ಕಾರ್ಯಕ್ರಮದ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶೋಷಣೆ ಮತ್ತು ಅಸಮಾನತೆ ವಿರುದ್ಧ ಹೋರಾಟ ಮಾಡಿ 500ಮಂದಿ ಮಹರ್ ಸೈನಿಕರು ಜಯಗಳಿಸಿದ ನೆನಪಿನ ಭೀಮಾಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ಯುವಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲ್ಲೂಕಿನ ಆರು ಕಡೆ ವೇದಿಕೆ ವತಿಯಿಂದ ಅಂಬೇಡ್ಕರ್ ಚಿಂತನಾ ಶಾಲೆ ಪ್ರಾರಂಭಿಸಲಾಗುವುದು. ಗೌರೇನಹಳ್ಳಿ, ಸುರಗಜಕ್ಕನಹಳ್ಳಿ, ಸೊಪ್ಪಹಳ್ಳಿ, ರಾಜಾಪುರ, ಹಿನ್ನಕ್ಕಿ,ನಾಗನಾಯಕನಹಳ್ಳಿಗಳಲ್ಲಿ ಚಿಂತನಾ ಶಾಲೆ ತೆರೆದು ಅಂಬೇಡ್ಕರ್ ವಿಚಾರಗಳ ಬಗ್ಗೆ ಚರ್ಚೆ, ಸಂವಾದ ನಡೆಸಲಾಗುವುದು ಎಂದರು.