<p><strong>ಆನೇಕಲ್: </strong>ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಜನರು ಧೈರ್ಯವಾಗಿ ಓಡಾಡಲು ಹೆದುರುತ್ತಿದ್ದಾರೆ.</p>.<p>ಪಟ್ಟಣದಲ್ಲಿ ದಿನೇ ದಿನೇ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಪಟ್ಟಣದ ಬಹುತೇಕ ಎಲ್ಲಾ ವಾರ್ಡ್ಗಳಲ್ಲಿ ಬೀದಿನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ಭೀತಿ ಆವರಿಸಿದೆ. ಬೀದಿನಾಯಿಗಳ ಕಾಟದಿಂದ ಹಿರಿಯ ನಾಗರಿಕರು, ವಾಹನ ಸವಾರರು, ಶಾಲಾ ಮಕ್ಕಳು ರಸ್ತೆಗಳಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.</p>.<p>ಆನೇಕಲ್ ಪುರಸಭೆ ವ್ಯಾಪ್ತಿಯ ಮರಿಯಪ್ಪ ಬಡಾವಣೆ, ಕೋರ್ಟ್ ಹಿಂಭಾಗ, ಚರ್ಚ್ ರಸ್ತೆ, ಥಳೀ ರಸ್ತೆ ಸೇರಿಂತೆ ಹಲವು ವಾರ್ಡ್ಗಳಲ್ಲಿ ಬೀದಿನಾಯಿಗಳ ಹಾವಳಿ ಇದೆ. </p>.<p>ವಿದ್ಯಾರ್ಥಿಗಳು ಮತ್ತು ಚಿಕ್ಕ ಮಕ್ಕಳು ರಸ್ತೆಯಲ್ಲಿ ಓಡಾಡಬೇಕಾದರೆ ಅವರ ಪೋಷಕರೊಂದಿಗೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ ಮತ್ತು ತಡರಾತ್ರಿಯ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಶ್ವಾನಗಳ ಕಾಟ ತಪ್ಪಿದ್ದಲ್ಲ ಎನ್ನುತ್ತಾರೆ ಮರಿಯಪ್ಪ ಬಡಾವಣೆಯ ನಿವಾಸಿ ಚಂದ್ರಪ್ಪ.</p>.<p>ನಾಯಿಗಳಿಂದ ಆಗುತ್ತಿರುವ ತೊಂದರೆ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಭಯ ಮತ್ತು ಆತಂಕದಿಂದ ರಸ್ತೆಯಲ್ಲಿ ಓಡಾಡಬೇಕಾಗಿದೆ ಎಂದು ಆನೇಕಲ್ನ ನಿವಾಸಿ ದೇವರಾಜು ಒತ್ತಾಯಿಸಿದರು.</p>.<p>ಆನೇಕಲ್ ತಾಲ್ಲೂಕಿನ ಗ್ರಾಮಾಂತರ ವ್ಯಾಪ್ತಿಯಲ್ಲಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಶೇ 40 ರಷ್ಟು ಹೆಚ್ಚಾಗಿದೆ. ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ವರದಿಯಾಗಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು. ಕಳೆದ ವರ್ಷ ಆನೇಕಲ್ನ ಪಂಪ್ಹೌಸ್ ರಸ್ತೆಯಲ್ಲಿ ನಾಯಿಯೊಂದು ಮಗು ಮತ್ತು ಏಳು ಮಂದಿ ಸಾರ್ವಜನಿಕರನ್ನು ಕಚ್ಚಿದ್ದು ವರದಿಯಾಗಿತ್ತು. ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಬೇಕು ಎಂದು ವಿದ್ಯಾರ್ಥಿ ಮನು ಒತ್ತಾಯಿಸಿದ್ದಾರೆ.</p>.<p>ಪುರಸಭೆ ಮತ್ತು ಗ್ರಾಮ ಪಂಚಾಯತಿಗಳು ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ನಿರಂತರವಾಗಿ ನಡೆಯುತ್ತಿಲ್ಲ. ರೇಬಿಸ್ ರೋಗ ಹರಡದಂತೆ ತಡೆಯಲು ಬೀದಿ ನಾಯಿಗಳಿಗೆ ನೀಡಬೇಕಾದ ಲಸಿಕಾ ಅಭಿಯಾನವು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬ ಆರೋಪವು ಇದೆ.</p>.