ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳವಿಲ್ಲದೆ ಭಾರತದ ಇತಿಹಾಸ, ನಂಬಿಕೆ, ರಾಮ ಅಪೂರ್ಣ : ಪ್ರಧಾನಿ ಮೋದಿ

Last Updated 11 ಮೇ 2018, 10:14 IST
ಅಕ್ಷರ ಗಾತ್ರ

ಜನಕಪುರ(ನೇಪಾಳ) : ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆಗಾಗಿ ನೇಪಾಳಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. 

ಮೋದಿ ಪ್ರಧಾನಿಯಾದ ಬಳಿಕ ನೇಪಾಳಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ. ನೇಪಾಳದಲ್ಲಿ ರಚನೆಯಾಗಿರುವ ಹೊಸ ಸರ್ಕಾರದೊಂದಿಗಿನ ಮೊದಲ ಮಾತುಕತೆ ಇದು. 

ನೇಪಾಳದ ಅಭಿವೃದ್ಧಿಯ ಕುರಿತು ಪ್ರಧಾನಿ ಮೋದಿ ಮಾತನಾಡುತ್ತ, ‘ಎಲ್ಲರೊಂದಿಗೆ, ಎಲ್ಲರ ವಿಕಾಸವೆಂದು(ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌) ನಾನು ಹೇಳುವಾಗ, ಅದರಲ್ಲಿ ಭಾರತ ಮಾತ್ರ ಸೇರುವುದಿಲ್ಲ. ಜತೆಗೆ ನೆರೆಹೊರೆಯ ದೇಶಗಳು ಒಳಗೊಂಡಿರುತ್ತವೆ. ನೆರೆಯ ದೇಶಗಳೂ ಅಭಿವೃದ್ಧಿಯಾಗಲೆಂದು ನಾನು ಸದಾ ಆಶಿಸುತ್ತೇನೆ. ನೇಪಾಳ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ನನಗೆ ಸಂತೋಷವಿದೆ’ ಎಂದರು. 

‘ದೈವಸ್ವರೂಪಿ ಸೀತೆಯ ಜನ್ಮಸ್ಥಳಕ್ಕೆ ಭೇಟಿನೀಡಿ ಪ್ರಾರ್ಥಿಸಬೇಕು ಎಂಬುದು ನನ್ನ ಬಹುದಿನಗಳ ಬೇಡಿಕೆಯಾಗಿತ್ತು. ಇಂದು ಆ ಅವಕಾಶ ಕೂಡಿ ಬಂದಿರುವುದಕ್ಕೆ ನನಗೆ ಸಂತಸವಾಗಿದೆ’ ಎಂದು ಜನಕಪುರದ ಭೇಟಿ ಬಳಿಕ ಮಾತನಾಡಿದರು.  

‘ಭಾರತ ಮತ್ತು ನೇಪಾಳದ ಜನರು ಪರಸ್ಪರ ಗೌರವ ಭಾವ ಹೊಂದಿದ್ದಾರೆ. ನೇಪಾಳ ಹಲವಾರು ದಶಕಗಳಿಂದ ಅಧ್ಯಾತ್ಮದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಈ ದೇಶದ ಹೊರತು, ಭಾರತದ ನಂಬಿಕೆಗಳು ಅಪೂರ್ಣವಾಗಲಿವೆ’ ಎಂದು ಎರಡು ದೇಶಗಳ ನಡುವಿನ ಸಂಬಂಧ ಬಲಪಡಿಸುವ ಮಾತುಗಳನ್ನು ಆಡಿದರು. 

ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಸೀತೆಯ ಜನ್ಮಸ್ಥಳ ಜನಕಪುರದಿಂದ ರಾಮನ ಜನ್ಮಸ್ಥಳ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಬಸ್‌ ಸೇವೆಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT