<p><strong>ಕುರುಗೋಡು</strong>: 18 ವರ್ಷದ ಯುವಕನಾಗಿದ್ದಾಗ ಕಣ್ಮರೆಯಾಗಿದ್ದ ಶಂಕರ ಆಚಾರಿ 20 ವರ್ಷಗಳ ನಂತರ ಖಾವಿಧರಿಸಿ ರಾಜನ್ ಪುರಿ ಮಹಾರಾಜನಾಗಿ ಮನೆಗೆ ಭೇಟಿ ನೀಡಿ ಹೆತ್ತವರಲ್ಲಿ ಅಚ್ಚರಿ ಮೂಡಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ಜರುಗಿತು.</p>.<p>ಕುರುಗೋಡಿನ ಚಂದ್ರಶೇಖರಾಚಾರಿ ಮತ್ತು ಚಂದ್ರಕಲಾ ದಂಪತಿಗಳ ಏಕೈಕ ಪುತ್ರ ಶಂಕರ ಆಚಾರಿ ಅವರು 20 ವರ್ಷಗಳ ನಂತರ ಮನೆಗೆ ಮರಳಿದ್ದಾರೆ. ಮಗನನ್ನು ಕಂಡ ತಂದೆ ತಾಯಿಯ ಕಣ್ಣಾಲೆಗಳು ಒದ್ದೆಯಾದವು.</p>.<p>ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ದುಡಿಯಲು ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ಮುಂಬೈಗೆ ತೆರಳಿ ಕುಟುಂಬದ ಸಂಪರ್ಕವಿಲ್ಲದೆ ನೆಲೆಸಿದ್ದರು. ನಂತರ ಹರಿದ್ವಾರದಲ್ಲಿ 7 ವರ್ಷ ನೆಲೆಸಿ ನಿರಂಜನ್ದೇವ್ ಎಂಬ ಗುರುಗಳಿಂದ ಧೀಕ್ಷೆ ಪಡೆದಿದ್ದಾರೆ.</p>.<p>‘ಫೇಸ್ಬುಕ್ನಲ್ಲಿ ಪರಿಚಯವಾದ ಕುರುಗೋಡಿನ ನಿವಾಸಿ ಬಸವರಾಜ ಕುಂಬಾರು ಅವರ ಸಹಾಯದಿಂದ ಕುಟುಂಬಸ್ಥರು ಭೇಟಿ ಮಾಡಿದ್ದೇನೆ. ಹಿಂದೂ ಸನಾತನ ಧರ್ಮದಲ್ಲಿ ಕುಲದೇವರ ದರ್ಶನ ಪಡೆಯಲು ಅವಕಾಶ ವಿದೆ. ಇಲ್ಲಿರುವ ಕಾಳಿಕಾದೇವಿಯ ದರ್ಶನ ಪಡೆದಿದ್ದೇನೆ’ ಎಂದು ಶಂಕರ ಆಚಾರಿ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-25-1891240657</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು</strong>: 18 ವರ್ಷದ ಯುವಕನಾಗಿದ್ದಾಗ ಕಣ್ಮರೆಯಾಗಿದ್ದ ಶಂಕರ ಆಚಾರಿ 20 ವರ್ಷಗಳ ನಂತರ ಖಾವಿಧರಿಸಿ ರಾಜನ್ ಪುರಿ ಮಹಾರಾಜನಾಗಿ ಮನೆಗೆ ಭೇಟಿ ನೀಡಿ ಹೆತ್ತವರಲ್ಲಿ ಅಚ್ಚರಿ ಮೂಡಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ಜರುಗಿತು.</p>.<p>ಕುರುಗೋಡಿನ ಚಂದ್ರಶೇಖರಾಚಾರಿ ಮತ್ತು ಚಂದ್ರಕಲಾ ದಂಪತಿಗಳ ಏಕೈಕ ಪುತ್ರ ಶಂಕರ ಆಚಾರಿ ಅವರು 20 ವರ್ಷಗಳ ನಂತರ ಮನೆಗೆ ಮರಳಿದ್ದಾರೆ. ಮಗನನ್ನು ಕಂಡ ತಂದೆ ತಾಯಿಯ ಕಣ್ಣಾಲೆಗಳು ಒದ್ದೆಯಾದವು.</p>.<p>ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ದುಡಿಯಲು ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ಮುಂಬೈಗೆ ತೆರಳಿ ಕುಟುಂಬದ ಸಂಪರ್ಕವಿಲ್ಲದೆ ನೆಲೆಸಿದ್ದರು. ನಂತರ ಹರಿದ್ವಾರದಲ್ಲಿ 7 ವರ್ಷ ನೆಲೆಸಿ ನಿರಂಜನ್ದೇವ್ ಎಂಬ ಗುರುಗಳಿಂದ ಧೀಕ್ಷೆ ಪಡೆದಿದ್ದಾರೆ.</p>.<p>‘ಫೇಸ್ಬುಕ್ನಲ್ಲಿ ಪರಿಚಯವಾದ ಕುರುಗೋಡಿನ ನಿವಾಸಿ ಬಸವರಾಜ ಕುಂಬಾರು ಅವರ ಸಹಾಯದಿಂದ ಕುಟುಂಬಸ್ಥರು ಭೇಟಿ ಮಾಡಿದ್ದೇನೆ. ಹಿಂದೂ ಸನಾತನ ಧರ್ಮದಲ್ಲಿ ಕುಲದೇವರ ದರ್ಶನ ಪಡೆಯಲು ಅವಕಾಶ ವಿದೆ. ಇಲ್ಲಿರುವ ಕಾಳಿಕಾದೇವಿಯ ದರ್ಶನ ಪಡೆದಿದ್ದೇನೆ’ ಎಂದು ಶಂಕರ ಆಚಾರಿ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-25-1891240657</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>