ದೊಡ್ಡಕೆರೆಯ ಗೌರೇನಹಳ್ಳಿ ಹಾಗೂ ಬಾಡರಹಳ್ಳಿ ಕಡೆ ಕಸದ ರಾಶಿ ತಂದು ಸುರಿಯಲಾಗುತ್ತಿದೆ. ಒಂದೆಡೆ ಚರಂಡಿ ನೀರು, ಮತ್ತೊಂದೆಡೆ ಪಟ್ಟಣದ ಕಸದಿಂದಾಗಿ ಗಬ್ಬು ನಾರುತ್ತಿದೆ. ಕೆರೆ ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಬೇಕಾಗಿದೆ. ಕೊಳಚೆ ನೀರು ಕೆರೆಗೆ ಬಾರದಂತೆ ಕೂಡಲೇ ತ್ಯಾಜ್ಯ ಸಂಸ್ಕರಣ ಘಟಕ (ಎಸ್ಟಿಪಿ) ನಿರ್ಮಿಸಬೇಕು ಹಾಗೂ ಕೆರೆಯಲ್ಲಿ ಕಸ ಹಾಕುವುದನ್ನು ನಿಲ್ಲಿಸಲು ಸ್ಥಳೀಯರ ಆಗ್ರಹವಾಗಿದೆ.