ಪ್ರತಿ ತಿಂಗಳು 2ನೇ ಭಾನುವಾರ ದಲಿತರ ಕುಂದು –ಕೊರತೆ ಸಭೆ ನಡೆಯುತ್ತದೆ. 34 ಇಲಾಖೆಗಳ ಬಗ್ಗೆ ಜನರು ಮಾಹಿತಿ ಇಟ್ಟುಕೊಳ್ಳಬೇಕು. ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಹೊಣೆಗಾರಿಕೆ ಜನರ ಮೇಲೂ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಅಪರಾಧ ತಡೆಗಟ್ಟಬೇಕು. ಜೂಜಾಟ, ಗಾಂಜಾ ಸೇವನೆ, ಅಕ್ರಮ ಮದ್ಯಮಾರಾಟ, ಮಟ್ಕಾ, ಹುಕ್ಕಾ, ಅನಧಿಕೃತ ಕ್ಲಬ್ ಸೇರಿದಂತೆ ಸಮಾಜಕ್ಕೆ ಮಾರಕವಾದ ಎಲ್ಲ ರೀತಿಯ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.