<p><strong>ಆನೇಕಲ್</strong>: ಪಟ್ಟಣದ ಆನೇಕಲ್-ಹೊಸೂರು ಮುಖ್ಯ ರಸ್ತೆ ಅವೈಜ್ಞಾನಿಕ ವಿಭಜಕ ಅಪಾಯ ಆಹ್ವಾನಿಸುತ್ತಿದೆ. ಸಂಜೆ ಆಗುತ್ತಿದ್ದಂತೆ ವಿಭಜಕ ಕಾಣದ ಕಾರಣ ಅಪಘಾತ ಸಂಭವಿಸುತ್ತಿದೆ. ಇದೇ ಸ್ಥಳದಲ್ಲಿ ಎರಡು ದಿನದ ಹಿಂದೆ ವ್ಯಕ್ತಿಯೊಬ್ಬರ ಪ್ರಾಣ ಕಳೆದುಕೊಂಡಿದ್ದಾರೆ.</p>.<p>ಆನೇಕಲ್-ಹೊಸೂರು ಮುಖ್ಯ ರಸ್ತೆಯಾಗಿದ್ದು ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಇಲ್ಲಿ ಸಂಚರಿಸುತ್ತವೆ. ತಮಿಳುನಾಡಿಗೆ ಸಂಪರ್ಕ ರಸ್ತೆಯಾಗಿರುವುದರಿಂದ ದಿನದ 24 ಗಂಟೆಯೂ ವಾಹನ ಸಂಚಾರದಿಂದ ಕೂಡಿರುತ್ತದೆ.</p>.<p>ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆಯಾಗಿಸಿ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಅಂದಾಜು ಎರಡು ಕಿ.ಮೀ ವರೆಗೆ ರಸ್ತೆ ವಿಭಜಕ ಇದ್ದರೂ, ಯಾವುದೇ ಸೂಚನೆ ಫಲಕ ಹಾಗೂ ರೆಡಿಯಂ ಅಳವಡಿಸದ ಕಾರಣ ವಾಹನಗಳು ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿದೆ.</p>.<p>ಇಲ್ಲಿ ನಡೆಯುವ ಅಪಘಾತಗಳ ಬಗ್ಗೆ ಪ್ರಕರಣ ದಾಖಲಾಗದ ಕಾರಣ ಪೊಲೀಸ್ ಠಾಣೆಯಲ್ಲಿ ಸ್ಪಷ್ಟ ಅಂಕಿ ಅಂಶ ಇಲ್ಲ. ಸಾರ್ವಜನಿಕರು ಹೇಳುವಂತೆ, ಕಳೆದ ಮೂರು ತಿಂಗಳಿನಲ್ಲಿ 20ಕ್ಕೂ ಹೆಚ್ಚು ಅಪಘಾತ ಸಂಭವಿಸಿದೆ. ಅಂದಾಜು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಅವೈಜ್ಞಾನಿಕ ವಿಭಜಕಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಆದರೂ ಸಂಬಂಧಿಸಿ ಅಧಿಕಾರಿಗಳು ಎಚ್ಚರ ವಹಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ರಸ್ತೆ ವಿಭಜಕಗಳು ರಸ್ತೆಯ ಎರಡು ಬದಿಗಳಲ್ಲಿ ಸಂಚರಿಸುವವರಿಗೆ ಕಾಣಿಸುವಂತಿರಬೇಕು. ಆದರೆ ಈ ಮುಖ್ಯ ರಸ್ತೆಯಲ್ಲಿ ಸಂಚರಿಸುವವರೆಗೆ ವಿಭಜಕ ಕಾಣುವುದಿಲ್ಲ. ರಸ್ತೆಯ ಎರಡು ಕಿ.ಮೀ. ಅಂತರದಲ್ಲಿ ಹಾಕಲಾಗಿದ್ದ ವಿಭಜಕದವನ್ನು ಕಿತ್ತು ಅಂಗಡಿ, ಹೋಟೆಲ್, ಶಾಲೆ, ಮನೆಗಳಿಗೆ ದಾರಿ ಮಾಡಲಾಗಿದೆ. ಈ ಪ್ರಮಾದ 25–30 ಕಡೆ ಆಗಿದೆ. ಇಲ್ಲಿ ಬೈಕ್ಗಳು ರಸ್ತೆ ಕ್ರಾಸ್ ಮಾಡುವಾಗ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ವಾಹನ ಸವಾರರು.</p>.<p>ಅವೈಜ್ಞಾನಿಕ ರಸ್ತೆ ವಿಭಜಕದಿಂದ ಪ್ರಾಣವೇ ಹೊದರೂ ಅಧಿಕಾರಿಗಳು ನಿದ್ದೆಯಿಂದ ಎದ್ದಿಲ್ಲ. ಹಾಗಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕ ವಿಭಜಕಗಳಿಗೆ ಮುಕ್ತಿ ನೀಡಬೇಕು. ಅವಶ್ಯಕತೆ ಇರುವೆಡೆ ಮಾತ್ರ ವಿಭಜಕ ನಿರ್ಮಿಸಬೇಕು. ರಸ್ತೆ ವಿಭಜಕಗಳಿಗೆ ರೇಡಿಯಂ ಅಳವಡಿಸಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-15-943276365</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್</strong>: ಪಟ್ಟಣದ ಆನೇಕಲ್-ಹೊಸೂರು ಮುಖ್ಯ ರಸ್ತೆ ಅವೈಜ್ಞಾನಿಕ ವಿಭಜಕ ಅಪಾಯ ಆಹ್ವಾನಿಸುತ್ತಿದೆ. ಸಂಜೆ ಆಗುತ್ತಿದ್ದಂತೆ ವಿಭಜಕ ಕಾಣದ ಕಾರಣ ಅಪಘಾತ ಸಂಭವಿಸುತ್ತಿದೆ. ಇದೇ ಸ್ಥಳದಲ್ಲಿ ಎರಡು ದಿನದ ಹಿಂದೆ ವ್ಯಕ್ತಿಯೊಬ್ಬರ ಪ್ರಾಣ ಕಳೆದುಕೊಂಡಿದ್ದಾರೆ.