<p><strong>ಆನೇಕಲ್: </strong>ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಮಹಿಳಾ ದಿನಾಚರಣೆ ಪ್ರಯುಕ್ತ<strong> </strong>ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಸ್ಪಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಗಿರಿಜಾ ಲೋಕೇಶ್, ಅಕ್ಷತಾ ಪಾಂಡವಪುರ, ವೈಜಯಂತಿ ಕಾಶಿ (ಸಿನಿಮಾ), ಶರ್ಮಿತಾ ಶೆಟ್ಟಿ, ಪ್ರತಿಮಾ ಭಟ್ (ಪತ್ರಿಕೋದ್ಯಮ), ಮಾನಸಿ ಸುಧೀರ್ (ಕಲೆ),ಛಾಯಾ ನಂಜಪ್ಪ (ಕೃಷಿ), ಡಾ.ಗ್ಲೋರಿ ಅಲೆಕ್ಸಾಂಡರ್, ಡಾ.ಆಶಾ ವಿಜಯ್ (ಆರೋಗ್ಯ), ಬಿ.ಎನ್.ಉಷಾ, ವಿಜಯಲಕ್ಷ್ಮಿ (ಕ್ರೀಡೆ) ಮತ್ತು ಸಿ.ಎನ್.ರಾಧಿಕ (ಉದ್ಯಮ) ಅವರಿಗೆ ಅಲಯನ್ಸ್ ಸ್ಪಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಸವಾಲುಗಳ ಮಧ್ಯೆಯು ಮಹಿಳೆಯರು ಅವಕಾಶಗಳನ್ನು ಕಲ್ಪಿಸಿಕೊಂಡು ಉನ್ನತ ಸಾಧನೆ ಮಾಡುತ್ತಿದ್ದಾರೆ. ಸ್ವಸ್ಥ್ಯ ಮತ್ತು ಸುಂದರ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಇಸ್ರೊ ವಿಜ್ಞಾನಿ ಶಿವಾಜಿ ಕೊಣಂದೂರ್ ಹೇಳಿದರು.</p>.<p>ಮಹಿಳಾ ಸಬಲೀಕರಣಕ್ಕೆ ಪ್ರತಿಯೊಬ್ಬರು ಪ್ರಥಮ ಆದ್ಯತೆ ನೀಡಬೇಕು. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಅಲಯನ್ಸ್ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್ ಚೆಬ್ಬಿ ಹೇಳಿದರು. </p>.<p>ಸಾಧನೆಗೆ ಹೆಣ್ಣು ಗಂಡು ಎಂಬ ಬೇಧವಿಲ್ಲ. ತಮ್ಮ ಕ್ಷೇತ್ರದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದಾಗ ಪ್ರತಿಯೊಬ್ಬರು ಉನ್ನತವಾದುದ್ದನ್ನು ಸಾಧಿಸಬಹುದು ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತ ವೇಟ್ ಲಿಫ್ಟರ್ ಉಷಾ.ಬಿ.ಎನ್. ಅಭಿಪ್ರಾಯಪಟ್ಟರು. </p>.<p>ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಶೈಲಾ ಚೆಬ್ಬಿ, ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ, ರಿಜಿಸ್ಟರ್ ಮಠಂ ವಿಶ್ವನಾಥಯ್ಯ, ಮಹಿಳಾ ಸಬಲೀಕರಣ ವಿಭಾಗದ ಸನತ್ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಮಹಿಳಾ ದಿನಾಚರಣೆ ಪ್ರಯುಕ್ತ<strong> </strong>ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಸ್ಪಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಗಿರಿಜಾ ಲೋಕೇಶ್, ಅಕ್ಷತಾ ಪಾಂಡವಪುರ, ವೈಜಯಂತಿ ಕಾಶಿ (ಸಿನಿಮಾ), ಶರ್ಮಿತಾ ಶೆಟ್ಟಿ, ಪ್ರತಿಮಾ ಭಟ್ (ಪತ್ರಿಕೋದ್ಯಮ), ಮಾನಸಿ ಸುಧೀರ್ (ಕಲೆ),ಛಾಯಾ ನಂಜಪ್ಪ (ಕೃಷಿ), ಡಾ.ಗ್ಲೋರಿ ಅಲೆಕ್ಸಾಂಡರ್, ಡಾ.ಆಶಾ ವಿಜಯ್ (ಆರೋಗ್ಯ), ಬಿ.ಎನ್.ಉಷಾ, ವಿಜಯಲಕ್ಷ್ಮಿ (ಕ್ರೀಡೆ) ಮತ್ತು ಸಿ.ಎನ್.ರಾಧಿಕ (ಉದ್ಯಮ) ಅವರಿಗೆ ಅಲಯನ್ಸ್ ಸ್ಪಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಸವಾಲುಗಳ ಮಧ್ಯೆಯು ಮಹಿಳೆಯರು ಅವಕಾಶಗಳನ್ನು ಕಲ್ಪಿಸಿಕೊಂಡು ಉನ್ನತ ಸಾಧನೆ ಮಾಡುತ್ತಿದ್ದಾರೆ. ಸ್ವಸ್ಥ್ಯ ಮತ್ತು ಸುಂದರ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಇಸ್ರೊ ವಿಜ್ಞಾನಿ ಶಿವಾಜಿ ಕೊಣಂದೂರ್ ಹೇಳಿದರು.</p>.<p>ಮಹಿಳಾ ಸಬಲೀಕರಣಕ್ಕೆ ಪ್ರತಿಯೊಬ್ಬರು ಪ್ರಥಮ ಆದ್ಯತೆ ನೀಡಬೇಕು. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಅಲಯನ್ಸ್ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್ ಚೆಬ್ಬಿ ಹೇಳಿದರು. </p>.<p>ಸಾಧನೆಗೆ ಹೆಣ್ಣು ಗಂಡು ಎಂಬ ಬೇಧವಿಲ್ಲ. ತಮ್ಮ ಕ್ಷೇತ್ರದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದಾಗ ಪ್ರತಿಯೊಬ್ಬರು ಉನ್ನತವಾದುದ್ದನ್ನು ಸಾಧಿಸಬಹುದು ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತ ವೇಟ್ ಲಿಫ್ಟರ್ ಉಷಾ.ಬಿ.ಎನ್. ಅಭಿಪ್ರಾಯಪಟ್ಟರು. </p>.<p>ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಶೈಲಾ ಚೆಬ್ಬಿ, ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ, ರಿಜಿಸ್ಟರ್ ಮಠಂ ವಿಶ್ವನಾಥಯ್ಯ, ಮಹಿಳಾ ಸಬಲೀಕರಣ ವಿಭಾಗದ ಸನತ್ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>