ದೊಡ್ಡಬಳ್ಳಾಪುರ:ನಗರದ ಬಸ್ ನಿಲ್ದಾಣದಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದಿಂದ ಇತ್ತೀಚೆಗೆ ವಿಷ್ಣು ಅವರ 71ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಘದ ಮುಖ್ಯಸ್ಥ ವಿಜಯಕುಮಾರ್ ಮಾತನಾಡಿ, ವಿಷ್ಣುವರ್ಧನ್ ಕೇವಲ ನಟನಾಗಿರದೆ ಮೇರು ವ್ಯಕ್ತಿತ್ವ ಹೊಂದಿದ್ದರು. ಅವರಲ್ಲಿದ್ದ ಸಾಮಾಜಿಕ ಅಂತಃಕರಣದ ಜೀವಂತಿಕೆಯಿಂದಲೇ ಇಂದಿಗೂ ಜನಮಾನಸದಲ್ಲಿ ಜೀವಂತರಾಗಿದ್ದಾರೆ ಎಂದರು.
ಕೇಕ್ ಕತ್ತರಿಸಿ ಸಿಹಿ ಹಂಚಿಕೆ ಮಾಡಲಾಯಿತು. ಸಂಘದ ಸೋಮಶೇಖರ್, ಮಧುಸೂದನ್, ಡಿ.ಎನ್. ನಾರಾಯಣ, ರಾಮಾಂಜಿನಪ್ಪ, ಡಿ.ಎನ್. ನಾರಾಯಣ, ದೀಪು, ರಕ್ಷಿತ್ಗೌಡ, ಪ್ರದೀಪ್, ಕಿರಣ್ ಇದ್ದರು.
ಜನ್ಮ ದಿನ: ದರ್ಗಾಜೋಗಹಳ್ಳಿಯಲ್ಲಿ ಹೃದಯವಂತ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಜನ್ಮ ದಿನಾಚರಣೆಯನ್ನು ನಿವೃತ್ತ ಯೋಧ ವಿಜಯೇಂದ್ರ ರಾವ್ ಉದ್ಘಾಟಿಸಿದರು.
ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಿದರು. ಕಲಾವಿದರಾದ ಎಚ್. ಪ್ರಕಾಶ್ರಾವ್, ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್, ಎ.ವಿ. ಚಂದ್ರಶೇಖರ್, ಹೃದಯವಂತ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಲಕ್ಷ್ಮಣ್, ಚೇತನ್, ವಿನೋದ್, ಗೋವಿಂದ್, ಮಂಜುನಾಥ್ ಇದ್ದರು.