ಕೃಷಿ, ಕೈಗಾರಿಕಾ ಪ್ರದರ್ಶನ ಮೇಳದಲ್ಲೂ ಇದೇ ಪರಿಸ್ಥಿತಿ ಇತ್ತು. ಎಐಡಿಎಸ್ಒ ಅವಿಷ್ಕಾರ ಪುಸ್ತಕ ಪ್ರದರ್ಶಕರ ಮಳಿಗೆಯಲ್ಲಿ ವಿಚಾರವಾದಿಗಳು, ಸ್ವಾತಂತ್ರ್ಯ ಹೋರಾಟಗಾರರ, ತತ್ವಜ್ಞಾನಿಗಳ ಪುಸ್ತಕಗಳು, ನೆರಳಕಟ್ಟೆಯ ಆರ್ಯ ಸಮಾಜ, ಮಂಗಳೂರಿನ ವಿವೇಕ ಜಾಗೃತಿ ವೇದಿಕೆ, ಸನಾತನ ಸಂಸ್ಥೆ, ಬಳ್ಳಾರಿಯ ಕೃಷ್ಣಾ ಪ್ರಭಾ ಸಂಘಗಳು ಮಹಾಭಾರತ, ರಾಮಾಯಣ, ಜ್ಯೋತಿಷ್ಯ ಶಾಸ್ತ್ರ ಸೇರಿದಂತೆ ಧಾರ್ಮಿಕ ಪುಸ್ತಕಗಳು ಪ್ರದರ್ಶನದಲ್ಲಿದ್ದವು. ಮಂಗಳೂರಿನ ಶಾಂತಿ ಪ್ರಕಾಶನದಿಂದ ಶಾಂತಿಗಾಗಿ ಸಾಹಿತ್ಯ ಘೋಷವಾಕ್ಯದಡಿ ಕನ್ನಡದಲ್ಲಿ ಕುರಾನ್, ತಪ್ಪು ಕಲ್ಪನೆಗಳು, ಇಸ್ಲಾಂ ಇತಿಹಾಸ ಪುಸ್ತಕಗಳಿದ್ದವು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಕಟಣೆಗಳು ಶೇ 50ರ ರಿಯಾಯಿತಿಯಲ್ಲಿ ಮಾರಾಟಕ್ಕೆ ಇಡಲಾಗಿದೆ.