ಪ್ರಾಧ್ಯಾಪಕರಾದ ವಿ. ರಾಮಾಂಜನೇಯ, ಎಂ.ವಿ. ಜಯದೇವಯ್ಯ, ಆಲಂ ಬಾಷ, ಶ್ರೀಕಾಂತ್ ಮುನಿ, ರೆಡ್ಡಿ ಹಳ್ಳಿ ಗಿರಿಜಾ, ನೀಲಕಂಠ ಕೆ. ಇದ್ದರು. ಹಗಲುವೇಷ ಕಲಾಪ್ರಕಾರದ ಶೂರ್ಪನಖಿ ಗರ್ವಭಂಗ ಎಂಬ ಪೌರಾಣಿಕ ನಾಟಕ, ಶ್ರೀ ಭೀಮಾಂಜಿನೇಯ ಯುದ್ಧ ನಾಟಕ, ಬುರ್ರಕಥಾ, ಜಾನಪದ ಗೀತ ಗಾಯನ, ಜಾನಪದ ನೃತ್ಯ ಕಲೆ ಪ್ರದರ್ಶನ ನಡೆಯಿತು. ಪ್ರಾಧ್ಯಾಪಕರಾದ ಪ್ರಶಾಂತ್ ಕುಮಾರ್, ಕಲಾವಿದ ಅಶ್ವ ರಾಮಣ್ಣ, ಬುರ್ರಕಥಾ ಶಿವಮ್ಮ, ಹಗಲುವೇಷ ಕಲಾವಿದ ಚಿನ್ನಸ್ವಾಮಿ ಕುರುಗೋಡು ಅವರನ್ನು ಸನ್ಮಾನಿಸಲಾಯಿತು.