<p>ಆನೇಕಲ್ : ತಿಗಳರ ಬೀದಿಯ ಪಾರ್ಥಸಾರಥಿ ಭಜನೆ ಮನೆ ದ್ರೌಪತಮ್ಮ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಸಂತೆ ಬೀದಿಯ ದೇವಾಲಯದಲ್ಲಿ ಭಾನುವಾರ ಭಕ್ತರು ‘ಪೊಂಗಲ್ ಸೇವೆ’ಯಲ್ಲಿ ಪಾಲ್ಗೊಂಡು ಪ್ರಸಾದ ಹಂಚುವ ಮೂಲಕ ಭಕ್ತಿ ಸಮರ್ಪಿಸಿದರು.</p>.<p>ಕರಗ ಮಹೋತ್ಸವದಲ್ಲಿ ಹಲವಾರು ಧಾರ್ಮಿಕ ಆಚರಣೆ ನಡೆಸಲಾಗುತ್ತದೆ. ವಹ್ನಿಕುಲ ಕುಟುಂಬಗಳು ದೇವಾಲಯದ ಸುತ್ತಲೂ ಇಟ್ಟಿಗೆ ಒಲೆ ಇಟ್ಟು ಪೊಂಗಲ್ ಸಿದ್ದಪಡಿಸಿ ಸ್ವಾಮಿಗೆ ನೈವೇದ್ಯ ಮಾಡಿ ಭಕ್ತರಿಗೆ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.</p>.<p>ಒಣಕರಗದ ದಿನದಂದು ಸಂಜೆ 5ರ ವೇಳೆಗೆ ನೂರಾರು ಮಹಿಳೆಯರು ಪೊಂಗಲ್ ಸಿದ್ದಪಡಿಸಲು ದೇವಾಲಯದ ಆವರಣದಲ್ಲಿ ಜಮಾವಣೆಗೊಂಡಿದ್ದರು. ಪ್ರತಿ ಕುಟುಂಬದವರು ಸಿದ್ದಪಡಿಸಿದ ಪೊಂಗಲ್ನ್ನು ಒಗ್ಗೂಡಿಸಿ ಪ್ರಸಾದವೆಂದು ಎಲ್ಲರಿಗೂ ಹಂಚಲಾಯಿತು.</p>.<p>ಭಜನೆಮನೆಯ ಸುತ್ತಲೂ 50-60ಕ್ಕೂ ಹೆಚ್ಚು ಒಲೆಗಳನ್ನು ಇಟ್ಟು ಏಕಕಾಲದಲ್ಲಿ ಸಿಹಿ ಪೊಂಗಲ್ ಸಿದ್ದಪಡಿಸಿ ಭಕ್ತರಿಗೆ ಹಂಚಿದ ದೃಶ್ಯ ಗಮನ ಸೆಳೆಯಿತು.</p>.<p>ಕರಗ ಆಚರಣೆಯ ಪ್ರಯುಕ್ತ ಕಳೆದ ಏಳು ದಿನಗಳಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೃಷ್ಣ, ಧರ್ಮರಾಯ ದ್ರೌಪದಮ್ಮ ದೇವಿ ಸೇರಿದಂತೆ ಪಾಂಡವರ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-15-378819559</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್ : ತಿಗಳರ ಬೀದಿಯ ಪಾರ್ಥಸಾರಥಿ ಭಜನೆ ಮನೆ ದ್ರೌಪತಮ್ಮ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಸಂತೆ ಬೀದಿಯ ದೇವಾಲಯದಲ್ಲಿ ಭಾನುವಾರ ಭಕ್ತರು ‘ಪೊಂಗಲ್ ಸೇವೆ’ಯಲ್ಲಿ ಪಾಲ್ಗೊಂಡು ಪ್ರಸಾದ ಹಂಚುವ ಮೂಲಕ ಭಕ್ತಿ ಸಮರ್ಪಿಸಿದರು.</p>.<p>ಕರಗ ಮಹೋತ್ಸವದಲ್ಲಿ ಹಲವಾರು ಧಾರ್ಮಿಕ ಆಚರಣೆ ನಡೆಸಲಾಗುತ್ತದೆ. ವಹ್ನಿಕುಲ ಕುಟುಂಬಗಳು ದೇವಾಲಯದ ಸುತ್ತಲೂ ಇಟ್ಟಿಗೆ ಒಲೆ ಇಟ್ಟು ಪೊಂಗಲ್ ಸಿದ್ದಪಡಿಸಿ ಸ್ವಾಮಿಗೆ ನೈವೇದ್ಯ ಮಾಡಿ ಭಕ್ತರಿಗೆ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.</p>.<p>ಒಣಕರಗದ ದಿನದಂದು ಸಂಜೆ 5ರ ವೇಳೆಗೆ ನೂರಾರು ಮಹಿಳೆಯರು ಪೊಂಗಲ್ ಸಿದ್ದಪಡಿಸಲು ದೇವಾಲಯದ ಆವರಣದಲ್ಲಿ ಜಮಾವಣೆಗೊಂಡಿದ್ದರು. ಪ್ರತಿ ಕುಟುಂಬದವರು ಸಿದ್ದಪಡಿಸಿದ ಪೊಂಗಲ್ನ್ನು ಒಗ್ಗೂಡಿಸಿ ಪ್ರಸಾದವೆಂದು ಎಲ್ಲರಿಗೂ ಹಂಚಲಾಯಿತು.</p>.<p>ಭಜನೆಮನೆಯ ಸುತ್ತಲೂ 50-60ಕ್ಕೂ ಹೆಚ್ಚು ಒಲೆಗಳನ್ನು ಇಟ್ಟು ಏಕಕಾಲದಲ್ಲಿ ಸಿಹಿ ಪೊಂಗಲ್ ಸಿದ್ದಪಡಿಸಿ ಭಕ್ತರಿಗೆ ಹಂಚಿದ ದೃಶ್ಯ ಗಮನ ಸೆಳೆಯಿತು.</p>.<p>ಕರಗ ಆಚರಣೆಯ ಪ್ರಯುಕ್ತ ಕಳೆದ ಏಳು ದಿನಗಳಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೃಷ್ಣ, ಧರ್ಮರಾಯ ದ್ರೌಪದಮ್ಮ ದೇವಿ ಸೇರಿದಂತೆ ಪಾಂಡವರ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-15-378819559</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>