</p>.<p>ಆನೇಕಲ್-ಹೊಸೂರು ಮುಖ್ಯ ರಸ್ತೆಯಾಗಿದ್ದು ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಇಲ್ಲಿ ಸಂಚರಿಸುತ್ತವೆ. ತಮಿಳುನಾಡಿಗೆ ಸಂಪರ್ಕ ರಸ್ತೆಯಾಗಿರುವುದರಿಂದ ದಿನದ 24 ಗಂಟೆಯೂ ವಾಹನ ಸಂಚಾರದಿಂದ ಕೂಡಿರುತ್ತದೆ.</p>.<p>ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆಯಾಗಿಸಿ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಅಂದಾಜು ಎರಡು ಕಿ.ಮೀ ವರೆಗೆ ರಸ್ತೆ ವಿಭಜಕ ಇದ್ದರೂ, ಯಾವುದೇ ಸೂಚನೆ ಫಲಕ ಹಾಗೂ ರೆಡಿಯಂ ಅಳವಡಿಸದ ಕಾರಣ ವಾಹನಗಳು ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿದೆ.</p>.<p>ಇಲ್ಲಿ ನಡೆಯುವ ಅಪಘಾತಗಳ ಬಗ್ಗೆ ಪ್ರಕರಣ ದಾಖಲಾಗದ ಕಾರಣ ಪೊಲೀಸ್ ಠಾಣೆಯಲ್ಲಿ ಸ್ಪಷ್ಟ ಅಂಕಿ ಅಂಶ ಇಲ್ಲ. ಸಾರ್ವಜನಿಕರು ಹೇಳುವಂತೆ, ಕಳೆದ ಮೂರು ತಿಂಗಳಿನಲ್ಲಿ 20ಕ್ಕೂ ಹೆಚ್ಚು ಅಪಘಾತ ಸಂಭವಿಸಿದೆ. ಅಂದಾಜು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಅವೈಜ್ಞಾನಿಕ ವಿಭಜಕಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಆದರೂ ಸಂಬಂಧಿಸಿ ಅಧಿಕಾರಿಗಳು ಎಚ್ಚರ ವಹಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ರಸ್ತೆ ವಿಭಜಕಗಳು ರಸ್ತೆಯ ಎರಡು ಬದಿಗಳಲ್ಲಿ ಸಂಚರಿಸುವವರಿಗೆ ಕಾಣಿಸುವಂತಿರಬೇಕು. ಆದರೆ ಈ ಮುಖ್ಯ ರಸ್ತೆಯಲ್ಲಿ ಸಂಚರಿಸುವವರೆಗೆ ವಿಭಜಕ ಕಾಣುವುದಿಲ್ಲ. ರಸ್ತೆಯ ಎರಡು ಕಿ.ಮೀ. ಅಂತರದಲ್ಲಿ ಹಾಕಲಾಗಿದ್ದ ವಿಭಜಕದವನ್ನು ಕಿತ್ತು ಅಂಗಡಿ, ಹೋಟೆಲ್, ಶಾಲೆ, ಮನೆಗಳಿಗೆ ದಾರಿ ಮಾಡಲಾಗಿದೆ. ಈ ಪ್ರಮಾದ 25–30 ಕಡೆ ಆಗಿದೆ. ಇಲ್ಲಿ ಬೈಕ್ಗಳು ರಸ್ತೆ ಕ್ರಾಸ್ ಮಾಡುವಾಗ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ವಾಹನ ಸವಾರರು.</p>.<p>ಅವೈಜ್ಞಾನಿಕ ರಸ್ತೆ ವಿಭಜಕದಿಂದ ಪ್ರಾಣವೇ ಹೊದರೂ ಅಧಿಕಾರಿಗಳು ನಿದ್ದೆಯಿಂದ ಎದ್ದಿಲ್ಲ. ಹಾಗಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕ ವಿಭಜಕಗಳಿಗೆ ಮುಕ್ತಿ ನೀಡಬೇಕು. ಅವಶ್ಯಕತೆ ಇರುವೆಡೆ ಮಾತ್ರ ವಿಭಜಕ ನಿರ್ಮಿಸಬೇಕು. ರಸ್ತೆ ವಿಭಜಕಗಳಿಗೆ ರೇಡಿಯಂ ಅಳವಡಿಸಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-15-943276365</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>