<p><strong>ಕಂಪ್ಲಿ (ಬಳ್ಳಾರಿ ಜಿಲ್ಲೆ):</strong> ‘ವಕ್ಫ್ ಎಂಬ ಕಾನೂನು ರದ್ದಾಗಬೇಕು ಎನ್ನುವವರೇ ನಿಜವಾದ ಸ್ವಾಮೀಜಿಗಳು. ಅವರ ಪಾದಕ್ಕೆ ನಮಸ್ಕರಿಸುವೆ ಹೊರತು ಪುಕ್ಸಟ್ಟೆ ಸ್ವಾಮೀಜಿಗಳಿಗಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. </p>.<p>ಕಂಪ್ಲಿಯಲ್ಲಿ ಶನಿವಾರ ‘ವಕ್ಫ್ ಹಠಾವೋ ದೇಶ ಬಚಾವೋ’ ಎರಡನೇ ಹಂತದ ಹೋರಾಟದಲ್ಲಿ ಮಾತನಾಡಿದ ಅವರು, ‘ವಕ್ಫ್ ನೋಟಿಸ್ ಕುರಿತು ಒಬ್ಬ ಸ್ವಾಮೀಜಿಯು ಬಾಯಿ ಬಿಚ್ಚಲಿಲ್ಲ. ಇಂಥ ಸ್ವಾಮೀಜಿಗಳು ನಮಗೆ ಬೇಕೆ’ ಎಂದರು.</p>.<p>‘ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳುತ್ತಾರೆ. ಅದರೆ, ಸಂಗೊಳ್ಳಿ ರಾಯಣ್ಣ ಆಗಿ ಹುಟ್ಟುವುದಾಗಿ ಹೇಳಲ್ಲ. ನಾನು ಮುಂದಿನ ಜನ್ಮದಲ್ಲೂ ಹಿಂದೂ ಆಗುತ್ತೇನೆ. ತಪ್ಪಿಯೂ ಮುಸ್ಲಿಂ ಆಗುವುದಿಲ್ಲ’ ಎಂದರು. </p>.<p>ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, ‘ರಾಜಕಾರಣಿಗಳು ರಾಜಕೀಯದ ಕಾರಣಕ್ಕೇ ಎಲ್ಲವನ್ನೂ ಮಾಡುತ್ತಾರೆ. ಕರ್ನಾಟಕದ ತುಂಬ ಹೊಂದಾಣಿಕೆ ರಾಜಕಾರಣಿಗಳೇ ತುಂಬಿದ್ದಾರೆ. ರೈತರು ಮಠ ಮಾನ್ಯಗಳ, ದೇಗುಲಗಳ ಆಸ್ತಿ ರಕ್ಷಣೆಗೆ ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಈ ಅಭಿಯಾನ’ ಎಂದರು.</p>.<p>ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿದರು. ಕಂಪ್ಲಿ ಕಲ್ಮಠದ ಪ್ರಭುಸ್ವಾಮೀಜಿ, ಹಂಪಿ ಮಾತಂಗಪರ್ವತದ ಪೂರ್ಣಾನಂದ ಸ್ವಾಮೀಜಿ, ಪ್ರಮುಖರಾದ ಜೆ.ಎಂ.ಸಿದ್ದೇಶ್ವರ, ಕುಮಾರ ಬಂಗಾರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ (ಬಳ್ಳಾರಿ ಜಿಲ್ಲೆ):</strong> ‘ವಕ್ಫ್ ಎಂಬ ಕಾನೂನು ರದ್ದಾಗಬೇಕು ಎನ್ನುವವರೇ ನಿಜವಾದ ಸ್ವಾಮೀಜಿಗಳು. ಅವರ ಪಾದಕ್ಕೆ ನಮಸ್ಕರಿಸುವೆ ಹೊರತು ಪುಕ್ಸಟ್ಟೆ ಸ್ವಾಮೀಜಿಗಳಿಗಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. </p>.<p>ಕಂಪ್ಲಿಯಲ್ಲಿ ಶನಿವಾರ ‘ವಕ್ಫ್ ಹಠಾವೋ ದೇಶ ಬಚಾವೋ’ ಎರಡನೇ ಹಂತದ ಹೋರಾಟದಲ್ಲಿ ಮಾತನಾಡಿದ ಅವರು, ‘ವಕ್ಫ್ ನೋಟಿಸ್ ಕುರಿತು ಒಬ್ಬ ಸ್ವಾಮೀಜಿಯು ಬಾಯಿ ಬಿಚ್ಚಲಿಲ್ಲ. ಇಂಥ ಸ್ವಾಮೀಜಿಗಳು ನಮಗೆ ಬೇಕೆ’ ಎಂದರು.</p>.<p>‘ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳುತ್ತಾರೆ. ಅದರೆ, ಸಂಗೊಳ್ಳಿ ರಾಯಣ್ಣ ಆಗಿ ಹುಟ್ಟುವುದಾಗಿ ಹೇಳಲ್ಲ. ನಾನು ಮುಂದಿನ ಜನ್ಮದಲ್ಲೂ ಹಿಂದೂ ಆಗುತ್ತೇನೆ. ತಪ್ಪಿಯೂ ಮುಸ್ಲಿಂ ಆಗುವುದಿಲ್ಲ’ ಎಂದರು. </p>.<p>ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, ‘ರಾಜಕಾರಣಿಗಳು ರಾಜಕೀಯದ ಕಾರಣಕ್ಕೇ ಎಲ್ಲವನ್ನೂ ಮಾಡುತ್ತಾರೆ. ಕರ್ನಾಟಕದ ತುಂಬ ಹೊಂದಾಣಿಕೆ ರಾಜಕಾರಣಿಗಳೇ ತುಂಬಿದ್ದಾರೆ. ರೈತರು ಮಠ ಮಾನ್ಯಗಳ, ದೇಗುಲಗಳ ಆಸ್ತಿ ರಕ್ಷಣೆಗೆ ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಈ ಅಭಿಯಾನ’ ಎಂದರು.</p>.<p>ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿದರು. ಕಂಪ್ಲಿ ಕಲ್ಮಠದ ಪ್ರಭುಸ್ವಾಮೀಜಿ, ಹಂಪಿ ಮಾತಂಗಪರ್ವತದ ಪೂರ್ಣಾನಂದ ಸ್ವಾಮೀಜಿ, ಪ್ರಮುಖರಾದ ಜೆ.ಎಂ.ಸಿದ್ದೇಶ್ವರ, ಕುಮಾರ ಬಂಗಾರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>