<p><strong>ಆನೇಕಲ್:</strong> ಮೂರನೇ ಮದುವೆ ನಿಶ್ವಿಥರ್ತಾಕ್ಕೆ ಸಜ್ಜಾಗಿದ್ದ ಟೆಕ್ಕಿಯೊಬ್ಬರ ವಿರುದ್ಧ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ತುಮಕೂರು ಚಿಕ್ಕನಾಯಕನಹಳ್ಳಿ ಮೂಲದ ರವಿ ಹಾಗೂ ಅವರ ಕುಟುಂಬದ ಒಂಬತ್ತು ಮಂದಿ ವಿರುದ್ಧ ಮಹಿಳೆಯರಿಗೆ ವಂಚನೆ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಎಚ್ಸಿಎಲ್ ಕಂಪನಿ ಉದ್ಯೋಗಿಯಾಗಿರುವ ಆರೋಪಿ ತಲೆಮರೆಸಿಕೊಂಡಿದ್ದಾರೆ.</p>.<p>ಇಬ್ಬರನ್ನು ಮದುವೆಯಾಗಿ ವಂಚಿಸಿ ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮತ್ತೊಬ್ಬ ಹುಡುಗಿಯೊಂದಿಗೆ ನಿಶ್ವಿತಾರ್ಥ ಮಾಡಿಕೊಳ್ಳಲು ರವಿ ಸಜ್ಜಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಎರಡನೇ ಪತ್ನಿ ನೇಹಾ, ತನ್ನ ಪತಿ ರವಿ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.</p>.<p>2025ರ ನವೆಂಬರ್ನಲ್ಲಿ ಆರೋಪಿಯು ಚನ್ನಪಟ್ಟಣದ ನೇಹಾ ಎಂಬುವರ ಜೊತೆ ಮದುವೆಯಾಗಿದ್ದ. ₹5ಲಕ್ಷ ವರದಕ್ಷಿಣೆ ಪಡೆದಿದ್ದ. ವರದಕ್ಷಿಣೆ ನೀಡದಿದ್ದರೆ ವಿಚ್ಛೇದನ ನೀಡುತ್ತೇನೆ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ನೇಹಾ 2026ರ ಜನವರಿಯಲ್ಲಿ ದೂರು ನೀಡಿದ್ದರು.</p>.<p>‘ರವಿ ಮೊಬೈಲ್ಗೆ ಪದೇ ಪದೇ ಬರುತ್ತಿದ್ದ ಅನಾಮಿಕ ಮಹಿಳೆಯೊಬ್ಬರ ಕರೆಯನ್ನು ಪರಿಶೀಲಿಸಿದಾಗ ಅದು ಪಂಕಜಾ ಎಂಬುವರ ಕರೆ ಎಂದು ಗೊತ್ತಾಯಿತು. ಈ ಬಗ್ಗೆ ಪಂಕಜಾ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಐದು ವರ್ಷಗಳ ಹಿಂದಯೇ ರವಿ ತನ್ನನ್ನು ಮದುವೆಯಾದ ವಿಷಯವನ್ನು ಅವರು ತಿಳಿಸಿದರು. ಈ ಬಗ್ಗೆ ಪತಿಯನ್ನು ಕೇಳಿದಾಗ ಹಲ್ಲೆ ನಡೆಸಿದ. ಗರ್ಭಪಾತ ಮಾಡಿಸಿದ್ದ’ ಎಂದು ನೇಹಾ ದೂರಿನಲ್ಲಿ ಹೇಳಿದ್ದಾರೆ.</p>.<p>ರವಿ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ, ಭಾರತೀಯ ನ್ಯಾಯ ಸಂಹಿತೆ 351, 358(4), 115(2), 352(2). 89, 85, 88ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಗಣಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್:</strong> ಮೂರನೇ ಮದುವೆ ನಿಶ್ವಿಥರ್ತಾಕ್ಕೆ ಸಜ್ಜಾಗಿದ್ದ ಟೆಕ್ಕಿಯೊಬ್ಬರ ವಿರುದ್ಧ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ತುಮಕೂರು ಚಿಕ್ಕನಾಯಕನಹಳ್ಳಿ ಮೂಲದ ರವಿ ಹಾಗೂ ಅವರ ಕುಟುಂಬದ ಒಂಬತ್ತು ಮಂದಿ ವಿರುದ್ಧ ಮಹಿಳೆಯರಿಗೆ ವಂಚನೆ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಎಚ್ಸಿಎಲ್ ಕಂಪನಿ ಉದ್ಯೋಗಿಯಾಗಿರುವ ಆರೋಪಿ ತಲೆಮರೆಸಿಕೊಂಡಿದ್ದಾರೆ.</p>.<p>ಇಬ್ಬರನ್ನು ಮದುವೆಯಾಗಿ ವಂಚಿಸಿ ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮತ್ತೊಬ್ಬ ಹುಡುಗಿಯೊಂದಿಗೆ ನಿಶ್ವಿತಾರ್ಥ ಮಾಡಿಕೊಳ್ಳಲು ರವಿ ಸಜ್ಜಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಎರಡನೇ ಪತ್ನಿ ನೇಹಾ, ತನ್ನ ಪತಿ ರವಿ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.</p>.<p>2025ರ ನವೆಂಬರ್ನಲ್ಲಿ ಆರೋಪಿಯು ಚನ್ನಪಟ್ಟಣದ ನೇಹಾ ಎಂಬುವರ ಜೊತೆ ಮದುವೆಯಾಗಿದ್ದ. ₹5ಲಕ್ಷ ವರದಕ್ಷಿಣೆ ಪಡೆದಿದ್ದ. ವರದಕ್ಷಿಣೆ ನೀಡದಿದ್ದರೆ ವಿಚ್ಛೇದನ ನೀಡುತ್ತೇನೆ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ನೇಹಾ 2026ರ ಜನವರಿಯಲ್ಲಿ ದೂರು ನೀಡಿದ್ದರು.</p>.<p>‘ರವಿ ಮೊಬೈಲ್ಗೆ ಪದೇ ಪದೇ ಬರುತ್ತಿದ್ದ ಅನಾಮಿಕ ಮಹಿಳೆಯೊಬ್ಬರ ಕರೆಯನ್ನು ಪರಿಶೀಲಿಸಿದಾಗ ಅದು ಪಂಕಜಾ ಎಂಬುವರ ಕರೆ ಎಂದು ಗೊತ್ತಾಯಿತು. ಈ ಬಗ್ಗೆ ಪಂಕಜಾ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಐದು ವರ್ಷಗಳ ಹಿಂದಯೇ ರವಿ ತನ್ನನ್ನು ಮದುವೆಯಾದ ವಿಷಯವನ್ನು ಅವರು ತಿಳಿಸಿದರು. ಈ ಬಗ್ಗೆ ಪತಿಯನ್ನು ಕೇಳಿದಾಗ ಹಲ್ಲೆ ನಡೆಸಿದ. ಗರ್ಭಪಾತ ಮಾಡಿಸಿದ್ದ’ ಎಂದು ನೇಹಾ ದೂರಿನಲ್ಲಿ ಹೇಳಿದ್ದಾರೆ.</p>.<p>ರವಿ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ, ಭಾರತೀಯ ನ್ಯಾಯ ಸಂಹಿತೆ 351, 358(4), 115(2), 352(2). 89, 85, 88ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಗಣಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>