<p>ಕೊಟ್ಟೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ರೈತರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಖರೀದಿ ಕೇಂದ್ರ ತೆರೆದರೆ ಸರ್ಕಾರದ ಉದ್ದೇಶ ಈಡೇರದಿರುವುದು ಖರೀದಿ ಕೇಂದ್ರದ ನಿರ್ವಹಣೆ ನೋಡಿಕೊಳ್ಳುವವರ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.</p>.<p>ಕೊಟ್ಟೂರಿನಲ್ಲಿ ರಾಗಿ ಸಂಗ್ರಹಣೆಗೆ ಉಗ್ರಾಣ ಕೊರತೆ ಇರುವುದರಿಂದ ಖರೀದಿಸಿದ ರಾಗಿಯನ್ನು ಹರಿಹರದ ಉಗ್ರಾಣಕ್ಕೆ ಸಾಗಿಸಲು ಕೊಪ್ಪಳದ ಹಮಾಲ ಟ್ರಾನ್ಸ್ ಪೋರ್ಟ್ ನವರಿಗೆ ಗುತ್ತಿಗೆ ನೀಡಿದೆ. ಕೊಟ್ಟೂರು ಕೇಂದ್ರದಲ್ಲಿ 2700 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು ಸಾಗಾಣಿಕೆಗೆ ದಿನ ನಿತ್ಯ 8 ರಿಂದ 10 ಲಾರಿಗಳ ಅವಶ್ಯಕತೆ ಇದೆ. ಆದರೆ ಗುತ್ತಿಗೆದಾರರು ದಿನಕ್ಕೆ ಐದು ಲಾರಿಗಳನ್ನು ಮಾತ್ರ ಸಾಗಾಟಕ್ಕೆ ಕಳಿಸುತ್ತಿದ್ದು ಚಾಲಕರು ಹಾಗೂ ಹಮಾಲರ ಸಮಸ್ಯಯಿಂದ ಖರೀದಿ ಕಾರ್ಯ ಚುರುಕು ಪಡೆಯದೆ ರೈತರು ನಾಲ್ಕೈದು ದಿನಗಳ ಕಾಲ ವಾಹನಗಳ ಸಮೇತ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಖರೀದಿ ಕೇಂದ್ರದವರು ತೂಕ ಮಾಡಿದ ರಾಗಿಯನ್ನು ಲಾರಿ ಲೋಡ್ ಮಾಡಿಕೊಂಡು ಹೋಗುವವರಿಗೂ ಬೇರೆ ರೈತರಿಂದ ರಾಗಿಯನ್ನ ಖರೀದಿಸುವುದಿಲ್ಲ ಈ ಎಲ್ಲಾ ಸಮಸ್ಯೆಗಳಿಂದ ರೈತರು ಬಳಲುವಂತಾಗಿದೆ. ಖರೀದಿ ಕೇಂದ್ರದ ಬಳಿ ಕಳೆದ ನಾಲ್ಕೈದು ದಿನಗಳಿಂದ ಕಾಯುತ್ತಿರುವುದರಿಂದ ವಾಹನ ಬಾಡಿಗೆ ಹಾಗೂ ಉಟೋಪಚಾರ ಮುಂತಾದ ಖರ್ಚುಗಳಿಂದ ನಮಗೆ ದೊರೆಯುವ ಲಾಭವು ಅಷ್ಟ ಕಷ್ಟೆ ಎಂದು ಹಾರಕನಾಳ್ ಗ್ರಾಮದ ರೈತ ಪಿ.ಎಂ.ವೀರಭದ್ರಯ್ಯ ಆಕ್ರೋಶ ವ್ಯಕ್ತಪಡಿಸಿದರು.</p>.<p>ನೋಂದಣಿ ಮಾಡಿದ ಎಲ್ಲಾ ರೈತರ ರಾಗಿಯನ್ನ ಮೇ 31 ರವರೆಗೆ ಖರೀದಿಸುವೆವು ರೈತರಿಗೆ ಟೋಕನ್ ಕೊಟ್ಟಿದ್ದೇವೆ ಆ ರೀತಿ ಬಂದರೆ ಕಾಯುವ ಸಮಸ್ಯೆ ಎದುರಾಗಲ್ಲ ಎಂದು ಖರೀದಿ ಕೇಂದ್ರದ ಕೊಟ್ರೇಶಗೌಡ ತಿಳಿಸಿದರು.</p>.<p>ಖರೀದಿ ಕೇಂದ್ರದ ಸಮಸ್ಯಯನ್ನು ಶೀಘ್ರದಲ್ಲಿ ಪರಿಹರಿಸಿ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ತಹಶೀಲ್ದಾರ್ ಜಿ.ಕೆ.