ದೊಡ್ಡಬಳ್ಳಾಪುರ ನಗರದ ಸಿದ್ದೇನಾಯಕನಹಳ್ಳಿ ಬಳಿಯ ಗೌರಿ ವೈನ್ಸ್ ಷಟರ್ ಮುರಿದು ಮದ್ಯದ ಬಾಟಲಿಗಳು ಮತ್ತು ನಗದು ಕಳವು ಮಾಡಲಾಗಿತ್ತು. ನಂತರ ತಾಲ್ಲೂಕಿನಾದ್ಯಂತ ಮದ್ಯ ಕಳ್ಳತನ ಪ್ರಕರಣ ದಾಖಲಾಗಿದ್ದವು. ನಂದಿ ಕ್ರಾಸ್ ಬಳಿಯ ಮನು ವೈನ್ಸ್, ತೂಬಗೆರೆ ಹರ್ಷ ಬಾರ್ ಅಂಡ್ ರೆಸ್ಟೋರೆಂಟ್, ಕೊನಘಟ್ಟದ ಎಂಎಸ್ಐಎಲ್, ತಿಪ್ಪೂರು ಗ್ರಾಮದ ಹಂಸ ವೈನ್ಸ್ ಷಟರ್ ಮುರಿದು ಮದ್ಯ, ಹಣ ಕಳ್ಳತನ ಮಾಡಲಾಗಿತ್ತು. ನಾಗರಾಜ, ಅಂಜಿ, ನವೀನ್ಕುಮಾರ್, ಶಶಿಕುಮಾರ್ ಎಂಬುವರನ್ನು ಬಂಧಿಸಿ 13 ಬಾಕ್ಸ್ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು,