳಬೇಕು ಎಂದು ಹೇಳಿದ ಅವರು, ಕಾಡಾಂಚಿನ ಗ್ರಾಮಗಳಲ್ಲಿ ಕರಡಿಗಳ ಹಾವಳಿ ಇದ್ದು, ರೈತರು ಹಾಗೂ ಜನರು ಎಚ್ಚರಿಕೆಯಿಂದ ಹೊಲಗಳಲ್ಲಿ ಕೆಲಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಅರಣ್ಯ ಇಲಾಖೆಯ ಡಿಸಿಎಫ್ ಅನುಪಮ, ಎಸಿಎಫ್ ಭಾಸ್ಕರ, ತಹಶೀಲ್ದಾರ್ ವಿ.ಕೆ.ನೇತ್ರಾವತಿ, ವಲಯ ಅರಣಾಧಿಕಾರಿಗಳಾದ ಗುಡೇಕೋಟೆ ಜಗದೀಶ್ ಮೇದಾ, ಕೂಡ್ಲಿಗಿಯ ಸಂದೀಪ್ ನಾಯಕ, ಹಾಲೇಶ್, ಮುಖಂಡರಾದ ಎಸ್. ವೆಂಕಟೇಶ್, ಗುಡೇಕೋಟೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎನ್.ಕೃಷ್ಣ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>