ಅಮರೀಶ್ ಹೇಳಿದರು. ಖರೀದಿ ಕೇಂದ್ರದ ಬಳಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಅನುಕುಲ ಕಲ್ಪಿಸಿಕೊಡಬೇಕೆಂಬುದು ರೈತರ ಒತ್ತಾಸೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಟ್ಟೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ರೈತರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಖರೀದಿ ಕೇಂದ್ರ ತೆರೆದರೆ ಸರ್ಕಾರದ ಉದ್ದೇಶ ಈಡೇರದಿರುವುದು ಖರೀದಿ ಕೇಂದ್ರದ ನಿರ್ವಹಣೆ ನೋಡಿಕೊಳ್ಳುವವರ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.</p>.<p>ಕೊಟ್ಟೂರಿನಲ್ಲಿ ರಾಗಿ ಸಂಗ್ರಹಣೆಗೆ ಉಗ್ರಾಣ ಕೊರತೆ ಇರುವುದರಿಂದ ಖರೀದಿಸಿದ ರಾಗಿಯನ್ನು ಹರಿಹರದ ಉಗ್ರಾಣಕ್ಕೆ ಸಾಗಿಸಲು ಕೊಪ್ಪಳದ ಹಮಾಲ ಟ್ರಾನ್ಸ್ ಪೋರ್ಟ್ ನವರಿಗೆ ಗುತ್ತಿಗೆ ನೀಡಿದೆ. ಕೊಟ್ಟೂರು ಕೇಂದ್ರದಲ್ಲಿ 2700 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು ಸಾಗಾಣಿಕೆಗೆ ದಿನ ನಿತ್ಯ 8 ರಿಂದ 10 ಲಾರಿಗಳ ಅವಶ್ಯಕತೆ ಇದೆ. ಆದರೆ ಗುತ್ತಿಗೆದಾರರು ದಿನಕ್ಕೆ ಐದು ಲಾರಿಗಳನ್ನು ಮಾತ್ರ ಸಾಗಾಟಕ್ಕೆ ಕಳಿಸುತ್ತಿದ್ದು ಚಾಲಕರು ಹಾಗೂ ಹಮಾಲರ ಸಮಸ್ಯಯಿಂದ ಖರೀದಿ ಕಾರ್ಯ ಚುರುಕು ಪಡೆಯದೆ ರೈತರು ನಾಲ್ಕೈದು ದಿನಗಳ ಕಾಲ ವಾಹನಗಳ ಸಮೇತ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಖರೀದಿ ಕೇಂದ್ರದವರು ತೂಕ ಮಾಡಿದ ರಾಗಿಯನ್ನು ಲಾರಿ ಲೋಡ್ ಮಾಡಿಕೊಂಡು ಹೋಗುವವರಿಗೂ ಬೇರೆ ರೈತರಿಂದ ರಾಗಿಯನ್ನ ಖರೀದಿಸುವುದಿಲ್ಲ ಈ ಎಲ್ಲಾ ಸಮಸ್ಯೆಗಳಿಂದ ರೈತರು ಬಳಲುವಂತಾಗಿದೆ. ಖರೀದಿ ಕೇಂದ್ರದ ಬಳಿ ಕಳೆದ ನಾಲ್ಕೈದು ದಿನಗಳಿಂದ ಕಾಯುತ್ತಿರುವುದರಿಂದ ವಾಹನ ಬಾಡಿಗೆ ಹಾಗೂ ಉಟೋಪಚಾರ ಮುಂತಾದ ಖರ್ಚುಗಳಿಂದ ನಮಗೆ ದೊರೆಯುವ ಲಾಭವು ಅಷ್ಟ ಕಷ್ಟೆ ಎಂದು ಹಾರಕನಾಳ್ ಗ್ರಾಮದ ರೈತ ಪಿ.ಎಂ.ವೀರಭದ್ರಯ್ಯ ಆಕ್ರೋಶ ವ್ಯಕ್ತಪಡಿಸಿದರು.</p>.<p>ನೋಂದಣಿ ಮಾಡಿದ ಎಲ್ಲಾ ರೈತರ ರಾಗಿಯನ್ನ ಮೇ 31 ರವರೆಗೆ ಖರೀದಿಸುವೆವು ರೈತರಿಗೆ ಟೋಕನ್ ಕೊಟ್ಟಿದ್ದೇವೆ ಆ ರೀತಿ ಬಂದರೆ ಕಾಯುವ ಸಮಸ್ಯೆ ಎದುರಾಗಲ್ಲ ಎಂದು ಖರೀದಿ ಕೇಂದ್ರದ ಕೊಟ್ರೇಶಗೌಡ ತಿಳಿಸಿದರು.</p>.<p>ಖರೀದಿ ಕೇಂದ್ರದ ಸಮಸ್ಯಯನ್ನು ಶೀಘ್ರದಲ್ಲಿ ಪರಿಹರಿಸಿ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ತಹಶೀಲ್ದಾರ್ ಜಿ.ಕೆ.ಅಮರೀಶ್ ಹೇಳಿದರು. ಖರೀದಿ ಕೇಂದ್ರದ ಬಳಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಅನುಕುಲ ಕಲ್ಪಿಸಿಕೊಡಬೇಕೆಂಬುದು ರೈತರ ಒತ್ತಾಸೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>