<p><strong>ಕುಡತಿನಿ (ಸಂಡೂರು):</strong> ಪಟ್ಟಣದ ಸೀತಾರಾಮ, ದೊಡ್ಡ ಆಂಜನೇಯಸ್ವಾಮಿಯ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.</p>.<p>ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಬಂದ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ಆರಂಭವಾಯಿತು.</p>.<p>ಕುಡತಿನಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಸಿದ್ದಮನಹಳ್ಳಿ, ಏಳುಬೆಂಚಿ, ದರೋಜಿ, ತಿಮ್ಮಾಲಾಪುರ, ಹರಗಿನ ಡೋಣಿ, ವೇಣಿ ವೀರಾಪುರ, ತೋರಣಗಲ್ಲು, ಡಿ.ಅಂತಾಪುರ, ಸುಲ್ತಾನಾಪುರ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.</p>.<p>ರಸ್ತೆಯ ಉದ್ದಕ್ಕೂ ನೆರದಿದ್ದ ವಿವಿಧ ಗ್ರಾಮಗಳ, ಪಟ್ಟಣದ ಭಕ್ತರು ಸ್ವಾಮಿಯ ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸರ್ಮಪಿಸಿದರು.</p>.<p>ದೇವಸ್ಥಾನದ ಆಡಳಿತ ಮಂಡಳಿ, ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಮಡಿ ರಥೋತ್ಸವ, ರಥಾಂಗ ಹೋಮ ನೆರವೇರಿತು. ರಥದ ತುಂಬಾ ವಿವಿಧ ರೀತಿಯ ಸೇವಂತಿ, ಚೆಂಡು ಹೂ, ಮಲ್ಲಿಗೆಯ ಹೂಗಳಿಂದ ತೇರನ್ನು ಸಿಂಗರಿಸಲಾಗಿತ್ತು. ಬಣ್ಣದ ಬಾವುಟಗಳು, ತೆಂಗು, ಬಾಳೆ ಗರಿಗಳಿಂದ ರಥವನ್ನು ಆಲಂಕಾರಮಾಡಲಾಗಿತ್ತು.</p>.<p>ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕಂಕಣ ಮಹೋತ್ಸವ, ಪಂಚಾಮೃತ ಅಭಿಷೇಕ, ಬಲಿಹರಣ, ಪಾಯಾಸ ನೈವೇದ್ಯ, ಆಗಮ ಹೋಮ, ಎಲೆಪೂಜೆ ಸೇರಿದಂತೆ ಇತರೆ ಪೂಜೆಗಳು ಭಕ್ತಿ ಪೂರ್ವಕವಾಗಿ ಜರುಗಿದವು.</p>.<p>ರಥೋತ್ಸವದ ಅಂಗವಾಗಿ ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ಅನ್ನ ಸಂತರ್ಪಣೆ, ಕನಕದಾಸ ಯುವಕ ಸಂಘದ ವತಿಯಿಂದ ಮಜ್ಜಿಗೆ ಸೇವೆ ನಡೆಯಿತು. ಭಜನೆ, ಕುಂಭಮೇಳ, ಕೋಲಾಟ, ಡೊಳ್ಳು, ಇತರೆ ಕಲಾ ತಂಡಗಳು ಪಾಲ್ಗೊಂಡಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಡತಿನಿ (ಸಂಡೂರು):</strong> ಪಟ್ಟಣದ ಸೀತಾರಾಮ, ದೊಡ್ಡ ಆಂಜನೇಯಸ್ವಾಮಿಯ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.</p>.<p>ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಬಂದ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ಆರಂಭವಾಯಿತು.</p>.<p>ಕುಡತಿನಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಸಿದ್ದಮನಹಳ್ಳಿ, ಏಳುಬೆಂಚಿ, ದರೋಜಿ, ತಿಮ್ಮಾಲಾಪುರ, ಹರಗಿನ ಡೋಣಿ, ವೇಣಿ ವೀರಾಪುರ, ತೋರಣಗಲ್ಲು, ಡಿ.ಅಂತಾಪುರ, ಸುಲ್ತಾನಾಪುರ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.</p>.<p>ರಸ್ತೆಯ ಉದ್ದಕ್ಕೂ ನೆರದಿದ್ದ ವಿವಿಧ ಗ್ರಾಮಗಳ, ಪಟ್ಟಣದ ಭಕ್ತರು ಸ್ವಾಮಿಯ ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸರ್ಮಪಿಸಿದರು.</p>.<p>ದೇವಸ್ಥಾನದ ಆಡಳಿತ ಮಂಡಳಿ, ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಮಡಿ ರಥೋತ್ಸವ, ರಥಾಂಗ ಹೋಮ ನೆರವೇರಿತು. ರಥದ ತುಂಬಾ ವಿವಿಧ ರೀತಿಯ ಸೇವಂತಿ, ಚೆಂಡು ಹೂ, ಮಲ್ಲಿಗೆಯ ಹೂಗಳಿಂದ ತೇರನ್ನು ಸಿಂಗರಿಸಲಾಗಿತ್ತು. ಬಣ್ಣದ ಬಾವುಟಗಳು, ತೆಂಗು, ಬಾಳೆ ಗರಿಗಳಿಂದ ರಥವನ್ನು ಆಲಂಕಾರಮಾಡಲಾಗಿತ್ತು.</p>.<p>ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕಂಕಣ ಮಹೋತ್ಸವ, ಪಂಚಾಮೃತ ಅಭಿಷೇಕ, ಬಲಿಹರಣ, ಪಾಯಾಸ ನೈವೇದ್ಯ, ಆಗಮ ಹೋಮ, ಎಲೆಪೂಜೆ ಸೇರಿದಂತೆ ಇತರೆ ಪೂಜೆಗಳು ಭಕ್ತಿ ಪೂರ್ವಕವಾಗಿ ಜರುಗಿದವು.</p>.<p>ರಥೋತ್ಸವದ ಅಂಗವಾಗಿ ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ಅನ್ನ ಸಂತರ್ಪಣೆ, ಕನಕದಾಸ ಯುವಕ ಸಂಘದ ವತಿಯಿಂದ ಮಜ್ಜಿಗೆ ಸೇವೆ ನಡೆಯಿತು. ಭಜನೆ, ಕುಂಭಮೇಳ, ಕೋಲಾಟ, ಡೊಳ್ಳು, ಇತರೆ ಕಲಾ ತಂಡಗಳು ಪಾಲ್ಗೊಂಡಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>