ಕಲ್ಪಾನಾ ಹಾಗೂ ಮೃತ ರೇಷ್ಮಾ ಸಂಬಂಧಿಗಳಾಗಿದ್ದು, ಕೃಷಿ ಕೆಲಸಕ್ಕೆಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದಾರೆ. ಕಲ್ಪನಾ ಅವರು ಎರಡು ವರ್ಷದ ಮಗು ಶಶಾಂಕನನ್ನು ಜೊತೆಗೆ ಕರೆದೊಯ್ದಿದ್ದರು. ಮಧ್ಯಾಹ್ನ ಕುಡಿಯಲು ನೀರು ತರಲು ಕಲ್ಪನಾ ತಮ್ಮ ಮಗು ಶಂಶಾಕನೊಂದಿಗೆ ಬಾವಿಗೆ ಇಳಿಯುವ ವೇಳೆ ಕಾಲು ಜಾರಿ ನೀರಲ್ಲಿ ಬಿದ್ದಳು. ಅಲ್ಲಿಯೇ ಇದ್ದ ರೇಷ್ಮಾ ಅವರು ರಕ್ಷಿಸುವ ದಾವಂತದಲ್ಲಿ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.