ಅಲ್ಲದೆ, ತಾಲ್ಲೂಕಿನಲ್ಲಿ ನೀಲಗಿರಿ ಮರಗಳ ತೆರವಿನ ನಂತರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರಾಗಿ, ಜೋಳವನ್ನೇ ಬೆಳೆದಿದ್ದಾರೆ. ಹೀಗಾಗಿ ತಮ್ಮ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳೆ ಪಹಣಿಯಲ್ಲಿ ದಾಖಲಾಗಲು ಅನುಮೋದನೆಗೊಂಡಿದೆಯೇ ಎನ್ನುವುದನ್ನು ಈಗಲೇ ಪರಿಶೀಲಿಸಿಕೊಂಡು ಆಕ್ಷೇಪಣೆ ಸಲ್ಲಿಸಬೇಕು. ಇಲ್ಲವಾದರೆ 2019ನೇ ಸಾಲಿನಲ್ಲಿ ಬೆಳೆದ ರಾಗಿ ಖರೀದಿಸುವಾಗ ಹಲವು ಜನ ರೈತರ ಪಹಣಿಯಲ್ಲಿ ಬೆಳೆ ದಾಖಲಾಗದೆ ಇದ್ದುದ್ದನ್ನೇ ನೆಪಮಾಡಿಕೊಂಡು ಅಧಿಕಾರಿಗಳು ರಾಗಿ ಖರೀದಿ ಮಾಡದೇ ನಿರಾಕರಿಸಿದರು. ಇದೇ ತಪ್ಪನ್ನು ಈ ಬಾರಿಯೂ ಆಗದಂತೆ ರೈತರು ’ಬೆಳೆ ದರ್ಶಕ್‘ ಮೂಲಕ ಪರಿಶೀಲಿಸಿಕೊಂಡು ಆಕ್ಷೇಪ ಸಲ್ಲಿಬೇಕು. ಹಾಗೆಯೇ ಕೃಷಿ ಇಲಾಖೆಗೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕದ ನಕಲು ಪ್ರತಿ ಸಲ್ಲಿಸಿ ‘ಫ್ರೂಟ್’ ಐಡಿಯನ್ನು ಪಡೆಯಬೇಕು ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಬೆಳೆ ದರ್ಶಕ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.