ರೈಲ್ವೆ ಗೇಟ್ನಿಂದ 88-ಮುದ್ಲಾಪುರ, ಬಸವನದುರ್ಗ, ಕಳ್ಳಿರಾಂಪುರ, ಬೆಳಗೋಡು, ನರಸಾಪುರ ಸೇರಿದಂತೆ ಇತರೆ ಗ್ರಾಮಗಳ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಹಾಗೂ ಸಾರ್ವಜನಿಕರಿಗೆ ನಿತ್ಯ ಸಂಚರಿಸಲು ಬಹಳ ಸಮಸ್ಯೆ ಆಗುತ್ತಿದೆ. ಪದೇ ಪದೇ ಗೂಡ್ಸ್, ಪ್ಯಾಸೆಂಜರ್ ರೈಲುಗಳ ಓಡಾಟದಿಂದ ಗೇಟ್ ಹಾಕಲಾಗುತ್ತದೆ. ತುರ್ತು ಕೆಲಸಗಳಿಗೆ, ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.