<p><strong>ಸಿರುಗುಪ್ಪ</strong>: ಬಿರುಬಿಸಿಲಿಗೆ ಕಾದು ಕೆಂಡಂದಂತಾಗಿದ್ದ ಭೂಮಿಗೆ ಮಂಗಳವಾರ ಸಂಜೆ ಆಲಿಕಲ್ಲು ಸಹಿತ ಜೋರಾಗಿ ಸುರಿದ ಮಳೆಯಿಂದ ಇಳೆ ತಂಪಾಯಿತು.</p>.<p>ಹಲವು ದಿನಗಳಿಂದ ವಿಪರೀತ ಬಿಸಿಲಿನಿಂದಾಗಿ ಜನ ಬೇಸತ್ತು ಹೋಗಿದ್ದರು. ಮಂಗಳವಾರ ಬೆಳಿಗ್ಗೆ ಎಂದಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಬಿಸಿಲು ಇತ್ತು. ಸಂಜೆಯಾಗುತ್ತಿದ್ದಂತೆಯೇ, ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು.</p>.<p>ಸಿರುಗುಪ್ಪ, ತಾಲ್ಲೂಕಿನ, ಅಗಸನೂರು, ಇಬ್ರಾಹಿಂಪುರ, ಬಾಗೇವಾಡಿ, ರಾರಾವಿ, ಬಗ್ಗೂರು, ಬಂಡ್ರಾಳ, ರಾವಿಹಾಳ್, ಭೈರಗಾಮಿದಿನ್ನಿ, ಅಗಸನೂರು, ಮಿಟ್ಟೆಸೂಗೂರು, ಗುಬ್ಬಿಹಾಳು ಶಾಲಿಗನೂರು, ಪೊಪ್ಪನಾಳನಲ್ಲಿ ಅಲಿಕಲ್ಲು ಮಳೆ ಬಂದಿದೆ.</p>.<p>ಮಳೆನೀರಿನಿಂದಾಗಿ ಚರಂಡಿಗಳು ತುಂಬಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದಿನದ ಮಾರುಕಟ್ಟೆಯಲ್ಲಿ ಚರಂಡಿಯ ನೀರು ನಿಂತುಕೊಂಡು ದುರ್ವಾಸನೆ ಬೀರುತ್ತಿದೆ.</p>.<p>ತಾಲ್ಲೂಕಿನ ದೇಶನೂರು ಗ್ರಾಮದ ವಿನಾಯಕ ನಗರ ಕ್ಯಾಂಪ್ನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಉರಿಯಿತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ</strong>: ಬಿರುಬಿಸಿಲಿಗೆ ಕಾದು ಕೆಂಡಂದಂತಾಗಿದ್ದ ಭೂಮಿಗೆ ಮಂಗಳವಾರ ಸಂಜೆ ಆಲಿಕಲ್ಲು ಸಹಿತ ಜೋರಾಗಿ ಸುರಿದ ಮಳೆಯಿಂದ ಇಳೆ ತಂಪಾಯಿತು.</p>.<p>ಹಲವು ದಿನಗಳಿಂದ ವಿಪರೀತ ಬಿಸಿಲಿನಿಂದಾಗಿ ಜನ ಬೇಸತ್ತು ಹೋಗಿದ್ದರು. ಮಂಗಳವಾರ ಬೆಳಿಗ್ಗೆ ಎಂದಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಬಿಸಿಲು ಇತ್ತು. ಸಂಜೆಯಾಗುತ್ತಿದ್ದಂತೆಯೇ, ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು.</p>.<p>ಸಿರುಗುಪ್ಪ, ತಾಲ್ಲೂಕಿನ, ಅಗಸನೂರು, ಇಬ್ರಾಹಿಂಪುರ, ಬಾಗೇವಾಡಿ, ರಾರಾವಿ, ಬಗ್ಗೂರು, ಬಂಡ್ರಾಳ, ರಾವಿಹಾಳ್, ಭೈರಗಾಮಿದಿನ್ನಿ, ಅಗಸನೂರು, ಮಿಟ್ಟೆಸೂಗೂರು, ಗುಬ್ಬಿಹಾಳು ಶಾಲಿಗನೂರು, ಪೊಪ್ಪನಾಳನಲ್ಲಿ ಅಲಿಕಲ್ಲು ಮಳೆ ಬಂದಿದೆ.</p>.<p>ಮಳೆನೀರಿನಿಂದಾಗಿ ಚರಂಡಿಗಳು ತುಂಬಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದಿನದ ಮಾರುಕಟ್ಟೆಯಲ್ಲಿ ಚರಂಡಿಯ ನೀರು ನಿಂತುಕೊಂಡು ದುರ್ವಾಸನೆ ಬೀರುತ್ತಿದೆ.</p>.<p>ತಾಲ್ಲೂಕಿನ ದೇಶನೂರು ಗ್ರಾಮದ ವಿನಾಯಕ ನಗರ ಕ್ಯಾಂಪ್ನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಉರಿಯಿತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>