ನಟ ವಸಿಷ್ಠಸಿಂಹ ಮಾತನಾಡಿ, 2020ರ ಏ.24ರಂದು ಸಾನಿಯಾ ಮತ್ತು ರಾಮು ಜೋಡಿಗೆ ಜನಿಸಿದ್ದ ಸಿಂಹದ ಮರಿ ದತ್ತು ಪಡೆದಿದ್ದೇನೆ. ಏ.24 ಡಾ.ರಾಜ್ಕುಮಾರ್ ಅವರ ಜನ್ಮ ದಿನವಾಗಿರುವುದು ದತ್ತು ಪಡೆಯಲು ಪ್ರೇರಣೆ ನೀಡಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದಾಗ ದತ್ತು ಪಡೆಯಲು ನಿರ್ಧರಿಸಿದ್ದೆ. ಅದರಂತೆ ಸಿಂಹದ ಮರಿ ದತ್ತು ಪಡೆಯಲಾಗಿದೆ. ವನ್ಯ ಜೀವಿಗಳ ಸಂರಕ್ಷಣೆ ಸಮಾಜದ ಜವಬ್ದಾರಿಯಾಗಿದೆ. ಈ ಕಾರ್ಯದಲ್ಲಿ ಕೈಜೋಡಿಸಿರುವುದು ಸಂತಸವಾಗಿದೆ ಎಂದರು.