<div><blockquote>ಬೀದಿನಾಯಿಗಳ ತೊಂದರೆ ತಪ್ಪಿಸುವ ಆನೇಕಲ್ ಪುರಸಭೆ ಎಲ್ಲಾ ಕ್ರಮಗಳನ್ನು ವಹಿಸಿದೆ. ಶೀಘ್ರದಲ್ಲಿ ಅಭಿಯಾನ ನಡೆಸಿ ಸಂತಾನ ಹರಣ ಚಿಕಿತ್ಸೆ ಸೇರಿದಂತೆ ವಿವಿಧ ಕ್ರಮಗಳನ್ನು ವಹಿಸಲಾಗುವುದು. </blockquote><span class="attribution">ಕುಮಾರ್ ಮುಖ್ಯಾಧಿಕಾರಿ ಆನೇಕಲ್ ಪುರಸಭೆ</span></div>.<div><blockquote>ನಾಯಿಗಳ ಕಾಟದಿಂದಾಗಿ ವಿದ್ಯಾರ್ಥಿಗಳು ಪುಟಾಣಿಗಳು ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ರಸ್ತೆಗಳಲ್ಲಿ ಓಡಾಡಲು ಸಹ ತೊಂದರೆಯಾಗಿದೆ </blockquote><span class="attribution">ವರುಣ್ ಆನೇಕಲ್ ನಿವಾಸಿ</span></div>.<p><strong>ಎಲ್ಲೆಂದರಲ್ಲಿ ಕಸ ಬೀಸಾಡುವುದೇ ಕಾರಣ?</strong></p><p> ಕಸದಿಂದ ಹೆಚ್ಚಾದ ಬೀದಿ ನಾಯಿಗಳು: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದರಿಂದ ನಾಯಿಗಳ ಕಾಟ ಹೆಚ್ಚಾಗಿದೆ. ಕಸ ಸುರಿಯುವ ರಸ್ತೆ ಬದಿ ಹಾಗೂ ಮಾಂಸದ ಅಂಗಡಿಗಳ ಮುಂದಿನ ಜಾಗ ನಾಯಿ ಪಡೆ ಕಾರ್ಯಸ್ಥಾನವಾಗಿ ಪರಿಣಮಿಸಿದೆ. ಕಸದಲ್ಲಿ ಆಹಾರ ಮತ್ತು ಮಾಂಸ ತ್ಯಾಜ್ಯ ತಿನ್ನಲು ನಾಯಿಗಳ ಕಚ್ಚಾಡುತ್ತಿರುತ್ತವೆ. ಈ ಪ್ರದೇಶದಲ್ಲಿ ಜನರು ಓಡಾಡುವುದು ಕಷ್ಟವಾಗಿದೆ. ಕೆಲವೊಮ್ಮೆ ನಡುರಸ್ತೆಯಲ್ಲೇ ಮಲಗುವುದು ಅಥವಾ ವಾಹನಗಳ ಹಿಂದೆ ಅಟ್ಟಿಸಿಕೊಂಡು ಬರುವುದರಿಂದ ಅಪಘಾತಗಳು ಸಂಭವಿಸಿದ ಉದಾಹರಣೆಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಜನರು ಧೈರ್ಯವಾಗಿ ಓಡಾಡಲು ಹೆದುರುತ್ತಿದ್ದಾರೆ.</p>.<p>ಪಟ್ಟಣದಲ್ಲಿ ದಿನೇ ದಿನೇ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಪಟ್ಟಣದ ಬಹುತೇಕ ಎಲ್ಲಾ ವಾರ್ಡ್ಗಳಲ್ಲಿ ಬೀದಿನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ಭೀತಿ ಆವರಿಸಿದೆ. ಬೀದಿನಾಯಿಗಳ ಕಾಟದಿಂದ ಹಿರಿಯ ನಾಗರಿಕರು, ವಾಹನ ಸವಾರರು, ಶಾಲಾ ಮಕ್ಕಳು ರಸ್ತೆಗಳಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.</p>.<p>ಆನೇಕಲ್ ಪುರಸಭೆ ವ್ಯಾಪ್ತಿಯ ಮರಿಯಪ್ಪ ಬಡಾವಣೆ, ಕೋರ್ಟ್ ಹಿಂಭಾಗ, ಚರ್ಚ್ ರಸ್ತೆ, ಥಳೀ ರಸ್ತೆ ಸೇರಿಂತೆ ಹಲವು ವಾರ್ಡ್ಗಳಲ್ಲಿ ಬೀದಿನಾಯಿಗಳ ಹಾವಳಿ ಇದೆ. </p>.<p>ವಿದ್ಯಾರ್ಥಿಗಳು ಮತ್ತು ಚಿಕ್ಕ ಮಕ್ಕಳು ರಸ್ತೆಯಲ್ಲಿ ಓಡಾಡಬೇಕಾದರೆ ಅವರ ಪೋಷಕರೊಂದಿಗೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ ಮತ್ತು ತಡರಾತ್ರಿಯ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಶ್ವಾನಗಳ ಕಾಟ ತಪ್ಪಿದ್ದಲ್ಲ ಎನ್ನುತ್ತಾರೆ ಮರಿಯಪ್ಪ ಬಡಾವಣೆಯ ನಿವಾಸಿ ಚಂದ್ರಪ್ಪ.</p>.<p>ನಾಯಿಗಳಿಂದ ಆಗುತ್ತಿರುವ ತೊಂದರೆ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಭಯ ಮತ್ತು ಆತಂಕದಿಂದ ರಸ್ತೆಯಲ್ಲಿ ಓಡಾಡಬೇಕಾಗಿದೆ ಎಂದು ಆನೇಕಲ್ನ ನಿವಾಸಿ ದೇವರಾಜು ಒತ್ತಾಯಿಸಿದರು.