ದೇವನಹಳ್ಳಿ: ಬೈಕ್ ಕಳ್ಳತನ ಸೇರಿದಂತೆ ಹಲವು ಅಪರಾಧ ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಆರೋಪಿಗಳನ್ನು ದೇವನಹಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಲಗಿರಿಯ ಗುಂಡಂಗುರ್ಕಿ ಗ್ರಾಮದ ಶ್ರೀಧರ(23) ಮತ್ತು ಚನ್ನರಾಯಪಟ್ಟಣದ ನಿವಾಸಿ ಅರುಣಕುಮಾರ್ ಅಲಿಯಾಸ್ ಕಾಡ(30) ಬಂಧಿತ ಆರೋಪಿಗಳು. ಶ್ರೀಧರ ವಿರುದ್ಧ 13 ಅಪರಾಧ ಹಾಗೂ ಒಂದು ಕೊಲೆ ಪ್ರಕರಣಗಳು ದಾಖಲಾಗಿದ್ದರೆ, ಅರುಣಕುಮಾರ್ ಅಲಿಯಾಸ್ ಕಾಡ ವಿರುದ್ಧ 12 ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವನಹಳ್ಳಿ, ಯಲಹಂಕ, ಬೆಂಗಳೂರು ನಗರ, ತಮಿಳುನಾಡು ಸೇರಿದಂತೆ ಇತರ ಕಡೆಗಳಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಈ ಇಬ್ಬರು ಆರೋಪಿಗಳು ಭಾಗಿಯಾಗಿದ್ದರು.