</p>.<p>ಆನೇಕಲ್ ತಾಲ್ಲೂಕಿನ ಗ್ರಾಮಾಂತರ ವ್ಯಾಪ್ತಿಯಲ್ಲಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಶೇ 40 ರಷ್ಟು ಹೆಚ್ಚಾಗಿದೆ. ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ವರದಿಯಾಗಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು. ಕಳೆದ ವರ್ಷ ಆನೇಕಲ್ನ ಪಂಪ್ಹೌಸ್ ರಸ್ತೆಯಲ್ಲಿ ನಾಯಿಯೊಂದು ಮಗು ಮತ್ತು ಏಳು ಮಂದಿ ಸಾರ್ವಜನಿಕರನ್ನು ಕಚ್ಚಿದ್ದು ವರದಿಯಾಗಿತ್ತು. ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಬೇಕು ಎಂದು ವಿದ್ಯಾರ್ಥಿ ಮನು ಒತ್ತಾಯಿಸಿದ್ದಾರೆ.</p>.<p>ಪುರಸಭೆ ಮತ್ತು ಗ್ರಾಮ ಪಂಚಾಯತಿಗಳು ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ನಿರಂತರವಾಗಿ ನಡೆಯುತ್ತಿಲ್ಲ. ರೇಬಿಸ್ ರೋಗ ಹರಡದಂತೆ ತಡೆಯಲು ಬೀದಿ ನಾಯಿಗಳಿಗೆ ನೀಡಬೇಕಾದ ಲಸಿಕಾ ಅಭಿಯಾನವು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬ ಆರೋಪವು ಇದೆ.</p>.<div><blockquote>ಬೀದಿನಾಯಿಗಳ ತೊಂದರೆ ತಪ್ಪಿಸುವ ಆನೇಕಲ್ ಪುರಸಭೆ ಎಲ್ಲಾ ಕ್ರಮಗಳನ್ನು ವಹಿಸಿದೆ. ಶೀಘ್ರದಲ್ಲಿ ಅಭಿಯಾನ ನಡೆಸಿ ಸಂತಾನ ಹರಣ ಚಿಕಿತ್ಸೆ ಸೇರಿದಂತೆ ವಿವಿಧ ಕ್ರಮಗಳನ್ನು ವಹಿಸಲಾಗುವುದು. </blockquote><span class="attribution">ಕುಮಾರ್ ಮುಖ್ಯಾಧಿಕಾರಿ ಆನೇಕಲ್ ಪುರಸಭೆ</span></div>.<div><blockquote>ನಾಯಿಗಳ ಕಾಟದಿಂದಾಗಿ ವಿದ್ಯಾರ್ಥಿಗಳು ಪುಟಾಣಿಗಳು ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ರಸ್ತೆಗಳಲ್ಲಿ ಓಡಾಡಲು ಸಹ ತೊಂದರೆಯಾಗಿದೆ </blockquote><span class="attribution">ವರುಣ್ ಆನೇಕಲ್ ನಿವಾಸಿ</span></div>.<p><strong>ಎಲ್ಲೆಂದರಲ್ಲಿ ಕಸ ಬೀಸಾಡುವುದೇ ಕಾರಣ?</strong></p><p> ಕಸದಿಂದ ಹೆಚ್ಚಾದ ಬೀದಿ ನಾಯಿಗಳು: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದರಿಂದ ನಾಯಿಗಳ ಕಾಟ ಹೆಚ್ಚಾಗಿದೆ. ಕಸ ಸುರಿಯುವ ರಸ್ತೆ ಬದಿ ಹಾಗೂ ಮಾಂಸದ ಅಂಗಡಿಗಳ ಮುಂದಿನ ಜಾಗ ನಾಯಿ ಪಡೆ ಕಾರ್ಯಸ್ಥಾನವಾಗಿ ಪರಿಣಮಿಸಿದೆ. ಕಸದಲ್ಲಿ ಆಹಾರ ಮತ್ತು ಮಾಂಸ ತ್ಯಾಜ್ಯ ತಿನ್ನಲು ನಾಯಿಗಳ ಕಚ್ಚಾಡುತ್ತಿರುತ್ತವೆ. ಈ ಪ್ರದೇಶದಲ್ಲಿ ಜನರು ಓಡಾಡುವುದು ಕಷ್ಟವಾಗಿದೆ. ಕೆಲವೊಮ್ಮೆ ನಡುರಸ್ತೆಯಲ್ಲೇ ಮಲಗುವುದು ಅಥವಾ ವಾಹನಗಳ ಹಿಂದೆ ಅಟ್ಟಿಸಿಕೊಂಡು ಬರುವುದರಿಂದ ಅಪಘಾತಗಳು ಸಂಭವಿಸಿದ ಉದಾಹರಣೆಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>